ವಿವಿಧ ಬೇಡಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ವಿಜಯಪುರ :ಜು.11: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ವತಿಯಿಂದ ದೇಶದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿ ಮಾಡಿ, ಅತ್ಯಂತ ದಯನಿಯ ಸ್ಥಿತಿಯಲ್ಲಿರುವ ಅಂಗನವಾಡಿ ಕೆಲಸಗಾರರನ್ನು ನಿರ್ಲಕ್ಷ ಮಾಡುತ್ತಿರುವ ಕೇಂದ್ರ ಸರಕಾರದ ಧೋರಣೆ ವಿರುದ್ದ ಮತ್ತು ರಾಜ್ಯದಲ್ಲಿ ಹೊಸ ಮೊಬೈಲಗಳಿಗೆ ಹಾಗೂ 2023ರ ಬಜೆಟನಲ್ಲಿ ಹೆಚ್ಚಳವಾದ 1000ರೂ.ಗಳ ಗೌರವಧನ ಬಿಡುಗಡೆಗಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ ಮುಖಾಂತರ ಸಿಡಿಪಿಓ ಗ್ರಾಮೀಣ ಎಸ್.ಸಿ. ಮ್ಯಾಗೇರಿ ಮತ್ತು ನಗರ ಸಿಡಿಪಿಓ ದೀಪಾಕ್ಷಿ ಜಾನಕಿ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುನಂದಾ ನಾಯಕ ಮತ್ತು ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿ ನಮಗೆ ಸಾಮಾಜಿಕ ಭದ್ರತೆಗಳಾದ ಇSI, Pಈ, ಪಿಂಚಣಿ, ಎಕ್ಸ್‍ಗ್ರೇಷಿಯಾ ಇತರ ಸೌಲಭ್ಯಗಳನ್ನು ಕೊಡಲೇಬೇಕು. # 45 & 46 ನೇ ಇಂಡಿಯನ್ ಲೇಬರ್ ಕಾನ್ಸರೆನ್ಸ್‍ಗಳ ಶಿಫಾರಸ್ಸುಗಳನ್ನು ಜಾರಿ ಮಾಡಲೇಬೇಕು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಕೊಡುವ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕೂಡಲೇ ಜಾರಿ ಮಾಡಬೇಕು. ಸುಪ್ರೀಂ ಕೋರ್ಟ್ ಮತ್ತು ಸಂಸದೀಯ ಮಂಡಳಿಗಳ ಶಿಫಾರಸ್ಸುಗಳ ಪ್ರಕಾರ ದೇಶದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮೂಲ ವೇತನ ನಿಗದಿ, ಇನ್‍ಕ್ರಿಮೆಂಟ್’ ನಿಗದಿ, ಇತರೆ ಭತ್ಯೆಗಳ ಪರಿಶೀಲ£ ಮತ್ತು ನಿಗದಿಗಾಗಿ ಸಮಿತಿಯೊಂದನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡಲೇ ರಚಿಸಬೇಕು. ತಮಗೆ ಏಕ ರೂಪದ ಸೇವಾ ನಿಯಮಗಳನ್ನು ಕೂಡಲೇ ರೂಪಿಸಬೇಕು. ಸಂಘಟನೆ ಮಾಡಿದ ಮತ್ತು ಮುಷ್ಕರಗಳಲ್ಲಿ ಭಾಗವಹಿಸಿದ ಕಾರಣಕ್ಕಾಗಿ ದೆಹಲಿಯಲ್ಲಿ ಕಾನೂನು ಬಾಹಿರವಾಗಿ ಕೆಲಸದಿಂದ ವಜಾ ಮಾಡಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕೂಡಲೇ ಮರು ನೇಮಕ ಮಾಡಬೇಕು. ಅಲ್ಲದೇ, ನಾವು ಸಂಘಟಿತರಾಗುವ, ಪ್ರತಿಭಟಿಸುವ ಹಕ್ಕನ್ನು ಖಾತರಿ ಮಾಡಬೇಕು. ‘ಪೆÇೀಷಣೆ ಅಭಿಯಾನ’ಕ್ಕೆ ಆಧಾರ್ ಅಥವಾ ಫೆÇೀನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಅದೇಶವನ್ನು ಹಿಂಪಡೆಯಬೇಕು. ಆ ಸಂಬಂಧ ಸುಪ್ರೀಂಕೋರ್ಟಿನ ಮಾರ್ಗದರ್ಶನ ಪಾಲಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ IಅಆS ಯೇತರ ಮತ್ತು ಇತರೆ ಇಲಾಖೆಗಳ ಕೆಲಸಗಳನ್ನು ಹಚ್ಚಬಾರದು.
