
ಸಂಜೆವಾಣಿ ವಾರ್ತೆ
ಚಾಮರಾಜನಗರ: ಆ.04:- ಲೋಕಸಭಾಚುನಾವಣೆ ಘೋಷಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಂತೆ ಬಿಜೆಪಿ ಟಿಕೆಟ್ ಪಡೆಯಲು ಪೈಪೆÇೀಟಿ ಆರಂಭವಾಗಿದೆ. ಟಿಕೆಟ್ ರೇಸ್ ನಲ್ಲಿ ನಟ, ವೈದ್ಯ ಹಾಗೂ ನಿವೃತ್ತಐಎಎಸ್ ಅಧಿಕಾರಿಗಳು ಇರುವುದು ಗಮನ ಸೆಳೆಯುತ್ತಿದೆ.
ಕಳೆದ ಲೋಕಸಭಾಚುನಾವಣೆ ವೇಳೆಯು ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟು ಮನೆ ಮಾಡಿಓಡಾಡುತ್ತಿದ್ದ ಕೆ. ಶಿವರಾಂ, ಬಿಗ್ ಬಾಸ್ ಹಾಗೂ ನಟನೆ ಮೂಲಕ ಗುರುತಿಸಿಕೊಂಡಿರುವ ಅರ್ಜುನ್ರಮೇಶ್, ರಾಜೀವ್ಗಾಂಧಿ ವಿವಿಯಲ್ಲಿ ಪ್ರಾಧ್ಯಾಪಕ ಹಾಗೂ ಹಾಲಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅಳಿಯ ಡಾ. ಮೋಹನ್ಕುಮಾರ್ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
ಟಿ. ನರಸೀಪುರ ಪುರಸಭೆ ಸದಸ್ಯಆಗಿರುವ ನಾನು ಕಳೆದ 15 ವರ್ಷಗಳಿಂದ ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯುವಕರಿಗೆ ಆದ್ಯತೆ ನೀಡಲಿದೆ ಎಂಬ ವಿಶ್ವಾಸವಿದೆ. ಚಾಮರಾಜನಗರ ಹಿಂದುಳಿದ ಜಿಲ್ಲೆ ಅಂತಾರೆ. ಜಿಲ್ಲೆಯಲ್ಲಿಅಭಿವೃದ್ಧಿ ಮಾಡುವುದುಜನಪ್ರತಿನಿಧಿಗಳ ಕರ್ತವ್ಯ. ಆ ನಿಟ್ಟಿನಲ್ಲಿ ನನ್ನದೇಯಾದ ಕೆಲವು ಯೋಜನೆಗಳಿವೆ. ಆದ್ದರಿಂದ ಈ ಬಾರಿಟಿಕೆಟ್ ಕೇಳಿದ್ದೇನೆ. ನಾನು ಪಕ್ಷದ ನಿμÁ್ಠವಂತ ಕಾರ್ಯಕರ್ತನಾಗಿದ್ದು, ಬಿಜೆಪಿ ವರಿಷ್ಠರುಅರ್ಹರಿಗೆಟಿಕೆಟ್ ನೀಡಬೇಕು. ಕ್ಷೇತ್ರಕ್ಕೆ ಪ್ರವಾಸ ಮಾಡುವರೀತಿಯಲ್ಲಿ ಬರುವ ನಾಯಕರಿಗೆ ಮನ್ನಣೆ ನೀಡಬಾರದು. ಪ್ರಧಾನಿ ಮೋದಿ ಮತ್ತೊಮ್ಮೆ ಗೆಲುವಿನ ನಗೆ ಬರಬೇಕೆಂದರೆ ಅರ್ಹರಿಗೆ ಟಿಕೆಟ್ ನೀಡಬೇಕು” ಎಂದು ನಟ ಅರ್ಜುನ್ ರಮೇಶ್ ಮನವಿ ಮಾಡಿದ್ದಾರೆ.
ಸಂಘ ಪರಿವಾರದ ಜೊತೆಯಲ್ಲಿ ಸಂಸದರ ಅಳಿಯ:
ಹಾಲಿ ಸಂಸದ ವಿ. ಶ್ರೀನಿವಾಸಪ್ರಸಾದ್ ಅಳಿಯ ಆಗಿರುವ ವೈದ್ಯಡಾ. ಮೋಹನ್ ಕುಮಾರ್ ಸದ್ದಿಲ್ಲದೇ ಜಿಲ್ಲೆಯ ಬಿಜೆಪಿ ಮುಖಂಡರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಚಾಮರಾಜನಗರದಲ್ಲಿತಮ್ಮಕಚೇರಿಯನ್ನುತೆರೆದಿರುವಡಾ. ಮೋಹನ್ಕುಮಾರ್ ಸಂಘ ಪರಿವಾರದ ಜೊತೆ ಉತ್ತಮ ವಿಶ್ವಾಸ ಹೊಂದಿದ್ದಾರೆ.
ಕಳೆದ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ಸಿಗುವವರೆಗೂ ನಾನು ಯಾವಾಗಲೂ ಬಿಜೆಪಿ ಟಿಕೆಟ್ ಆಕಾಂಕ್ಷಿಎಂದು ಮೋಹನ್ ಕುಮಾರ್ ತಮ್ಮ ಅಭಿಪ್ರಾಯ ಪರಿವಾರ ಹಾಗೂ ವ್ಯಕ್ತಪಡಿಸಿದ್ದಾರೆ. ಸಂಸದರ ಅಳಿಯರಾಗಿರುವ ಕಾರಣಕ್ಕೆ ಟಿಕೆಟ್ ಲಾಬಿ ಇವರದ್ದುಜೋರಾಗಿದೆ
ಕಾಲಿಗೆ ಚಕ್ರಕಟ್ಟಿಕೊಂಡು ಸುತ್ತುತ್ತಿತುವ ನಿವೃತ್ತ ಅಧಿಕಾರಿ:
ಕಳೆದ ಚುನಾವಣೆಯಿಂದಲೂ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಲು ಹಾತೊರೆಯುತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ, ಈ ಬಾರಿಟಿಕೆಟ್ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಶಿವರಾಂ ಸುತ್ತುತ್ತಿದ್ದು ಈಗಾಗಲೇ 8 ವಿಧಾನಸಭಾ ಕ್ಷೇತ್ರದಲ್ಲೂ ಮುಖಂಡರುಗಳನ್ನು ಭೇಟಿಯಾಗಿದ್ದಾರೆ. ಈ ಬಾರಿಟಿಕೆಟ್ ಸಿಗುವ ಭರವಸೆಇದೆ. ಜೊತೆಗೂ ನಾನೇ ಗೆಲ್ಲುತ್ತೇನೆ ಎಂದು ವಿಶ್ವಾಸವನ್ನು ಹೊರಹಾಕಿದ್ದಾರೆ. ಇನ್ನು, ಕೋಟೆ ಎಂ. ಶಿವಣ್ಣ ಕೂಡ ಟಿಕೆಟ್ ಆಕಾಂಕ್ಷಿ ಆಗಿದ್ದು, ಬಿಜೆಪಿ ಆಂತರಿಕ ಸರ್ವೇಯನ್ನು ಮಾಡಿಸುತ್ತಿದೆ. ಲೋಕಸಭೆಚುನಾವಣೆಯ ಕಾವು ಈಗಿಂದಲೇ ಹೆಚ್ಚಾಗುತ್ತಿದೆ.