
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಸೆ.09 : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 135 ಶಾಸಕರನ್ನು ಹೊಂದಿದ್ದರೂ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಧಮ್ ಇಲ್ಲ. ಅದಕ್ಕಾಗಿ ದಿನಕ್ಕೊಬ್ಬ ಬಿಜೆಪಿಯ ಮಾಜಿ, ಹಾಲಿ ಶಾಸಕರನ್ನು ಕರೆದು ಡಿಕೆಶಿ ಮಾತನಾಡ್ತೇನೆ. ಅಂದರೆ ಅವರಿಗೆ ಚುನಾವಣೆ ಎದುರಿಸಲು ನಮ್ಮಪಕ್ಷದ ವೀರ್ಯಾಣು ಬೇಕಾ ಎಂದು ಶಾಸಕ ಬಸನಗೌಡ ಪಾಟೀಲ್ ಡಿಕೆಶಿಯನ್ನು ಪ್ರಶ್ನಿಸಿದ್ದಾರೆ.ಅವರು ನಿನ್ನೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ. 135 ಸೀಟು ಗೆದ್ದ ಮೇಲೆ ಎಷ್ಟು ದುರಂಹಕಾರ ಬಂದಿದೆ ಎಂದ್ರೇ ಸೂರ್ಯ ಚಂದ್ರರನ್ನು ಅಳುವ ಲೆಕ್ಕಕ್ಕೇ ಹೋಗಿದ್ದಾರೆ. ಆದರೆ ಲೋಕಸಭೆ ಚುನಾವಣೆ ಎದುರಿಸೋಕೆ ನಿಮಗೆ ನಮ್ಮದೇ”ವಿರ್ಯಾಣು” ಬೇಕು ಅಂದ್ರೇ ಏನು ಮಾಡೋಣ ಎಂದರು.ಐದು ಕೋಟಿ ಕೊಡುವೆ:ಐದು ಲಕ್ಷ ಸಿಕ್ತದೆ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳ್ತಾನೆ. ನಾನು ಐದು ಕೋಟಿ ಕೊಡ್ತೇನೆ ಸಚಿವ ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳತ್ತಾನಾ ಎಂದು ಕೇಳಿದರು. ಮಾನಮರ್ಯಾದೆ ಇದೆಯಾ ನಿಮಗೆ ಹಣ ಕೊಡ್ತೇನೆ ಅಂದ್ರೇ ಜೀವ ಕಳೆದುಕೊಳ್ತಿರಾ, ನಿಮಗೆ ಒಂದಿಷ್ಟು ಕಾಮನ್ ಸೆನ್ಸ್ ಬೇಕು ಎಂದು ಸಚಿವರ ಹೇಳಿಕೆಗೆ ತರಾಟೆಗೆ ತೆಗೆದುಕೊಂಡು. ಅವರು ಆತ್ಮಹತ್ಯೆ ಮಾಡಿಕೊಳ್ತಾರೆ ಅಂದ್ರೇ ನಾಳೆಯೇ ಐದು ಕೋಟಿ ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡ್ತೇನೆ. ಇದನ್ನು ನಾನು ಚಾಲೆಂಜ್ ಮಾಡಿ ಹೇಳ್ತೇನೆ. ಇಂತಹ ಸಚಿವರನ್ನು ಇಟ್ಟುಕೊಂಡು ಅಧಿಕಾರ ನಡೆಸೋದಕ್ಕೆ ಆಗಲ್ಲವೆಂದು ಬಿಜೆಪಿಯವರನ್ನ ಕರೆಯುತ್ತಿದ್ದಾರೆಂದರು.@12bc = ಐದು ವರ್ಷ ಉಳಿಯಲ್ಲ:ಈ ಸರ್ಕಾರ ಐದು ವರ್ಷ ಉಳಿಯೋದಕ್ಕೆ ಸಾಧ್ಯವಿಲ್ಲ ಲೋಕಸಭೆ ಚುನಾವಣೆ ಮುನ್ನ ಇಲ್ಲ ನಂತರ ಅಸ್ತಿತ್ವ ಕಳೆದುಕೊಳ್ಳಲಿದೆಂದರು. ಕೇಂದ್ರದ ನಾಯಕರಿಗೆ ಬಿಟ್ಟಿದ್ದು:ಜೆಡಿಎಸ್ ಜೊತೆಗೆ ಹೊಂದಾಣಿಕೆ ವಿಚಾರ ಅದು ಕೇಂದ್ರದ ನಾಯಕರು ತೆಗೆದುಕೊಂಡ ನಿರ್ಣಯ. ಇದು ನಮ್ಮ ವ್ಯಾಪ್ತಿಯಲ್ಲಿ ಬರುವ ವಿಚಾರವಲ್ಲ. ಇದಕ್ಕೆ ಹೆಚ್ಚು ಮಾತನಾಡಲ್ಲ. ಕೆಲ ನಿರ್ಣಯ ದೇಶದ ಹಿತದೃಷ್ಟಿ ಮತ್ತು ಲೋಕಸಭೆ ಚುನಾವಣೆ ಹಿನ್ನಲೆ ತೆಗೆದುಕೊಳ್ಳುತ್ತಾರೆ. ನಮಗೆ ಕೊಟ್ಟ ಜವಾಬ್ದಾರಿ ಎಷ್ಟು ಅಷ್ಟೇ ಕೆಲಸ ಮಾಡ್ತೇನೆ. ನನ್ನ ವಯಕ್ತಿಕ ಅಭಿಪ್ರಾಯ ಪಕ್ಷದ ಮೇಲೆ ಹೇರೋದಿಲ್ಲ. ಪಕ್ಷದ ಅಭಿಪ್ರಾಯವೇ ನನ್ನ ಅಭಿಪ್ರಾಯ ಎಂದರು.ಚುನಾವಣೆ ಸಂದರ್ಭದಲ್ಲಿ ಕೆಲವೊಂದು ಹೇಳಬೇಕಿತ್ತು ಹೇಳಿದೆ. ಈಗ ಲೋಕಸಭೆ ಗೆಲ್ಲಬೇಕು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಮೋದಿ ಅವರ ಕೈಯಲ್ಲಿ ದೇಶ ಸುರಕ್ಷಿತವಾಗಿದೆ. ರಾಜ್ಯದಲ್ಲಿ 25 ಸ್ಥಾನ ಗೆಲ್ಲಬೇಕು ಅದೊಂದೇ ನಮ್ಮ ಗುರಿ ಎಂದರು.ವಿಪಕ್ಷ ನಾಯಕ ವಿಚಾರದಲ್ಲಿ ನನ್ನ ಪರ ವಿರೋಧ ಇದ್ದವರು ಪಕ್ಷದಲ್ಲಿ ಇದ್ದಾರೆ. ಪ್ಲಸ್ ಮೈನಸ್ಸು ಇದ್ದಂತೆ ಯಾರು ಪರಿಪೂರ್ಣ ಇದ್ದಾರೆ. ಪ್ರತಿ ಮನೆಯಲ್ಲಿ ದೋಷ ಇದ್ದಂತೆ ಇಲ್ಲಿಯೂ ಇದೆ ಎಂದರು.