ವಿಶ್ವ ತಂಬಾಕು ನಿಷೇಧ ದಿನ…..

ಪ್ರತಿವರ್ಷ ಮೇ 31 ರಂದು ವಿಶ್ವ ತಂಬಾಕು ನಿಷೇಧ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟçಗಳು 1987 ರಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ವಿಶ್ವ ತಂಬಾಕು ನಿಷೇಧ ದಿನ ಆಚರಿಸಬೇಕೆಂದು ತೀರ್ಮಾನಿಸಿತು. ಅಧಿಸೂಚನೆ: ಡಬ್ಲೂö್ಯ.ಎಚ್.ಓ. 40.38;1987 ಪ್ರಕಾರÀ ಏಪ್ರಿಲ್ 7, 1988 ರಂದು ಧೂಮ್ರಪಾನ ನಿಷೇಧ ದಿನವನ್ನು ಆಚರಿಸಲಾಯಿತು. ತದನಂತರ ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯದ ದೃಷ್ಟಿಯಿಂದ ತಂಬಾಕು ನಿಷೇಧದ ಬಗ್ಗೆ ಚಿಂತನೆಯನ್ನು ಕೈಗೊಂಡಿತು. ಭಾರತದಲ್ಲಿ ಕ್ಯಾನ್ಸರ್ ಆರೋಗ್ಯ ಸಂಸ್ಥೆ, ರೆಡ್‌ಕ್ರಾಸ್ ಸಂಸ್ಥೆ, ಸರ್ಕಾರೇತರ ಸಂಸ್ಥೆಗಳಾದ ಬ್ರಹ್ಮಾಕುಮಾರೀಸ್ ಮತ್ತು ಇತರೆ ಸಂಸ್ಥೆಗಳು ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಹಲವು ಕಾರ್ಯಕ್ರಮಗಳನ್ನು ಕೆಲವು ವರ್ಷಗಳಿಂದ ಮಾಡುತ್ತಾ ಬಂದಿವೆ. ತಂಬಾಕು ಸೇವನೆಯಿಂದ ಪ್ರತಿವರ್ಷ ವಿಶ್ವದಾದ್ಯಂತ 60 ಲಕ್ಷ ಜನರು ಮರಣ ಹೊಂದುತ್ತಾರೆ. ಭಾರತದಲ್ಲಿ ಪ್ರತಿ ಸೆಕೆಂಡಿಗೆ ಒಬ್ಬ ವ್ಯಕ್ತಿ, ಒಂದು ದಿನಕ್ಕೆ 3750 ಮತ್ತು ವರ್ಷದಲ್ಲಿ 13.5 ಲಕ್ಷ ಜನ ತಂಬಾಕು ವ್ಯಸನದಿಂದ ಸಾವನ್ನು ಅಪ್ಪುತ್ತಾರೆ. 90% ಬಾಯಿಯ ಕ್ಯಾನ್ಸರ್ ತಂಬಾಕಿನಿAದ ಬರುತ್ತದೆ. ಧೂಮ್ರಪಾನ ನಿಮ್ಮ ಆಯುಸ್ಸನ್ನು ಒಂದು ದಿನಕ್ಕೆ 11 ನಿಮಿಷ ಕಡಿಮೆ ಮಾಡುತಿದ್ದರೆ, 90% ಶ್ವಾಸಕೋಶದ ಕ್ಯಾನ್ಸರ್ ಧೂಮ್ರಪಾನದಿಂದ ಬರುತ್ತದೆ. ಇದರಿಂದ ಪ್ರತಿವರ್ಷ ವಿಶ್ವದಾದ್ಯಂತ 12 ಲಕ್ಷ ಜನ ಸಾಯುತ್ತಾರೆ.ಭಾರತ ದೇಶದಲ್ಲಿ ಮುಖ್ಯವಾಗಿ ಗುಜರಾತ್, ಮಹಾರಾಷ್ಟç, ಆಂಧ್ರಪ್ರದೇಶ, ಕರ್ನಾಟಕದಲ್ಲಿ ತಂಬಾಕು ಬೆಳೆಯಲಾಗುತ್ತದೆ. 