
ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.09: ಇಸ್ರೋದಲ್ಲಿ ಉತ್ತರ ಕರ್ನಾಟಕ ಭಾಗದ ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದು ಇವರ ಸಾಧನೆಗೆ ಮಣ್ಣಿನ ಗುಣವೇ ಸಾಕ್ಷಿಯಾಗಿದೆ ಎಂದು ಭಾವಿಸಿದ್ದೇನೆ ಎಂದು ಇಸ್ರೋ ವಿಜ್ಞಾನಿಯಾದ ಬಿ.ಎಚ್.ಎಂ ದಾರುಕೀಶ್ ಅಭಿವ್ಯಕ್ತ ಪಡಿಸಿದರು.
ಪಟ್ಟಣದ ಕೊಟ್ಟೂರೇಶ್ವರ ಕಾಲೇಜ್ ನ ರಾಜ್ ಭವನದಲ್ಲಿ ಕಾಲೇಜ್ ವತಿಯಿಂದ ಯಶಸ್ವಿ ಚಂದ್ರಯಾನ 3 ಸಂದೇಶ ವಾಹಕದ ರೂವಾರಿ ಇಸ್ರೋ ವಿಜ್ಞಾನಿಯಾದ ಜಿ.ಎಚ್. ಎಂ ದಾರುಕೇಶ್ ಇವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕೊಟ್ಟೂರೇಶ್ವರ ಸ್ವಾಮಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಕುರಿತು ಮಾತನಾಡಿದರು.
ಅರ್ಹತಾ ವಿದ್ಯಾರ್ಥಿಗಳು ಇಸ್ರೋಗೆ ಅರ್ಜಿಯನ್ನು ಸಲ್ಲಿಸಿ ನೀವು ಆಯ್ಕೆಯಾದರೆ ತಮಗೂ ಇಸ್ರೋದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಈ ಇಸ್ರೋದಲ್ಲಿ ಮೂರು ರೀತಿಯಾಗಿ ಅವಕಾಶಗಳು ಸಿಗುತ್ತವೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಕಾಲೇಜ್ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ಧರಾಮ ಕಲ್ಮಠ ಮಾತನಾಡಿ ನಮ್ಮ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಚಂದ್ರಯಾನ 3 ಸಂದೇಶ ವಾಹಕದ ರೂವಾರಿಯಾಗಿ ದಾರುಕೀಶ್ ಕಾರ್ಯ ನಿರ್ವಹಿಸಿದ್ದು ನಮ್ಮ ಕಾಲೇಜಿಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಇಸ್ರೋ ವಿಜ್ಞಾನಿಯಾದ ಬಿ.ಎಚ್.ಎಂ ದಾರುಕೀಶ್ ಅವರಿಗೆ ಕಾಲೇಜ್ ಆಡಳಿತ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ವಾಗತ ಎಸ್. ಕೃಷ್ಣಪ್ಪ ನೆರವೇರಿಸಿದರು.
ನಿರೂಪಣೆ ಉಪನ್ಯಾಸಕಿ ವಿಜಯ ಲಕ್ಷ್ಮಿ ನೆರವೇರಿಸಿದರು.
ಪದವಿ ಕಾಲೇಜ್ ಪ್ರಾಂಶುಪಾಲರಾದ ರವಿಕುಮಾರ್, ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲರಾದ ವಸಂತ್ ಕುಮಾರ್, ಪದವಿ ಕಾಲೇಜ್ ನ ನಿವೃತ್ತ ಪ್ರಾಂಶುಪಾಲರಾದ ಪ್ರೊ ಶಾಂತಮೂರ್ತಿ ಕುಲಕರ್ಣಿ, ಸದಸ್ಯರಾದ ಶಿವಕುಮಾರ್, ಕೊಟ್ರೇಶ್, ಅಡಕಿ ಮಂಜುನಾಥ್, ಗುರುಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.