ಶಹಾಪುರ:ಜೂ.13: ಅತಿ ವೇಗದಲ್ಲಿ ಬೇಳೆಯುತ್ತಿರುವ, ಶಹಾಪುರ ನಗರವನ್ನು ಪ್ರವಾಸಿ ತಾಣವಾನ್ನಾಗಿಸಬೇಕು, ಇಲ್ಲಿರುವ ಮಾಹಾತ್ಮ ಚರಬಸವೇಶ್ವರ ಗದ್ದುಗೆ, ಬುದ್ಧ ಮಲಗಿದ ಪ್ರಕೃತಿ ಕೊಡುಗೆಯ ಸದೃಶ್ಯ. ಸಿದ್ದಲಿಂಗೆಶ್ವರ ಬೆಟ್ಟ, ಬಲಭೀಮೇಶ್ವರ ಗುಡಿಗೆ ಹಲವಾರು ಐತಿಹಾಸಿಕ ಸ್ಥಾನಗಳನ್ನು ಹೊಂದಿದ ಶಹಾಪುರ ನಗರವನ್ನು ಪ್ರವಾಸಿಗರ ಮನೆಸೆಳೆಯುವ ಕೇಂದ್ರ ಸ್ಥಾನವಾಗಬೇಕು. ಮತ್ತು ನಗರದಲ್ಲಿ ಕುಡಿಯುವ ನೀರು ಸಮಸ್ಯೆಗಳು ಉಂಟಾಗದಂತೆ ನಗರಸಭೆ ಅಧಿಕಾರಿಗಳು, ಮುಂಜಾಗ್ರತಾ ಕ್ರಮಕ್ಕೆ ಮುಂದಾಗಬೇಕು. ಅಲ್ಲದೆ ನಗರದಲ್ಲಿ ಶಾಂತಿ ತಾಣಗಳಿಲ್ಲದೆ ಜನರು ಕೊಗುತ್ತಿದ್ದಾರೆ. ಹೃದಯ ಭಾಗದಲ್ಲಿ ಇರುವ ಸಾರ್ವಜನಿಕ ಮೈಧನಗಳಲ್ಲಿ ವಿಶ್ರಾಂತಿಗಾಗಿ ಅಭಿವೃದ್ಧಿ ಪಡಿಸಬೇಕು ಮತ್ತು ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೆಂಭಾವಿ ಪಟ್ಟವನ್ನು ಶೀಘ್ರವಾಗಿ ತಾಲೂಕಾ ಕೇಂದ್ರವಾಗಿಸಬೇಕು ಎಂದು ಕರವೇ ಪ್ರವೀಣ್ ಶೆಟ್ಟಿ ಬಣ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಶರಣಬಸ್ಸಪ್ಪಗೌಡ ದರ್ಶನಾಪುರವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಸಿದರು. ಈ ಸಮಯದಲ್ಲಿ ತಾಲುಕಾ ಅಧ್ಯಕ್ಷರಾದ ವೆಂಕಟೇಶ ಬೋನೇರ್, ಸೇರಿದಂತೆ ಅನೇಕ ಕಾರ್ಯಕರ್ತರು ಪಧಾಧಿಕಾರಿಗಳು ಹಾಜರಿದ್ದರು.