ವಿಷಯಗಳ ಬೆಳವಣಿಗೆಗೆ ವೇದಿಕೆಗಳ ಪಾತ್ರ ಮುಖ್ಯ

ಸಂಜೆವಾಣಿ ವಾರ್ತೆ

 *ದಾವಣಗೆರೆ.ಆ.೮;  ವಿಷಯಗಳು ಸೃಜನಾತ್ಮಕವಾಗಿ ಬೆಳವಣಿಗೆಯನ್ನು ಕಾಣುತ್ತಿದೆ ಎಂದರೆ ಅದರಲ್ಲಿ ಆ ವಿಷಯಗಳ ಸಂಬಂಧಪಟ್ಟ ವೇದಿಕೆಗಳ ಪಾತ್ರ ಬಹುಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ  ದಾವಣಗೆರೆ ವಿಶ್ವವಿದ್ಯಾನಿಲಯ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಅಧ್ಯಾಪಕರ ವೇದಿಕೆಯು  ರಚನಾತ್ಮಕವಾಗಿ ಚಟುವಟಿಕೆಯಿಂದ ಕೆಲಸ ನಿರ್ವಹಿಸುತ್ತಿದೆ ಎಂದು  ದಾವಣಗೆರೆ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ ಅನಿತಾ ಹೆಚ್ ಎಸ್ ರವರು ಅಭಿಪ್ರಾಯಪಟ್ಟರು.ಅವರು ಇಂದು ವಿಶ್ವವಿದ್ಯಾನಿಲಯ ಎಂಬಿಎ ಸಭಾಂಗಣದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಸದಸ್ಯರ  ಸಭೆಯಲ್ಲಿ ಮಾತನಾಡಿದರು.ರಾಷ್ಟ್ರೀಯ ಶಿಕ್ಷಣ ನಿತ್ಯ ಜಾರಿಯಾಗಿದ್ದರಿಂದ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಗಳ ಜೊತೆಗೆ ವೇದಿಕೆಯ ಪದಾಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು ವಿದ್ಯಾರ್ಥಿ ಗೋಸ್ಕರ ಅಧ್ಯಾಪಕರಿಗೋಸ್ಕರ ಮಾಡಬೇಕಾದ ಕೆಲಸಗಳನ್ನು ಮಾಡುತ್ತ ಬಂದಿರುತ್ತಾರೆ ಅವರ ಸೇವೆ ಹೀಗೆ ನಿರಂತರವಾಗಿರಲಿ ಎಂದು ಹೇಳಿದರು.ವೇದಿಕೆಯು ವಿಶ್ವವಿದ್ಯಾನಿಲಯ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತದೆ ವೇದಿಕೆಗಳಿಂದ ವಿಧ್ಯಾರ್ಥಿಗಳಿಗೆ ಅನುಕೂಲವಾಗುವ ಯಾವುದೇ ಕಾರ್ಯಕ್ರಮಗಳಾಗಲಿ ಹಾಗೂ ಅಧ್ಯಾಪಕರಿಗೆ ಬೇಕಾಗುವ ಯಾವುದೇ ಮಾರ್ಗದರ್ಶನವಾಗಲಿ, ಸಿಗುವಂತಾಗಲಿ ಆಗ ವೇದಿಕೆಯು ಬೆಳೆಯುತ್ತದೆ ಎಂದು ಹೇಳಿದರು.ವೇದಿಕೆ ಕಾರ್ಯದರ್ಶಿಯಾದ ವೆಂಕಟೇಶ್ ಬಾಬುರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನಮ್ಮ ವೇದಿಕೆಯು ವಿಶ್ವವಿದ್ಯಾನಿಲಯ ದಲ್ಲಿ ತುಂಬಾ ದೊಡ್ಡ ವೇದಿಕೆಯಾಗಿದೆ ವೇದಿಕೆಯ ವತಿಯಿಂದ ಅಧ್ಯಾಪಕರ ಬೋಧನೆಗೆ ಅನುಕೂಲವಾಗುವಂತ ಕಾರ್ಯಗಾರಗಳನ್ನು ಮಾಡುತ್ತಾ ಬಂದಿರುತ್ತದೆ ಎಂದು ಹೇಳಿದರು.ನಮ್ಮ ವೇದಿಕೆಯು ಒಂದು ಮಾದರಿ ವೇದಿಕೆಯಾಗುವಲ್ಲಿ ಎಲ್ಲಾ ಪದಾಧಿಕಾರಿಗಳು  ಶ್ರಮಿಸುತ್ತಿದ್ದಾರೆ ಹೀಗೆ ಮುಂದೆ ಉತ್ತಮ ವೇದಿಕೆಯಾಗಿ ಬೆಳೆಯುವ ಮಹತ್ತರವಾದ ಗುರಿಯನ್ನು ವೇದಿಕೆಯು ಹೊಂದಿರುತ್ತದೆ ಎಲ್ಲಾ ಆಧ್ಯಾಪಕರು ವೇದಿಕೆ ಕಾರ್ಯಕ್ರಮದಲ್ಲಿ ಸದಾ ಚಟುವಟಿಕೆಯಿಂದ ಭಾಗವಹಿಸಿದಾಗ ಅದು ಸಾಧ್ಯವಾಗುತ್ತದೆ ಎಂದು ಹೇಳಿದರು. ಅಧ್ಯಾಪಕರೆಲ್ಲ ಕಾಲೇಜು ಪಾಠ ಎಂದು ಸೀಮಿತ ರಾಗದೆ ಬೇರೆ ಬೇರೆ ಕಡೆ ನಡೆಯುವಂತಹ ಕಾರ್ಯಗಾರಗಳಲ್ಲಿ ಭಾಗವಹಿಸಿದಾಗ ಭೌತಿಕ ಜ್ಞಾನದ ಮಟ್ಟ ಹೆಚ್ಚುವಲ್ಲಿ ಅನುಕೂಲವಾಗುತ್ತದೆ ಹಾಗಾಗಿ ಎಲ್ಲಾ  ಮಿತ್ರರು ವೇದಿಕೆಯ ವತಿಯಿಂದ ವಿಶ್ವವಿದ್ಯಾನಿಲಯ ವತಿಯಿಂದ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜ್ಞಾನ ವೃದ್ಧಿ ಮಾಡಿಕೊಳ್ಳಬೇಕು. ಎಂದು ಹೇಳಿದರು.ವಾಣಿಜ್ಯ ನಿಕಾಯ್ದ ಡೀನ್ ರಾಧಾ ಪ್ರೊ ಲಕ್ಷ್ಮಣ್ ರವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಪರೀಕ್ಷೆ ಮಾಡಿ ಒದಗಿಸುವ ಶಿಕ್ಷಣd ಜೊತೆಗೆ ಪರೀಕ್ಷೆ ನೀಡಿ ಜೀವನದ ಶಿಕ್ಷಣವನ್ನು ಕಲಿಸುವತ್ತ  ಶಿಕ್ಷಕರು ಚಿಂತಿಸಬೇಕು ಎಂದು ಹೇಳಿದರು.