ವಿಶ್ವ ಆರೋಗ್ಯ ದಿನಾಚರಣೆ

ಬೀದರ:ಎ.8:ಎಲ್ಲರೂ ಆರೋಗ್ಯವಂತರಾಗಿರಬೇಕು ಉತ್ತಮ ಆರೋಗ್ಯ ಸೌಲಭ್ಯ ಮಾನವನ ಜನ್ಮ ಸಿದ್ಧ ಹಕ್ಕು ಈ ದಿಶೆಯಲ್ಲಿ ವಿಶ್ವಾದ್ಯಂತ 1950 ರಿಂದ ಪ್ರತಿ ವರ್ಷ ಏಪ್ರಿಲ್ ಏಳರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಉತ್ತಮ ಸ್ವಾಸ್ಥ್ಯವನ್ನು ನೀಡಲು ಜನರಿಗೆ ಆರೋಗ್ಯ ಸೌಲಭ್ಯವನ್ನು ತಲುಪಲು ಅನೇಕ ಯೋಜನೆಗಳನ್ನು ಹಾಕಿಕೊಂಡಿರುವುದು ಮತ್ತು ಆ ಯೋಜನೆಗಳು ನಗರದಿಂದ ಗ್ರಾಮೀಣದವರೆಗೆ ತಲುಪಲು ಜಾಗೃತಿ ಮೂಡಿಸುತ್ತದೆ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಸಿಗಬೇಕು ಎನ್ನುವುದೆ ಇದರ ಧ್ಯೇಯ ಉದ್ದೇಶ ಎಂದು ಖ್ಯಾತ ಮಕ್ಕಳ ತಜ್ಞರಾದ ಡಾ. ಸಿ ಆನಂದ ರಾವ್ ರವರು ಅಭಿಪ್ರಾಯಪಟ್ಟರು.

ಅವರು ಇಂದು ಬಸವನಗರದ ಸ್ವಾತಿ ನಸಿರ್ಂಗ್ ಹೋಂ ನಲ್ಲಿ ಡಾ ಕೇರ್ ಚಾರಿಟೇಬಲ್ ಟ್ರಸ್ಟ್, ನ್ಯೂ ಮದರ್ ತೆರೇಸಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಹಾಗೂ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಆಚರಿಸಲಾಯಿತು,

ಮುಂದುವರೆದು ಮಾತನಾಡುತ್ತಾ 2020 ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ ಎನ್ನುವ ಘೋಷವಾಕ್ಯವನ್ನು ಸಾಕಾರಗೊಳಿಸಲು ಅನೇಕ ಯೋಜನೆಗಳನ್ನು ಹಾಕಿಕೊಂಡಿರುತ್ತದೆ ಆದರೆ ಇತ್ತೀಚಿಗೆ ಎಲ್ಲರನ್ನೂ ತಲ್ಲಣ ಗೊಳಿಸಿದ ಕೋವಿಡ್ ಮಹಾಮಾರಿ ಹಿಂದೆಟು ಹಾಕಿದೆ ಆದ್ದರಿಂದ ನಾವೆಲ್ಲರೂ ಪರಿಸರ ಪ್ರೇಮಿಗಳಾಗಬೇಕು ಗಾಳಿ ನೀರು ಆಹಾರ ಶುದ್ಧವಾಗಿ ದೊರೆಯಲು ಪ್ರಕೃತಿಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.

ನ್ಯೂ ಮದರ್ ತೆರೇಸಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಜು ಕುಮಾರ್ ಸ್ವಾಮಿ ಅವರು ಮಾತನಾಡಿ ಆರೋಗ್ಯವೇ ಮಹಾಭಾಗ್ಯ ನಾವು ಎಷ್ಟೇ ಸಂಪಾದಿಸಿದರು ಆರೋಗ್ಯವನ್ನು ನಮ್ಮ ಕೈಯಲ್ಲಿ ಇಲ್ಲದಿದ್ದರೆ ಎಲ್ಲವೂ ಶೂನ್ಯ ಆದ್ದರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದೇ ಉತ್ತಮ ಎಂದು ತಿಳಿಸಿದರು.

ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಮಾತನಾಡಿ ಜನಸಂಖ್ಯಾ ಸ್ಪೋಟದಿಂದ ಅರಣ್ಯ ನಾಶ, ಜಲನಾಶವಾಗಿ ಸಂಪೂರ್ಣ ಪರಿಸರ ಹಾಳಾಗಿದೆ, ಹೀಗಿದ್ದಲ್ಲಿ ಉತ್ತಮ ಆರೋಗ್ಯ ಹೇಗೆ ದೊರೆಯಲು ಸಾಧ್ಯ? ಪ್ರತಿಯೊಬ್ಬ ಮನುಷ್ಯನು ಪ್ರಕೃತಿಗೆ ಹತ್ತಿರವಾಗಬೇಕು ಆಗ ಮಾತ್ರ ಮತ್ತೆ ನಾವು ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ದೈನಂದಿನ ಜೀವನದಲ್ಲಿ ಒತ್ತಡ ಬದುಕಿಗೆ ಅಲ್ಪ ವಿರಾಮ ನೀಡಿ ವೈಯಕ್ತಿಕ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು ಉತ್ತಮ ಆಹಾರ ಯೋಗ ಧ್ಯಾನ ಪ್ರಾಣಾಯಾಮ ಮುಂತಾದವುಗಳು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಯೋಗಶಾಲಾ ತಂತ್ರಜ್ಞಾನದ ಶ್ರೀಮತಿ ಯಾಸ್ಮಿನ್, ಅಂಜುಮ್ ಬೇಗಮ್, ಆಸೀಫ, ಷರೀಫ್, ಪ್ರಹ್ಲಾದ್ ಪ್ರವೀಣ್ ಕುಮಾರ್ ಸುನೀತಾ ನವೀನ್ ಮುಂತಾದವರು ಉಪಸ್ಥಿತರಿದ್ದರು.