ವಸತಿ ನಿಲಯಕ್ಕೆ  ಭೇಟಿ ವಿದ್ಯಾರ್ಥಿನಿಯರ ಕುಶಲೋಪರಿ ವಿಚಾರಿಸಿದ ಶಾಸಕ.ಬಿ.ದೇವೇಂದ್ರಪ್ಪ 

ಜಗಳೂರು.ಜೂ.23 :- ವಿದ್ಯಾರ್ಥಿಗಳು ತರಗತಿಯಲ್ಲಿ ಅತ್ಯುನ್ನತ ಶ್ರೇಣಿಗಳಿಸುವ ಕನಸ್ಸು ಹೊಂದಿರಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಕಿವಿಮಾತು ಹೇಳಿದರು.ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ಪರಿಶಿಷ್ಟ ಪಂಗಡದ (ಪ.ವರ್ಗ) ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ ನೀಡಿ ಅವರು ವಿದ್ಯಾರ್ಥಿನಿಯರ ಕುಶಲೋಪರಿ ವಿಚಾರಿಸಿ ಮಾತನಾಡಿದರು.ವಿದ್ಯಾರ್ಥಿಗಳ ಜೀವನ ಬಂಗಾರದಂತಹ ಜೀವನ ವಿದ್ಯಾರ್ಥಿ ದೆಸೆ ಯಲ್ಲಿ ಉನ್ನತ ಹುದ್ದೆಯ ಗುರಿ ಸಾಧಿಸುವ ಛಲ ನಿಮ್ಮ ದಾಗಬೇಕು. ಉತ್ತಮ ಸೌಕರ್ಯಗಳಿರುವ ವಸತಿನಿಲಯದಲ್ಲಿ ಸದುಪಯೋಗ ಪಡೆದುಕೊಂಡು ಉತ್ತಮ ವ್ಯಾಸಂಗದೊಂದಿಗೆ ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ಪೋಷಕರಿಗೆ ಇಲಾಖೆಗೆ ಕೀರ್ತಿ ಎಂದರು.ಬರದ ನಾಡಿನ ಬಡಮಕ್ಕಳಿಗೆ ವಸತಿನಿಲಯದ ವ್ಯವಸ್ಥೆ ಸುಸಜ್ಜಿತ ಕಟ್ಟಡ ಯಾವ ಐಷರಾಮಿ ಹೊಟೆಲ್ ಗೂ ಕಡಿಮೆಯಿಲ್ಲ.ಉತ್ತಮ ಅಡುಗೆ ಕೊಠಡಿ,ವಸತಿಗೆ ಬೆಡ್ ವ್ಯವಸ್ಥೆ,ಶುಚಿರುಚಿಯಾದ ಊಟ,ಗಾಳಿ ಬೆಳಕಿನ ಹಾಗೂ ಹೈಟೆಕ್ ಕಂಪ್ಯೂಟರ್ ಲ್ಯಾಬ್ ನ ಹೈಫೈ ಸೌಲಭ್ಯ ವಿದೆ ಎಂದು ಪ್ರಶಂಸಿದರು.ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವ ರಪ್ಪ ಮಾತನಾಡಿ,ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಉತ್ತಮ ಗುಣಮಟ್ಟದ ವಿದ್ಯಾ ರ್ಥಿ ನಿಯರ ಹಾಸ್ಟೆಲ್ ಸೌಲಭ್ಯವಿದೆ.ಪೋಷಕರು ಆತಂಕಪಡುವ ಅವಶ್ಯಕತೆಯಿಲ್ಲ.ಪ್ರತಿ ಹಾಸ್ಟೆಲ್ ನಲ್ಲಿ ವರ್ಷಕ್ಕೆ 100 ವಿದ್ಯಾರ್ಥಿನಿ ಯರ ದಾಖಲಾತಿಗೆ ಅವಕಾಶವಿದೆ ಅದರಲ್ಲಿ ಶೇ.25 ರಷ್ಟು ಸಾಮಾ ನ್ಯ ವರ್ಗದವರಿಗೆ ಪ್ರಾಶಸ್ತ್ಯ ನೀಡಲಾಗು ವುದು ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ನಿಲಯ ಪಾಲಕರಾದ ಮಂಗಳ ಕನಗವಳ್ಳಿ. ರಾತ್ರಿ ಕಾವಲುಗಾರದ ಅನಿತ. ಅಡಿಗೆ ಸಿಬ್ಬಂದಿಗಳು ಮತ್ತು  ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು