ತಾಳಿಕೋಟೆ:ಜೂ.21: ರಾಜ್ಯ ಸರ್ಕಾರವು ದೀಡಿರನೇ ವಿದ್ಯುತ್ ದರ ದುಪ್ಪಟ್ಟು ಹೆಚ್ಚಳ ಮಾಡಿರುವದನ್ನು ಖಂಡಿಸಿ ರಾಜ್ಯ ಎಪಿಎಂಸಿ ವರ್ತಕರ ಸಂಘ ರಾಜ್ಯವ್ಯಾಪಿ ಬಂದ್ ಕರೆ ನೀಡಿರುವ ಹಿನ್ನೇಲೆ ಇದೇ ದಿ.22 ಗುರುವಾರರಂದು ತಾಳಿಕೋಟೆ ಎಪಿಎಂಸಿ ವ್ಯಾಪಾರ ವೈಹಿವಾಟನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಅಡತ್ ಮರ್ಚಂಟ್ ಅಸೋಶೇಷನ್ ಉಪಾಧ್ಯಕ್ಷ ಅಶೋಕ ಶೆಟ್ಟಿ ಅವರು ತಿಳಿಸಿದರು.
ಮಂಗಳವಾರರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧ್ಯುತ್ ದರ ಯಾವುದೇ ಮುನ್ಸೂಚನೆ ಇಲ್ಲದೇ ಮತ್ತು ದುಪ್ಪಟ್ಟು ಹೆಚ್ಚಳ ಮಾಡಿರುವದರಿಂದ ಹತ್ತಿ ಗಿರಣಿ, ಶೇಂಗಾ ಮಿಲ್, ತೊಗರಿ ಮಿಲ್ ಅಲ್ಲದೇ ಇನ್ನಿತರ ಮಿಲ್ಗಳ ವಿದ್ಯುತ್ ಬಿಲ್ಲು ಹೆಚ್ಚಳವಾಗುವದರಿಂದ ರೈತರಿಗೆ ಆರ್ಥಿಕವಾಗಿ ಬಹುದೊಡ್ಡ ಪೆಟ್ಟು ಬಿಳ್ಳಲಿದೆ ಅಡತಿ ಅಂಗಡಿಯಿಂದ ನೇರವಾಗಿ ಮಿಲ್ಗಳಿಗೆ ದಾಸ್ತಾನುಹೋಗುತ್ತಿರುವದರಿಂದ ಅವರು ದಾಸ್ತಾನಿನ ದರವನ್ನು ವಿದ್ಯುತ್ ಬಿಲ್ ಹೆಚ್ಚಳದಿಂದ ದರ ಕಡಿಮೆ ಮಾಡುವದರಿಂದ ರೈತರಿಗೆ ಸೂಕ್ತ ಬೆಲೆ ಸಿಗುವದಿಲ್ಲಾ ಕೂಡಲೇ ವಿದ್ಯುತ್ ಇಳಿಕೆ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕುವ ಸಲುವಾಗಿ ಇದೇ ದಿ.22ರಂದು ತಾಳಿಕೋಟೆ ಎಪಿಎಂಸಿ ಮಾರ್ಕೇಟ್ ಯಾರ್ಡಿನ ಎಲ್ಲ ವ್ಯಾಪಾರ ವೈಹಿವಾಟನ್ನು ಬಂದ್ ಮಾಡಿ ಪ್ರತಿಭಟನೆಯ ಮೂಲಕ ಒತ್ತಾಯಿಸಲಾಗುವುದೆಂದರು.
ಅಂದು ಮಧ್ಯಾಹ್ನ 12 ಗಂಟೆಗೆ ಅಡತ್ ಮರ್ಚಂಟ್ ಅಸೋಶೇಷನ್ ಅಧ್ಯಕ್ಷ ವಿಠ್ಠಲಸಿಂಗ್ ಹಜೇರಿ ಅವರ ನೇತೃತ್ವದಲ್ಲಿ ಎಲ್ಲ ವರ್ತಕರು ಎಪಿಎಂಸಿ ಸಭಾಭವನದಿಂದ ಪ್ರತಿಭಟನೆಯನ್ನು ಆರಂಬಿಸಿ ತಹಶಿಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅಸೋಶೇಷ ಉಪಾಧ್ಯಕ್ಷ ಅಶೋಕ ಶೆಟ್ಟಿ ಅವರು ತಿಳಿಸಿದರು.
ಈ ಸಮಯದಲ್ಲಿ ಅಸೋಶೇಷನ್ ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ಸಿ.ಎಸ್.ಯಾಳಗಿ, ಬಾಬು ಹಜೇರಿ, ಅಶೋಕ ಜಾಲವಾದಿ, ಆಯ್.ಬಿ.ಬಿಳೇಭಾವಿ, ನಾಗೇಶ ಡೋಣೂರಮಠ, ಈರಣ್ಣ ಕಲ್ಬುರ್ಗಿ, ಎಂ.ಬಿ.ಕುಂಭಾರ, ವಿಶ್ವನಾಥ ಬಿದರಕುಂದಿ, ಬಸ್ಸು ಪಂಚಗಲ್ಲ, ಮೊದಲಾದವರು ಇದ್ದರು.