ವಿಜಯಪುರ :ಜೂ.17: ಜೂನ್ 2023 ತಿಂಗಳಿನಿಂದ ಬಂದಿರುವ ಎಲ್ಲ ಥ್ಯಾರಿಫ್ ಸ್ಲಾಬಗಳ ವಿದ್ಯುತ್ ದರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಮಿತಿ ವತಿಯಿಂದ ಅಧ್ಯಕ್ಷರು, ಕರ್ನಾಟಕ ವಿದ್ಯುಚಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು.
ಜೂನ್ 2023 ತಿಂಗಳಿಂದ ಬಂದಿರುವ ಎಲ್ಲ ಥ್ಯಾರಿಫ್ ಸ್ಲಾಬಗಳ ವಿದ್ಯುತ ದರವನ್ನು ಹಿಂಪಡೆಯಬೇಕು. ಪ್ರತಿ ಮೂರು ತಿಂಗಳು ಅಥವಾ ವರ್ಷಕ್ಕೊಮ್ಮೆ ದರ ಏರಿಕೆಯನ್ನು ಮಾಡಲಾಗುತ್ತಿತ್ತು. ಪ್ರತಿ ಜಿಲ್ಲೆಯಲ್ಲಿ ಬಂದು ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸಿ ಗ್ರಾಹಕರಿಗೆ ಮನವರಿಕೆ ಮಾಡಿ ದರ ಏರಿಸಿದರೆ ಯಾವುದೇ ಸಮಸ್ಯೆ ಬರುವದಿಲ್ಲ. ಆದರೆ ವಿದ್ಯುತ ಸರಬರಾಜು ಕಂಪನಿ ಹೇಳಿದರೆ ದರ ಏರಿಸುವುದು ಗ್ರಾಹಕರಿಗೆ ಹೊರೆ ಹಾಕಿದ ಹಾಗೆ ಆಗುತ್ತದೆ. ಮತ್ತು ಇಷ್ಟೊಂದು ದೊಡ್ಡ ಪ್ರಮಾಣದ ದರ ಏರಿಕೆಯನ್ನು ಕಳೆದ ಹತ್ತು ವರ್ಷಗಳಲ್ಲಿ ಯಾವ ಸರಕಾರವು ಮಾಡಿರುವುದಿಲ್ಲ. ಮತ್ತು ಇಷ್ಟೊಂದು ದರ ಇದ್ದರೂ ಕಂಪನಿ ನಷ್ಟ ಅನುಭವಿಸಲಾರದು ಈ ಇಲಾಖೆಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಗಳು , ಭ್ರಷ್ಟಾಚಾರವನ್ನು ಕಡಿಮೆ ಮಾಡಿದರೆ ಕಂಪನಿ ನಷ್ಟದಲ್ಲಿ ಬರಲುಸಾಧ್ಯವಿಲ್ಲ. ಎಲ್ಲ ಥ್ಯಾರಿಫ್ ಸ್ಲಾಬಗಳನ್ನು ಇನ್ನೂ ಹೆಚ್ಚಿಗೆ ಮಾಡುವುದು. ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅವೈಜ್ಞಾನಿಕ ಕಾಮಗಾರಿಗಳನ್ನು ಕಡಿಮೆ ಮಾಡಬೇಕು ಮತ್ತು ಎಲ್ಲ ಸಿಬ್ಬಂದಿಗಳ ವರ್ಗಾವಣೆಯನ್ನು ಕಾವೇರಿ ಭವನದಲ್ಲಿ ಮಾಡುವ ಬದಲು ಆಯಾ ಕಂಪನಿಗಳಿಗೆ ನೀಡಬೇಕು ಹಾಗೂ ಎಲ್ಲ ಉಪ ವಿಭಾಗಗಳಲ್ಲಿ ಮತ್ತು ಶಾಖೆಗಳಲ್ಲಿ ಇರುವ ಇನ್ಫೋಸಿಸ್, ಎನ್ಸಪ್ಟ್ ಇವುಗಳಿಗೆ ಸವರ್ರ ಸಮಸ್ಯೆ ಬಹಳ ಆಗಿದ್ದು, ಇದರಿಂದ ತಮ್ಮ ಇಲಾಖೆಯ ಸಿಬ್ಬಂದಿಗಳು ಕೆಲಸ ಮಾಡಲಾಗುವದಿಲ್ಲ. ತೈಲ ಹೊಂದಾಣಿಕೆಯ ಮೊತ್ತವನ್ನು ಸಂಪೂರ್ಣವಾಗಿ ಎಲ್ಲ ಥ್ಯಾರಿಫ್ ಸ್ಲಾಬಗಳ ತೆಗೆಯಬೇಕು. 33 ಕೆ.ವಿ. ಸ್ಟೇಷನ್ಗೆ ಮಾತ್ರ ಸೀಮಿತವಾಗಿರುತ್ತದೆ. ಕಂಪನಿಯ ಹಿರಿಯ ಅಧಿಕಾರಿಗಳು ತಮ್ಮ ಗಮನಕ್ಕೆ ತರಬೇಕಾಗಿತ್ತು. ಆಡಳಿತಾತ್ಮಕ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಆಯೋಗದ ಅಧ್ಯಕ್ಷರು, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರು, ಈ ಬಗ್ಗೆ ಕ್ರಮ ಕೈಗೊಂಡು ವಿದ್ಯುತ್ ದರ ಏರಿಕೆಯನ್ನು ಕಡಿಮೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಮಿತಿಯ ಅದ್ಯಕ್ಷರಾದ ಮಲ್ಲಿಕಾರ್ಜುನ ಬಿ. ಕೆಂಗನಾಳ, ಉಪಾಧ್ಯಕ್ಷರಾದ ನಿಹಾದ್ ಅಮದ ಗೋಡಿಹಾಳ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾಜುನ್ ಎಮ್. ಕನ್ನೂರ, ಹಿಟ್ಟಿನ ಗಿರಣಿ ಸಂಘಟನೆಯ ಪದಾಧಿಕಾರಿಗಳು, ಅಬ್ದುಲ ಹಮೀದ ಇನಾಮದಾರ, ಸತೀಶ ಪಾಟೀಲ, ನಾರಾಯಣ ಸಂಸ್ಥಾನಿಕ ತಿಳಿಸಿದ್ದಾರೆ.