ಚಾಮರಾಜನಗರ, ಜೂ.17:- ವಿಭಿನ್ನ ವಾತಾವರಣದಲ್ಲಿ ಕ್ರಿಕೆಟ್ ಆಡುವಾಗ ಪಿಚ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತ್ಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ತಿಳಿಸಿದರು.
ಅವರು ನಗರದ ಮೈಸೂರು ರಸ್ತೆಯಲ್ಲಿರುವ ಮಹೀಂದ್ರಾ ಟ್ರಾಕ್ಟರ್ ಶೋರೂಂನಲ್ಲಿ ಮಹೀಂದ್ರಾ ಕಂಪನಿಯ ಹೊಸ ಟ್ರಾಕ್ಟರ್ ಅನ್ನು ಇಂದು ಖರೀದಿಸಿದರು. ಟ್ರಾಕ್ಟರ್ ಖರೀದಿಯ ನಂತರ ಮಾಧ್ಯಮದವರ ಜೊತೆ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಭಾರತ ತಂಡದ ಸೋಲಿನ ಬಗ್ಗೆ ಮಾತನಾಡಿದ ಬಿನ್ನಿ, ವಿಭಿನ್ನ ವಾತಾವರಣದಲ್ಲಿ ಕ್ರಿಕೆಟ್ ಆಡುವಾಗ ಪಿಚ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತೆ. ಅಸೀಸ್ ವಿರುದ್ಧದ ಟೆಸ್ಟ್ ಫೈನಲ್ ವೇಳೆ ಮೊದಲ ದಿನ ಸರಿಯಾಗಿ ಆಡಲಿಲ್ಲ, ಟೀಂಆಯ್ಕೆಯ ವೇಳೆ ಒಂದು ಸಣ್ಣತಪ್ಪು ಕೂಡಾ ಆಗಿದೆ. ಇಲ್ಲದಿದ್ದರೆ ಪಂದ್ಯಗೆಲ್ಲುತ್ತಿದ್ದೆವು ಎಂದರು.
ಐಪಿಎಲ್ ನಂತಹ ಲೀಗ್ಗಳು ಅಂತಾರಾಷ್ಟ್ರೀಯ ಪಂದ್ಯಗಳ ಸೋಲಿಗೆ ಕಾರಣ ಆಗುತ್ತಿದೆಯೇ ಎಂದು ಕೇಳಿದ್ದಕ್ಕೆ, ಐಪಿಎಲ್ ಪಂದ್ಯಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಯಾವುದೇ ತೊಂದರೆಯಿಲ್ಲ. ಟಿ20ಗೂ, ಏಕದಿನ, ಟೆಸ್ಟ್ ಪಂದ್ಯಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ನಾವು ಟೆಸ್ಟ್ ಕ್ರಿಕೆಟನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಟೆಸ್ಟ್ನಲ್ಲಿ ಕ್ರಿಕೆಟ್ ಭವಿಷ್ಯಅಡಗಿದೆ. ವೀಕ್ಷಕರ ಮನರಂಜನೆಗಾಗಿ ಐಪಿಎಲ್ ನಡೆಯುತ್ತದೆ ಎಂದು ಹೇಳಿದರು.
ಐಪಿಎಲ್ ಬೆನ್ನಲ್ಲೇಟೆಸ್ಟ್:ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ನಡೆದ ನಂತರ 8 ದಿನದಲ್ಲಿ ಭಾರತ ತಂಡ ಇಂಗ್ಲೆಂಡ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಆಡಿತ್ತು. ಲೀಗ್ನಿಂದ ಹೊರಬಿದ್ದ ತಂಡದ ಆಟಗಾರರು ಮೊದಲೇ ಲಂಡನ್ಗೆ ಪ್ರವಾಸ ಬೆಳೆಸಿದ್ದರೂ ಅಭ್ಯಾಸಕ್ಕೆ ಹೆಚ್ಚಿನ ಕಾಲಾವಧಿ ಆಟಗಾರರಿಗೆ ಸಿಕ್ಕಿಲ್ಲ ಇದರಿಂದ ಜೂನ್ 7 ರಿಂದ 11ರ ವರೆಗೆ ನಡೆದ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಭಾರತ ಆಸ್ಟ್ರೇಲಿಯ ವಿರುದ್ಧ 209 ರನ್ ಸೋಲನನುಭವಿಸಿತು.
ಈ ಬಗ್ಗೆ ಪ್ರಶ್ನಿಸಿದಾಗ ಮೂರು ಮಾದರಿಯ ಕ್ರಿಕೆಟ್ಗೆ ಬೇರೆ ಬೇರೆ ತಂಡಗಳನ್ನು ಮಾಡುವ ಬಗ್ಗೆ ಪ್ರಶ್ನಿಸಿದಾಗ, ಟಿ20 ಇರಲಿ, ಏಕದಿನವಾಗಲಿ, ಟೆಸ್ಟ್ಇರಲಿ ಎಲ್ಲದಕ್ಕೂ ಆಟಗಾರರು ಹೊಂದಿಕೊಳ್ಳಬೇಕು. ಆಗ ಅವರು ಉತ್ತಮ ಆಟಗಾರರಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟರು.
ಪಂದ್ಯದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತುಕೋಚ್ ರಾಹುಲ್ ದ್ರಾವಿಡ್ ಇಂಗ್ಲೆಂಡ್ನಲ್ಲಿ ಕಡಿಮೆ ಎಂದರೂ 25 ದಿನ ಅಭ್ಯಾಸಕ್ಕೆ ಅವಕಾಶ ಬೇಕಿತ್ತುಎಂದಿದ್ದರು. ಆದರೆ ಈ ಮಾತನ್ನು ಬಿಸಿಸಿಐ ಅಧ್ಯಕ್ಷರು ತಳ್ಳಿಹಾಕಿದ್ದಾರೆ.
ಆಟಗಾರರು ವರ್ಷಪೂರ್ತಿ ಕ್ರಿಕೆಟ್ ಆಡುತ್ತಿರುತ್ತಾರೆ. ಆಟಗಾರರು ಮೂರು ಮಾದರಿಗೆ ಹೊಂದಿಕೊಳ್ಳಬೇಕು ಎಂದರು.
ಆಡುವ ಹನ್ನೊಂದರ ಬಳಗದಲ್ಲಿ ಅಶ್ವಿನ್ ಆಯ್ಕೆ ಮಾಡದಿರುವ ಬಗ್ಗೆ ತಮ್ಮ ಅಭಿಪ್ರಾಯಿಸಿ, ತಂಡದ ಆಯ್ಕೆಯಲ್ಲಿ ಸಮಸ್ಯೆ ಆಗಿದೆ ಎಂದಿರುವ ಅವರು, ಅಶ್ವಿನ್ ಎಂದು ಗುರುತು ಮಾಡಿಲ್ಲ ಅμÉ್ಟೀ. ಆದರೆ ಪರೋಕ್ಷವಾಗಿ ತಂಡದಲ್ಲಿ ರವಿಚಂದ್ರನ್ ಇರಬೇಕಿತ್ತು ಎಂದು ರೋಜರ್ ಬಿನ್ನಿ ಹೇಳಿದರು.