
ವಿಜಯಪುರ,ಏ 21: ನಗರದಲ್ಲಿ ಗುರುವಾರ ರಾತ್ರಿ 10.45ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ.
ಭೂಮಿಕಂಪಿಸಿದ ವೇಳೆ ಭಾರೀ ಶಬ್ದ ಕೇಳಿಬಂದಿದ್ದು, ಹಲವು ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.ಕಳೆದ ಕೆಲವು ತಿಂಗಳ ಹಿಂದೆ ಹಲವು ಬಾರಿ ಭೂಕಂಪನವಾಗಿದ್ದರೂ ಈ ರೀತಿಯ ಶಬ್ದ ಬಂದಿರಲಿಲ್ಲ. ಆದರೆಈ ಬಾರಿ ಶಬ್ದ ಕೇಳಿಸಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.ಭೂಕಂಪನವಾಗಿರುವ ಬಗ್ಗೆ ಭೂಕಂಪನ ಕೇಂದ್ರದಿಂದ ಸದ್ಯಯಾವುದೇ ಮಾಹಿತಿ ದೊರೆತಿಲ್ಲ. ಎರಡು ಬಾರಿ ಭೂ ಕಂಪನದಅನುಭವ ಜನರಿಗೆ ಆಗಿದೆ.
ಕಳೆದ ಎರಡು ವರ್ಷಗಳಿಂದವಿಜಯಪುರ ಜಿಲ್ಲೆಯಲ್ಲಿ ಭೂಕಂಪನವಾಗುತ್ತಲೇ ಬಂದಿದೆ.ಈ ಕುರಿತು ಜಿಲ್ಲಾಡಳಿತದ ಮನವಿಗೆ ಭೂಕಂಪನ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದರು. ಜಿಲ್ಲೆಯಲ್ಲಿ ಆಲಮಟ್ಟಿ
ಜಲಾಶಯವಿರುವ ಕಾರಣ ಭೂಕಂಪನವಾಗುವುದು ಸಹಜ,
ಇದಕ್ಕೆ ಯಾರು ಹೆದರುವ ಅವಶ್ಯಕತೆ ಇಲ್ಲವೆಂದು ಭರವಸೆನೀಡಿದ್ದರು. ಆದರೂ ಸಹ ಭೂಕಂಪನದ ಶಬ್ದ ಮಾತ್ರಕಡಿಮೆಯಾಗಿಲ್ಲ. ನಿನ್ನೆ ಸಹ ಸಂಜೆ ಮಳೆ ಸುರಿದ ಬಳಿಕ ವಿಜಯಪುರ ನಗರದ ಹಲವು ಕಡೆ ಭೂಕಂಪನ ಅನುಭವನ್ನುಸಾರ್ವಜನಿಕರು ಅನುಭವಿಸಿದ್ದಾರೆ.