ಮಾನ್ವಿ,ಜೂ.೧೩-
ಪಟ್ಟಣದ ಕರ್ನಾಟಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತು ತಾಲೂಕ ಘಟಕದ ವತಿಯಿಂದ ಇತ್ತೀಚೆಗೆ ನಿವೃತ್ತ ಗೊಂಡ ನರಸಪ್ಪ ಹಾಗೂ ಜಾನಿ ಸಾಬ್ ಇವರನ್ನು ಸನ್ಮಾನಿಸಲಾಯಿತು.
ಹಿರಿಯ ವಕೀಲರಾದ ಕೆ.ಮನೋಹರ ವಿಶ್ವಕರ್ಮ ಸನ್ಮಾನಿಸಿ ಶಿಕ್ಷಕರ ವೃತ್ತಿ ಪವಿತ್ರವಾದದ್ದು. ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡರು ಕತ್ತಲೆಯಲ್ಲಿ ಸಮಾಜವನ್ನು ಬೆಳಕಿನ ಕಡೆಗೆ ತರುವ ಕಾರ್ಯವನ್ನು ಶಿಕ್ಷಕರು ಮಾಡಿದ್ದಾರೆ. ಇಂತಹ ಕಾರ್ಯ ಇತರೆ ಶಿಕ್ಷಕರಿಗೆ ಮಾದರಿ ಎಂದು ಮರ್ಮಿಕ ನುಡಿದರು. ಸರ್ಕಾರಿ ನಿಯಮದಂತೆ ನಿವೃತ್ತಿಗೊಂಡಿದರು ಮಾನಸಿಕ ಸ್ಥೈರ್ಯ ಕಡಿಮೆಯಾಗಿಲ್ಲ ಎಂದರು.
ಸೈಯದ್ ತಾಜುದ್ದೀನ್ ಅಧ್ಯಕ್ಷರು ಚು.ಸಾ.ಪ. ಮಾನ್ವಿ ಹಾಗೂ ಗುಂಡಪ್ಪ, ಶರಣಬಸವ ಪೂಜಾರ, ಮುದ್ಗಲ್ ಸಾಬ್ ನಿವೃತ್ತ ಹಿರಿಯ ಶಿಕ್ಷಕರು, ಲಾಲ್ ಸಾಬ್ ಮೆಹಬೂಬ್ ಅಲಿ ಇತರೆ ಪದಾಧಿಕಾರಿಗಳು ಇದ್ದರು.