
ಕಲಬುರಗಿ,ಜು 3: ಕಲಬುರಗಿ ಉತ್ತರ ವಲಯದ ರೋಟರಿ ಕ್ಲಬ್ ವತಿಯಿಂದ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯಲ್ಲಿ ವೈದ್ಯರ ದಿನಾಚರಣೆ ಮತ್ತು ಚಾರ್ಟೆಡ್ ಅಕೌಂಟೆಂಟ್ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯಕ್ಯಾಂಟೀನಿಗೆ ಒಂದು ತಿಂಗಳ ಆಹಾರ ಧಾನ್ಯಗಳನ್ನು ಕೊಡಲಾಯಿತು. 25 ಆಸ್ಪತ್ರೆಯ ಒಳ ರೋಗಿಗಳಿಗೆಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಆಸ್ಪತ್ರೆಯ ಪ್ರಭಾರಿಯ ಅಧಿಕಾರಿ ಡಾ. ಗುರುರಾಜ್ ದೇಶಪಾಂಡೆಮತ್ತು ಡಾ. ವಸಂತ ಹರಸೂರ ಈ ಆಸ್ಪತ್ರೆಯ ಇತಿಹಾಸ ಮತ್ತು ಸಾಧನೆಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ನಗರದ ಖ್ಯಾತ ಚಾರ್ಟೆಡ್ ಅಕೌಂಟೆಂಟ್ ಗಳಾದ ಆನಂದ್ಪಲ್ಲೋದ್ ಅಮಿತ್ ಲೋಯಾ,ವೈದ್ಯರಾದ ಡಾ. ಸಿದ್ದೇಶ್ ಡಾ. ಅಮರಪ್ಪ ಜಂಪಾ ಡಾ. ಗುರುರಾಜ ದೇಶಪಾಂಡೆ ಡಾ. ವಸಂತ್ ಹರಸೂರ್ ಅವರನ್ನು ಸನ್ಮಾನಿಸಲಾಯಿತು.ರೋಟರಿ ಕ್ಲಬ್ಕಾರ್ಯದರ್ಶಿ ನೌಶಾದ್ ಇರಾನಿ ನಿರೂಪಿಸಿದರು. ಅಧ್ಯಕ್ಷರಾದ ಶ್ರೀರಾಮ್ ಶಾನುಭೋಗ ಸ್ವಾಗತಿಸಿದರು. ಆನಂದ್ ದಂಡೋತಿ ವಂದಿಸಿದರು ಈ ಕಾರ್ಯಕ್ರಮದಲ್ಲಿ ಕ್ಲಬ್ ಗವರ್ನರ್ ಮಾಣಿಕ್ ಪವಾರ್,ಅಧ್ಯಕ್ಷ ರಾಮ್ ಶಾನುಭೋಗ,ಬಸವರಾಜ್ ಖಂಡೇರಾವ್, ದ್ವಾರಕಾ ಪ್ರಸಾದ್ ದಾಯಮ್ಮ, ದೇವೇಂದ್ರ ಸಿಂಗ್ ಚೌಹಾಣ್,ಸುಹಾಸ್ ಕಣಗೆ ,ದಿನೇಶ್ ಪಾಟೀಲ್, ವೈಜನಾಥ್ ಪಾಟೀಲ್, ಸಿ ಕೆ ಹಿರೇಮಠ, ಸಿದ್ದೇಶ್ ,ಅಭಿಜಿತ್ ಪಡಶೆಟ್ಟಿ ಉಪಸ್ಥಿತರಿದ್ದರು