ವರ್ಗಾವಣೆ ಮದ್ದಲ್ಲ, ಹೋರಾಟಕ್ಕೆ ಬದ್ಧ

ಬಂಗಾರಪೇಟೆ, ಆ.೫- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ವಿಜಯಕುಮಾರಿ ಆರ್‌ಸಿಹೆಚ್ ಅಧಿಕಾರಿಯು ಬ್ರಹ್ಮಾಂಡ ಭಷ್ಟಚಾರ ನಡೆಸಿದ್ದಾರೆ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಸ್ವಾಭಿಮಾನ ರೈತಸಂಘದ ಸಂಸ್ಥಾಪಕ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಅವರು ಸತತವಾಗಿ ೨ವರ್ಷಗಳಿಂದ ಹೋರಾಟ ಮಾಡಿದರು. ಇದರ ಪ್ರತಿಫಲವಾಗಿ ಎಂ.ಎಸ್.ಹೆಗ್ಡೆ ನಗ್ರೆ (ಜಿಲ್ಲಾ ನಿವೃತ್ತ ನ್ಯಾಯಮೂರ್ತಿಗಳು) ಹಾಗೂ ಇಲಾಖೆಯ ಅಧಿಕಾರಿಗಳು ಸುದೀರ್ಘವಾಗಿ ತನಿಖೆ ನಡೆಸಿ ಡಾ.ವಿಜಯಕುಮಾರಿಯವರು ಆರೋಪಿ ಎಂದು ಮಂಡನಾ ವರದಿಯನ್ನು ಮಂಡಿಸಿದರು. ಇವರ ವರದಿಗೆ ಅನುಗುಣವಾಗಿ ಜು.೧೩ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತರು ಒಂದು ವಾರ್ಷಿಕ ಬಡ್ತಿ ಮತ್ತು ಭತ್ಯೆಯನ್ನು ತಡೆಹಿಡಿದು ದಂಡವನ್ನು ವಿಧಿಸಿರುತ್ತಾರೆ. ಇದು ಸಮರ್ಪಕವಾಗಿಲ್ಲದ ಕಾರಣ ಐತಾಂಡಹಳ್ಳಿ ಮಂಜುನಾಥ್ ಅವರು ಮತ್ತೊಮ್ಮೆ ಸಚಿವಾಲಯದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಲಾಗಿತ್ತು.
ಇವರ ಮನವಿಗೆ ಸಕರಾತ್ಮಕವಾಗಿ ಸ್ಪಂಧಿಸಿದ ಕರ್ನಾಟಕ ಸರ್ಕಾರದ ಮುಖ್ಯ ಅಧೀನ ಕಾರ್ಯದರ್ಶಿಗಳು ಮಾನ್ಯ ಸಚಿವರ ಗಮನಕ್ಕೆ ತರುವುದರ ಮೂಲಕ ದಿನಾಂಕ ೦೨/೦೯/೨೦೨೩ರಂದು ಸಚಿವರ ಆದೇಶದಂತೆ ವಿಜಯಕುಮಾರಿಯವರನ್ನು ಸಾರ್ವಜನಿಕ ಮಾಲೂರು ತಾಲ್ಲೂಕು ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿರುತ್ತದೆ. ಇದು ನ್ಯಾಯಕ್ಕೆ ಸಂದ ಜಯವಾಗಿದೆ ಎಂದು ಮಂಜುನಾಥ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಭ್ರಷ್ಟರಿಗೆ ವರ್ಗಾವಣೆ ಮದ್ದಲ್ಲ:
ನಮ್ಮ ದೇಶದಲ್ಲಿ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆ ಬಲಿಷ್ಠ ಹಾಗೂ ಸುಭದ್ರವಾಗಿದ್ದರೂ ಸಹ ಭ್ರಷ್ಠ ಅಧಿಕಾರಿಗಳು ಕಾನೂನಿನ ಕಣ್ಣಿಗೆ ಮಣ್ಣೆರಚಿ ಸಾರ್ವಜನಿಕರ ಹಣವನ್ನು ಕೊಳ್ಳೆಹೊಡೆಯುತ್ತಿರುವುದು ಅತ್ಯಂತ ದುರಂತ. ಯಾವುದೇ ಭ್ರಷ್ಠ ಅಧಿಕಾರಿಯನ್ನು ಅಮಾನತು ಮಾಡದೇ ವರ್ಗಾವಣೆಯ ಮೂಲಕ ಅವರ ರಕ್ಷಣೆಗೆ ಸರ್ಕಾರ ನಿಲ್ಲುತ್ತಿದೆಯೇ ಎಂಬ ಸಂಶಯ ಹುಟ್ಟುಹಾಕುತ್ತಿದೆ. ಹಾಗೂ ಪರೋಕ್ಷವಾಗಿ ಇತರ ಭ್ರಷ್ಠ ಅಧಿಕಾರಿಗಳಿಗೆ ಉತ್ತೇಜನ ನೀಡುವಂತಾಗಿದೆ. ಎಂದಿಗೂ ವರ್ಗಾವಣೆ ಎಂಬುವುದು ಭ್ರಷ್ಠರಿಗೆ ಮದ್ದಾಗುವುದಿಲ್ಲ. ಅವರನ್ನು ಹುದ್ದೆಯಿಂದ ಅಮಾನತು ಮಾಡಬೇಕು ಅವರ ಸೇವಾ ಅವಧಿಯಲ್ಲಿ ಗಳಿಸಿರುವಂತಹ ವೇತನ ಸಮೇತ ಭತ್ಯೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಎಲ್ಲಿಯವರಿಗೆ ಇದು ಸಾಧ್ಯವಿಲ್ಲವೂ ಅಲ್ಲಿಯವರೆಗೂ ದೇಶದಲ್ಲಿ ಭ್ರಷ್ಠಚಾರ ನಿಲ್ಲಲ್ಲ. ನನ್ನ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಿದೆಯೇ ಹೊರತು ಇದು ಕೊನೆಯಲ್ಲ. ಮುಂದಿನ ದಿನಗಳಲ್ಲಿ ಡಾ.ವಿಜಯಕುಮಾರಿ ಅವರಿಗೆ ಶಿಕ್ಷೆ ದೊರಕಿಸುವವರೆಗೂ ವಿರಾಮಿಸುವ ಮಾತಿಲ್ಲ. ನನ್ನ ಹೋರಾಟ ಭ್ರಷ್ಠರ ವಿರುಧ್ಧ ನಡೆಯುತ್ತಿರುತ್ತದೆ ಎಂದರು.