300 ಮಿಲಿಯನ್ ತಂಬಾಕು ಆಂಧ್ರದಲ್ಲಿ ಬೆಳೆಯತ್ತಿದ್ದರೆ, ಕರ್ನಾಟಕದಲ್ಲಿ ಅತಿ ಹೆಚ್ಚು ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಬೆಳೆಯುತ್ತಾರೆ.ಧೂಮ್ರಪಾನ ಕೆಟ್ಟದ್ದು, ಆದರೆ ಧೂಮ್ರಪಾನಿಗಳು ಕೆಟ್ಟವರಲ್ಲ. 2023ರ ಧ್ಯೇಯವಾಕ್ಯ ‘ನಮಗೆ ಊಟ ಬೇಕು, ತಂಬಾಕು ಅಲ್ಲ.’ ತಂಬಾಕು ಅನೇಕ ಕಾಯಿಲೆಗಳ ಮೂಲ. ಗಂಟಲು, ಬಾಯಿ, ಶ್ವಾಸಕೋಶದ ಕ್ಯಾನ್ಸರ್ ತಂಬಾಕಿನಿAದ ಬರುತ್ತದೆ. ಸಿಗರೇಟ್ ತಮ್ಮ ಅಕ್ಕಪಕ್ಕದಲ್ಲಿರುವವರಿಗೆ ಹೆಚ್ಚಿನ ಹಾನಿಯನ್ನು ಮಾಡುತ್ತದೆ. ಆದ್ದರಿಂದ ಸರ್ಕಾರ ಮಾನವನ ಭವಿಷ್ಯದ ಬಗ್ಗೆ ಚಿಂತಿಸಿ ತಂಬಾಕು ನಿಷೇಧವನ್ನು ಮಾಡಿದೆ. ಅನೇಕ ಪ್ರಕಾರದ ಜಾಹೀರಾತುಗಳನ್ನು ನೀಡಿ ಮನುಷ್ಯರನ್ನು ಎಚ್ಚರಿಸಲು ಪ್ರಯತ್ನಿಸುತ್ತಿದೆ. ಗುಟಕ, ಪಾನ್‌ಪರಾಗ್, ಬೀಡಿ, ಸಿಗರೇಟು ಮುಂತಾದ ಪೊಟ್ಟಣಗಳ ಮೇಲೆ ತಂಬಾಕು ಅರೋಗ್ಯಕ್ಕೆ ಹಾನಿಕಾರಕ ಎಂದು ಪ್ರಕಟಿಸುವುದು ಕಡ್ಡಾಯವೆಂದು ಕಾನೂನು ಮಾಡಿದೆ. ಸಿನೆಮಾ, ನಾಟಕÀ, ಬಸ್ಸು, ರೈಲು ಮತ್ತು ಸಾಮಾಜಿಕ ಸ್ಥಳಗಳಲ್ಲಿ ಧೂಮ್ರಪಾನವನ್ನು ನಿಷೇಧಿಸಿದೆ. ತಂಬಾಕುವಿನ ಅನೇಕ ಘಾತಕ ಮರಿಗಳೆಂದರೆ – ಬೀಡಿ, ಸಿಗರೇಟ್, ಗುಟಕ, ಪಾನ್‌ಪರಾಗ್, ಪಾನ್‌ಮಸಾಲಾ ಮುಂತಾದವು.ಇತ್ತೀಚಿನ ದಿನಗಳಲ್ಲಿ ಯುವಕರೇ ಹೆಚ್ಚಾಗಿ ತಂಬಾಕು ಇರುವ ವಸ್ತುಗಳನ್ನೇ ಸೇವಿಸುತ್ತಾರೆ. ಅವರಿಗೆ ತಂಬಾಕುವಿನಿAದ ಆಗುವ ದುಷ್ಪರಿಣಾಮಗಳನ್ನು ಅರ್ಥಮಾಡಿಸಲು ಈ ದಿನ ವಿಶ್ವದಾದ್ಯಂತ ತಂಬಾಕು ನಿಷೇಧ ದಿನವನ್ನು ಆಚರಿಸಲಾಗುತ್ತದೆ.ಬ್ರಹ್ಮಾಕುಮಾರಿ ಸಂಸ್ಥೆಯ ಅಂಗಸAಸ್ಥೆಯಾದ ಆರೋಗ್ಯ ವಿಭಾಗ ಪ್ರತಿವರ್ಷ ತಂಬಾಕು ನಿಷೇಧ ದಿನವನ್ನು ಆಚರಿಸುತ್ತಾ ಬಂದಿದೆ. ಆದರೆ ಈ ವರ್ಷ ಭಾರತ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದರಿAದÀ, ಜನರಲ್ಲಿ ಜಾಗೃತಿ ಮೂಡಿಸಲು ಸೆಮಿನಾರ್, ಚರ್ಚಾಕೂಟಗಳು, ಶಾಂತಿಯಾತ್ರೆ, ಚಿತ್ರ-ಪ್ರದರ್ಶನ, ಪ್ರತಿಜ್ಞೆ ಮಾಡುವುದು ಮತ್ತು ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ದುಶ್ಚಟದಿAದ ದೂರವಾಗಲು ನಿಯಮಿತ ವ್ಯಾಯಾಮ, ಸಾತ್ವಿಕ ಆಹಾರ, ಯೋಗದ ಅವಶ್ಯಕತೆ ಇದೆ. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸ್ವಯಂ ಪರಮಾತ್ಮನೇ ಕಲಿಸುವ ರಾಜಯೋಗವು ಅತ್ಯಂತ ಸರಳ ಹಾಗೂ ಸಹಜವಾಗಿದೆ. ಇದು ಮಾನವನ ಪ್ರವೃತ್ತಿಗಳನ್ನು ಶುದ್ಧೀಕರಣ ಮಾಡಿ, ಅವನ ವ್ಯವಹಾರ ಮತ್ತು ಆಚಾರಗಳನ್ನು ಸುಧಾರಿಸಿ, ಅವನ ಸಂಸ್ಕಾರಗಳನ್ನು ಸತೋಪ್ರಧಾನ ಮಾಡಿ, ಅವನನ್ನು ದೇವತಾ ಸಮಾನ ಮಾಡುತ್ತದೆ. ಯೋಗವೆಂಬ ಈ ವಿಜ್ಞಾನ ಮನುಷ್ಯನ ಉದ್ವೇಗಗಳನ್ನು ನಿಯಂತ್ರಿಸುತ್ತದೆ. ಅವನ ವಿಚಾರಗಳನ್ನು ವ್ಯವಸ್ಥಿತ ಹಾಗೂ ಸರಳಿತಗೊಳಿಸುತ್ತದೆ. ಈ ವಿಜ್ಞಾನದಿಂದ ವ್ಯಕ್ತಿಯ ಮಾನಸಿಕ ಏಕಾಗ್ರತೆಯ ಶಕ್ತಿಯು ಹೆಚ್ಚುತ್ತದೆ. ಅವನಿಗೆ ಒಂದು ರೀತಿಯ ಶಾಶ್ವತ ಶಾಂತತೆಯ ಅನುಭವ ಆಗುತ್ತಿರುತ್ತದೆ. ಪರಮಾತ್ಮನ ದಿವ್ಯಗುಣಗಳಾದ ಶಾಂತಿ, ಪವಿತ್ರತೆ, ಆನಂದ, ದಯೆ, ಸುಖ, ಪ್ರೇಮ, ಮುಂತಾದವುಗಳ ಅನುಭವ ಆಗುತ್ತದೆ. ಅವನ ವ್ಯವಹಾರದಲ್ಲಿ ಪರಿವರ್ತನೆ ಬಂದ ಕಾರಣ ಅನ್ಯರ ಜೊತೆಯಲ್ಲಿ ಅವನ ಮನಸ್ತಾಪ, ದ್ವೇಷ, ಈರ್ಷೆ, ಕ್ರೋಧ ಉತ್ಪನ್ನಗೊಳ್ಳುವುದಿಲ್ಲ. ಅವನ ಮನದಲ್ಲಿ ಉದ್ವೇಗಗಳ ಜ್ವಾಲಾಮುಖಿ ಏಳುವುದಿಲ್ಲ. ಮಾನಸಿಕ ಚಿಂತೆ ಇರುವುದಿಲ್ಲ. ಆದರೆ ಏಕರಸ ಅವಸ್ಥೆ ಅಥವಾ ಆನಂದದ ಅವಸ್ಥೆಯಲ್ಲಿ ಸ್ಥಿತನಾಗಿರುತ್ತಾನೆ. ಮನಸ್ಸನ್ನು ಸದೃಢ ಮಾಡಲು ಈ ರೀತಿ ಚಿಂತನೆ ಮಾಡಿ. ಮನ-ಬುದ್ಧಿಯನ್ನು ಏಕಾಗ್ರ ಮಾಡಿ ನಿಮ್ಮ ಶರೀರ ಮತ್ತು ಉಸಿರಾಟದ ಕಡೆ ಗಮನಹರಿಸಿ. ಈ ಶರೀರ ಹೇಗೆ ನಿರ್ಮಾಣವಾಗಿದೆ ಎಂದು ಆಲೋಚಿಸಿ. ತಂದೆ ಪರಮಪಿತ ಪರಮಾತ್ಮನು ಈ ಶರೀರದಲ್ಲಿ ಪ್ರತಿಯೊಂದು ಅಂಗಾAಗವನ್ನು ಬಹಳ ಸುಂದರವಾಗಿ ನಿರ್ಮಿಸಿದ್ದಾನೆ. ಈ ಶÀರೀರವನ್ನು ನನಗೆ ಅರ್ಪಣೆ ಮಾಡಿದ್ದಾನೆ. ಈ ಶರೀರ ಬಹಳ ಅಮೂಲ್ಯವಾದದ್ದು. ಇಂತಹ ಅಮೂಲ್ಯವಾದ ಶರೀರವನ್ನು ಭಗವಂತ ನನಗೆ ಉಡುಗೊರೆಯನ್ನಾಗಿ ನೀಡಿದ್ದಾನೆ. ಈ ರೀತಿ ಬೇರೆ ಯಾರೂ ಉಡುಗೊರೆ ನೀಡಲು ಸಾಧ್ಯವಿಲ್ಲ. ಭಗವಂತ ಮಾತ್ರ ಅದನ್ನು ನೀಡಬಲ್ಲನು. ಈಗ ಪುನ: ನಿಮ್ಮ ಆರೋಗ್ಯವಂತ ಶರೀರವನ್ನು ನೋಡಿಕೊಳ್ಳಿ. ವ್ಯಸನಮುಕ್ತರಾಗಿ ಎಲ್ಲಾ ವ್ಯಾಧಿಗಳಿಂದ ಮುಕ್ತವಾಗಿರುವ ಶರೀರವನ್ನೂ ನೋಡಿ. ಆ ಸಮಯದಲ್ಲಿ ನನ್ನ ಪ್ರತಿಯೊಂದು ಅಂಗಾAಗವು ಸರಿಯಾದ ರೂಪದಲ್ಲಿ ಕಾರ್ಯ ಮಾಡುತ್ತಿತ್ತು. ಪರಮಾತ್ಮ ತಂದೆ ಮತ್ತು ಪ್ರÀಕೃತಿಯ ಸುಂದರ ರಚನೆ ಇದಾಗಿದೆ, ಹೀಗೆ ಮಾತನಾಡುತ್ತಾ ಪರಮಾತ್ಮನಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಈ ಶರೀರದ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಿ. ಅನೇಕ ಪ್ರಕಾರದ ಕಾಯಿಲೆಗಳಿಂದ ಮತ್ತು ವ್ಯಸನಗಳಿಂದ ಮುಕ್ತರಾಗುವೆನು ಎಂದು ಸಂಕಲ್ಪ ಮಾಡಿರಿ. ಇನ್ನು ಮುಂದೆ ನಾನು ಯಾವುದೇ ವ್ಯಸನಗಳಿಗೆ ನನ್ನಲ್ಲಿ ಸ್ಥಳಾವಕಾಶ ನೀಡುವುದಿಲ್ಲ. ದಿನನಿತ್ಯ ವ್ಯಾಯಾಮ ಹಾಗೂ ಯೋಗಭ್ಯಾಸದಿಂದ ನನ್ನ ಶರೀರ ಹಾಗೂ ಪರಿವಾರದ ಜವಾಬ್ದಾರಿ ಬಗ್ಗೆ ಗಮನ ಇಟ್ಟುಕೊಳ್ಳುವೆನು.ವ್ಯಸನದಿಂದ ಮುಕ್ತರಾಗಲು ಮನಸ್ಸು ಮಾಡಬೇಕು. ಮನಸ್ಸಿದ್ದರೆ ಮಾರ್ಗ ಉಂಟು. ಮೇಲ್ಕಾಣಿಸಿದ ಸ್ವಚಿಂತನೆ ಮಾಡಬೇಕು. ಸ್ನೇಹಿತರು, ಪರಿವಾರದ ಸದಸ್ಯರು ಧ್ಯೆರ್ಯ ತಂಬಿ ವ್ಯಸನಮುಕ್ತರಾಗಲು ಸಹಾಯ ಮಾಡಬೇಕು. ಹಾಗಾದರೆ ಬನ್ನಿ ನಾವೆಲ್ಲರೂ ನಮ್ಮ ಅಕ್ಕಪಕ್ಕದಲ್ಲಿರುವ ವ್ಯಸನಿಗಳಿಗೆ ಹತ್ತಿರದ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯಕ್ಕೆ ಕರೆದುಕೊಂಡು ಬಂದು ರಾಜಯೋಗದಿಂದ ವ್ಯಸನಮುಕ್ತರಾಗಲು ಸಹಾಯ ಮಾಡೋಣ.

ವಿಶ್ವಾಸ ಸೋಹೋನಿ

ಬ್ರಹ್ಮಾಕುಮಾರಿ ಮೀಡಿಯಾ ವಿಂಗ್

9483937106