ಲಾರಿ ಹಿಂಬದಿಗೆ ಬಸ್ ಡಿಕ್ಕಿ ; ಬಾಲಕ ಸಾವು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 22 : – ತಾಲೂಕಿನ ಕಾನಹೊಸಹಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ  50 ರ ಗಣೇಶ ಡಾಬಾ ಬಳಿ ನಿನ್ನೆ ಬೆಳಿಗ್ಗೆ ನಿಂತಿದ್ದ  ಲಾರಿಯ  ಹಿಂಬದಿಗೆ  ಖಾಸಗಿ ಬಸ್ಸೊಂದು  ಡಿಕ್ಕಿ ಹೊಡೆದ  ಪರಿಣಾಮ ಬಸ್ಸಿನಲ್ಲಿದ್ದ 11ವರ್ಷದ ಬಾಲಕ ಮೃತಪಟ್ಟಿದ್ದು ಉಳಿದ ನಾಲ್ವರಿಗೆ ಗಾಯಗಳಾಗಿರುವ ಘಟನೆ ಜರುಗಿದೆ.
ಕೊಪ್ಪಳ ಮೂಲದ ಆಕಾಶ್(11)ಮೃತಪಟ್ಟ ಬಾಲಕನಾಗಿದ್ದಾನೆ , ಅಪಘಾತದಲ್ಲಿ ನಾಲ್ಕು ಮಂದಿಗೂ  ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಅಪಘಾತದ ನಂತರ ಗಂಭೀರ ಗಾಯಾಗಳಾಗಿದ್ದ   ಬಾಲಕನನ್ನು ಹೊಸಹಳ್ಳಿಯಿಂದ  ಜಗಳೂರಿನ ಅಸ್ಪತ್ರೆಗೆ ಕರೆದೊಯ್ಯವಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆಂದು ತಿಳಿದಿದೆ.
ಬಸ್ ಚಾಲಕನ ಅತಿವೇಗ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣವೆಂದು ಮೃತ  ಬಾಲಕನ ತಂದೆ ಮಾರುತೇಶ್ ನೀಡಿದ ದೂರಿನನ್ವಯ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

One attachment • Scanned by Gmail