
ಕರಜಗಿ :ಮಾ.13:ವಿದ್ಯಾರ್ಥಿಗಳು ಜೀವನದಲ್ಲಿ ಸ್ವಷ್ಟ ಗುರಿಯೊಂದಿಗೆ ಶಿಸ್ತಿನಿಂದ ಸಾಗಿದರೆ ಉತ್ತುಂಗ ಸ್ಥಾನಕ್ಕೇರಲು ಸಾಧ್ಯ ಜೊತೆಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಸಾ ಸಿ ಬೆನಕನಹಳ್ಳಿ ಹೇಳಿದರು.
ಅವರು ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಸರ್ಕಾರದ ಅಧೀನದಲ್ಲಿರುವ ಮೌಲಾನಾ ಅಬುಲ ಕಲಾಂ ಅಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.
ಇಂದಿನ ದಿನಗಳಲ್ಲಿ ಸಮಾಜದಲ್ಲಿ ವೌಲ್ಯಗಳು ಕಾಣೆಯಾಗುತ್ತಿವೆ. ಇವುಗಳನ್ನು ಮತ್ತೆ ಮರು ಸ್ಥಾಪಿಸುವಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ. ಈ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭದಿಂದಲೂ ನಾನು ಸಂಸ್ಥೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದೇನೆ. ಗ್ರಾಮೀಣ ಭಾಗದಲ್ಲಿ ಮೊದಲ ಬಾರಿಗೆ ಆಂಗ್ಲ ಮಾಧ್ಯಮದ ಶಾಲೆಯನ್ನು ತೆರೆದು ಇಷ್ಟೊಂದು ಭವ್ಯವಾಗಿ ಬೆಳೆಸಿರುವುದಕ್ಕೆ ಮತ್ತು ಸಂಸ್ಥೆಯ ಅಭಿವದ್ಧಿಗೆ ಸಂಸ್ಥೆಯ ಆಡಳಿತ ಮಂಡಳಿ ಅವರನ್ನು ಶಿಕ್ಷಕರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಶಿವೂರ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಗೈಬುಸಾಬ ಆಳಂದ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ನಿರ್ಧರಿಸಿಕೊಳ್ಳಲು ಎಸ್ ಎಸ್ ಎಲ್ ಸಿ ಬಹಳ ಮಹತ್ವವಾಗಿದೆ.ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಓದಿನಲ್ಲಿ ತೊಡಗಿಕೊಂಡು ಅಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಲು ಸಾಧ್ಯವಾಗುತ್ತದೆ.
ಉಜ್ವಲ ಭವಿಷ್ಯಕ್ಕೆ ನಾಂದಿಯಾದ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ನಿರ್ಭಯವಾಗಿ ಬರೆದು ಉತ್ತಮ ಅಂಕ ಪಡೆದು ಶಾಲೆಯ ಪಾಲಕರ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕು.ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸುರೇಶ ಕೋರಚಗಾಂವ ಚನ್ನನಗೌಡ ಮಾಲಿಪಾಟೀಲ ಗ್ರಾ ಪಂ ಸದಸ್ಯರಾದ ದೇವಪ್ಪ ಲಾಳಸಂಗಿ ಲಾಡ್ಲೇಮಶಾಕ ಗೌರ ಮುಖಂಡರಾದ ಜೈನೋದ್ದಿನ ಮಂಗಲಗಿರಿ ವಿಠ್ಠಲ ಅಲ್ಲಾಪೂರ ಶಿವಪುತ್ರ (ದಯಾನಂದ) ನಾವಾಡಿ ಮಹಿಬೂಬ ಗೌರ ಮಲಕಣ್ಣ ಹೊಸೂರಕರ ಶರಣಪ್ಪ ನಾವದಗಿ ಮಿಟ್ಟುಸಾಬ ರುಕ್ಮೋದ್ದಿನ ಗುಳುರಾಯ ಬುರುಡ ಮಲ್ಲಿಕಾರ್ಜುನ ಬಾಗೇವಾಡಿ ಲಕ್ಷ್ಮಿಕಾಂತ ಚಿನಮಳ್ಳಿ ಶಿವಲಿಂಗೇಶ್ವರ ಜಾಲವಾದಿ ಶಿಕ್ಷಕರಾದ ಅಂಬಣ್ಣ, ಆರೀಫ್ ಮುತವಲಿ ಶಾಹಿನ್ ಗೌರ ಇಲಾಹಿ ಪಠಾಣ ಲಕ್ಷ್ಮಿ ಕಮರಡ್ಡಿ ಜಾಕೀರಾ ಉಮ್ಮೇಸಾಯರ ಸೇರಿದಂತೆ ವಿದ್ಯಾರ್ಥಿಗಳಿದ್ದರು.