ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾನೆ ಬೆಳೆಸಿಕೊಳ್ಳಿ

ಚಿಂಚೋಳಿ,ಸೆ.24- ವಿಜ್ಞಾನ ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು. ವಿಜ್ಞಾನವೆಂದರೆ ಸತ್ಯ. ಆದರೆ ಅದನ್ನು ಮರೆಮಾಚಿ ಮೂಡನಂಬಿಕೆ, ಕಂದಚಾರದ ಕಡೆ ಸಾಗುತ್ತಿದ್ದೇವೆ.
ಗಂಡು, ಹೆಣ್ಣು ಮಗು ಹೇಗೆ ಜನಿಸುತ್ತವೆ ಎಂದು ಜೀವಶಾಸ್ತ್ರದಲ್ಲಿ ಓದುತ್ತೇವೆ. ಗಂಡು ಮಗು ಆಗಲಿಲ್ಲ ಎಂದು ಮಾಟ, ಮಂತ್ರ, ತಾಯಿತ, ಮಠ, ಮಂದಿರಗಳ ಮೊರೆಹೋಗುತ್ತಿದ್ದೇವೆ. ವಿದ್ಯಾರ್ಥಿಗಳು ಪಠ್ಯದಲ್ಲಿ ಓದಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಲಬುರಗಿ ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ಹೇಳಿದರು.
ಭಾರತ ಜ್ಣಾನ ವಿಜ್ಣಾನ ಸಮಿತಿಯು ಸರಕಾರಿ ಪಿಯು ಕಾಲೇಜು ಚಿಂಚೋಳಿ ಘಟಕ ಏರ್ಪಡಿಸಿದ “ವೈಜ್ಞಾನಿಕ ಮನೊವೃತಿಯೆಡೆಗೆ ಯುವಕರು” ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅಪರ ಆಯುಕ್ತರ ಕಾರ್ಯಾಲಯದ ವಿಷಯ ಪರಿವೀಕ್ಷಕರಾದ ನಾಗಿಂದ್ರಪ್ಪ ಅವರಾದಿ “ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಮೂಢನಂಬಿಕೆ ಇನ್ನೂ ಹೋಗಿಲ್ಲ. ಅಕ್ಷರಸ್ಥರು ಸಹ ಗೊತ್ತಿದ್ದೂ ವಾಮಚಾರ, ಕಂದಚಾರಗಳನ್ನು ನಂಬಿ ಮೋಸ ಹೋಗುತ್ತಿದ್ದಾರೆ.
ಶಾಲೆಗಳಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಜವಾಬ್ದಾರಿ ಶಿಕ್ಷಕರದಾಗಿದೆ” ಎಂದು ಹೇಳಿದರು.
ಪ್ರೇಮಾನಂದ ಆಳಂದ ತರಬೇತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ್ ಅಧ್ಯಕ್ಷತೆ ವಹಿಸಿದ್ದರು. ಬರಮಲಿಂಗ ಸ್ವಾಗತಿಸಿದರು. ಬಸವರಾಜ ಯಾಧವ ನಿರೂಪಿಸಿದರು. ಶಿಕ್ಷಕ ಶರಣಬಸವ ವಂದಿಸಿದರು.