ಈ ಮೂಲಕ.2022 ಆಗಷ್ಪದಿಂದ ಜನವರಿ 2023ರ ವರೆಗೆ ಗರ್ಭಿಣಿ ಹಾಗೂ ಬಾಣಂತಿ ಮತ್ತು 3 ರಿಂದ 6 ವರ್ಷದ ಮಕ್ಕಳಿಗೆ ಕೊಟ್ಟಂತಹ ಮೊಟ್ಟೆ ಬಿಲ್ಲನ್ನು ಇಲ್ಲಿಯವರೆಗೆ ಪಾವತಿ ಮಾಡಿರುವುದಿಲ್ಲ 2) ಅಂಗನವಾಡಿ ಕೇಂದ್ರಗಳಿಗೆ ಸ್ವತಃ ಕಚೇರಿಯವರೇ ಗ್ಯಾಸ್ ಸಿಲಿಂಡರಗಳನ್ನು ಒದಗಿಸಬೇಕುಬಾಡಿಗೆ ಇರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ಬಾಕಿ ಹಣ ಇಲ್ಲಿಯವರೆಗೆ ತೆಗೆದಿರುವದಿಲ್ಲ ಆದಷ್ಟು ಬೇಗನ ಪಾವತಿ ಹಣ ಬಿಡುಗಡೆ ಮಾಡಬೇಕು ಪ್ರಭಾರ ಮಾಡಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣ ಹಾಕಬೇಕು ಮತ್ತು ಇನ್ ಚಾರ್ಜನಿ ಮೊಟ್ಟೆಗಳನ್ನು ಕೊಡಬೇಕು ಅಂಗನವಾಡಿ ಕೇಂದ್ರಗಳಿಗೆ ಕೋಡುವಂತಹ ಮೊಟ್ಟೆಗಳು ಸರಿಯಾದ ಕ್ವಾಲಿಟಿ ಇರುವದಿಲ್ಲ ಸಾರ್ವಜನಿಕರಿಂದ ವಿವಿಧ ರೀತಿಯ ಆರೋಪಗಳು ಬರುತ್ತಿವೆ, ಆದ್ದರಿಂದ ಸರಿಯಾದ ಮೊಟ್ಟೆಗಳನ್ನು ಕೂಡಬೇಕು.
2017 ರಿಂದ ಇಲ್ಲಿಯವರೆಗೆ ಟಿ.ಎ & ಡಿ.ಎ ಕೊಟ್ಟಿರುವುದಿಲ್ಲ ಸಾದಿಲವಾರ ಹಣವನ್ನು ಕೂಡಾ ಹಾಕಿರುವದಿಲ್ಲ ಇನ್ನೂ ಮುಂದಾದರು ಬೇಗನೆ ಹಾಕಬೇಕು ಮೇಲ್ವಿಚಾರಿಕೆಯರನ್ನು 3 ವರ್ಷಗಳಿಗೊಮ್ಮೆ ಸ್ಥಾನ ಪಲ್ಲಟ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸುವರ್ಣಾ ಹಲಗಣಿ, ಜಯಶ್ರೀ ಪೂಜಾರಿ, ಎಸ್.ಎಂ. ಇನಾಮದಾರ, ಸುರೇಖಾ ಬೀಳಗಿ, ಶಾರದಾ ಹಡಗಲಿ, ಮೈರುನುಷಾ ಪಟೇಲ, ಸಂಗೀತಾ ಲೋಕುರೆ, ಕಮನಲಾ ಬಾರಕೋಲ, ಸಿದ್ದಮ್ಮ ಶಿರೋಳ, ಮುತ್ತಪ್ಪ ಹೊಸಮನಿ, ಟಿ.ಎಸ್. ಬಳಗಾನೂರ, ಶೈಲಾ ಕಟ್ಟಿ, ಶಿಲ್ಪ ಪತ್ರಿಮಠ, ಶಮೀನಾ ಮುಲ್ಲಾ, ಆರೀಫಾ, ದಾನಮ್ಮ ಅರಕೇರಿ, ರಾಜೇಶ್ವರಿ ಸಂಕದ, ಕೀರ್ತಿ ಕುಲಕರ್ಣಿ, ಪರೀನ, ಮಹಾನಂದ ಭಜಂತ್ರಿ, ತಮಸೂಮ ಕೊಟ್ಟಲಗಿ, ರೇಖಾ ಶಹಾಪೂರ, ಸಂಗೀತಾ ಉಕ್ಕಲಿ, ಚನ್ನಮ್ಮಾ ಖಾನಾಪೂರ, ಮತ್ತಿತರರು ಉಪಸ್ಥಿತರಿದ್ದರು.