ವಿದ್ಯುತ್ ಅವಘಡ ಮೃತ ಬಾಲಕನ  ಕುಟುಂಬಕ್ಕೆ ಪರಿಹಾರ ವಿತರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.26: ಇತ್ತೀಚೆಗೆ ನಗರದ 9ನೇ ವಾರ್ಡನಲ್ಲಿ ವಿದ್ಯುತ್ ತಂತಿ ತಗಲಿ ಮೃತಪಟ್ಟ 9 ವರ್ಷದ ಬಾಲಕ ಕಿಶೋರ್ ಕುಟುಂಬಕ್ಕೆ ಸರ್ಕಾರ ನೀಡಿದ ಐದು ಲಕ್ಷಗಳ ಪರಿಹಾರದ ಚೆಕ್ಕನ್ನು  ಶಾಸಕ  ಭರತ್ ರೆಡ್ಡಿ  ಇಂದು  ವಿತರಿಸಿದರು.
ಈ ವೇಳೆ ಮೇಯರ್ ತ್ರಿವೇಣಿ, ಉಪ ಮೇಯರ್  ಜಾನಕಿ , ಜೆಸ್ಕಾಂ ಸಹಾಯಕ  ಕಾರ್ಯನಿರ್ವಾಹಕ ಅಭಿಯಂತರರಾದ ಅಶೋಕ್ ರೆಡ್ಡಿ,  ಹುಸೇನ್ ಸಾಬ್ , ಪಾಲಿಕೆ ಸದಸ್ಯರು ಇದ್ದರು.