ಮಂಡ್ಯ: ಏ.01:- ಪ್ರತಿ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡುತ್ತವೆ.ಚುನಾವಣೆ ನಂತರ ಪ್ರಣಾಳಿಕೆಯ ಯಾವುದೇ ಅಂಶಗಳು ಈಡೇರುವುದಿಲ್ಲ.ಪೊಳ್ಳು ಭರವಸೆಗಳನ್ನು ನೀಡಬೇಡಿ. ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ 20 ಅಂಶಗಳುಳ್ಳ ರೈತರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು ಇದನ್ನು ಒಪ್ಪಿ ಈಡೇರಿಸುವ ಭರವಸೆ ನೀಡುವವರಿಗೆ ಬೆಂಬಲ ನೀಡಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ಚುನಾಣೆಯಲ್ಲೂ ಭರವಸೆ ನೀಡಿ ಜನರನ್ನು ಮೋಸಗೊಳಿಸಲಾಗುತ್ತಿದೆ.ಈ ಬಗ್ಗೆ ಜನರು ಜಾಗೃತರಾಗಬೇಕು. ರಾಜ್ಯದ ರೈತರು ರಾಜಕೀಯ ಮುಖಂಡರು ಮತ ಕೇಳಲು ಬಂದಾಗ ಪ್ರಣಾಳಿಕೆಯ ಬಗ್ಗೆ ಪ್ರಶ್ನೆ ಮಾಡಬೇಕು. ಬಹಿರಂಗವಾಗಿ ಅವರಿಂದ ಹೇಳಿಕೆ ಪಡೆಯಬೇಕು. ಆಗ ರೈತರ ಶಕ್ತಿ, ಜಾಗೃತಿಯ ಅರಿವಾಗುತ್ತದೆ ಎಂದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರೈತ ಪ್ರಣಾಳಿಕೆ ಬಿಡುಗಡೆ ಮಾಡಿದ ಸಭೆಯಲ್ಲಿ ನಡೆದ ಮುಖಾಮುಖಿ ಚರ್ಚೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷಗಳು ಪಾಲ್ಗೊಂಡಿದ್ದವು.ಕಾಂಗ್ರೆಸ್ ಪ್ರತಿನಿಧಿಗಳು ವರಿ?À್ಠರ ಜೊತೆ ಚರ್ಚಿಸಿ ನಿರ್ಧಾರ ತಿಳಿಸುವ ಭರವಸೆ ನೀಡಿದರು. ಜೆಡಿಎಸ್ ಪಕ್ಷ ಈಗಾಗಲೇ ಬಹುತೇಕ ವಿ?Àಯಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡಿದ್ದೇವೆ. ರೈತ ಸಂಘಟನೆಗಳು ಒಪ್ಪಿದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಸಭೆ ನಡೆಸಿ ಬದ್ಧತೆ ತೋರುತ್ತೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಆಮ್ ಆದ್ಮಿ ಪಕ್ಷದವರು ಆಡಳಿತ ನಡೆಸುತ್ತಿರುವ ದೆಹಲಿಯಲ್ಲಿ ರೈತಪರವಾದ ನಿರ್ಣಯಗಳನ್ನು ಕೈಗೊಂಡಿದ್ದೇವೆ, ರೈತ ಸಂಘಟನೆಗಳು ಕೈಜೋಡಿಸಿದರೆ ಕರ್ನಾಟಕದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತೇವೆ ಎಂಬ ಮಾತುಗಳನ್ನಾಡಿದರು. ಭಾರತೀಯ ಜನತಾ ಪಾರ್ಟಿಯವರು ಆಹ್ವಾನ ನೀಡಿದರೂ ಸಭೆಗೆ ಬಾರದೆ ನಿರ್ಲಕ್ಷ್ಯ ವಹಿಸಿದ್ದಾರೆ.ಅವರಿಗೆ ನಮ್ಮ ಮತ ಬೇಡ್ವಾ?ನಾವು ಹೇಳಿದ ಹಾಗೆ ಕೇಳ್ತಾರೆ ಎನ್ನುವ ಮನೋಭಾವವೇ ಎಂದು ಪ್ರಶ್ನಿಸಿದರು.ಇದು ರಾಜ್ಯದ ರೈತರಿಗೆ ಮಾಡಿದ ಅಪಮಾನವಾಗಿದೆ ಎಂದರು.
ಸರ್ಕಾರದ ಇಬ್ಬಂದಿತನ: ರಾಜ್ಯದಲ್ಲಿ ರೈತರ 39 ದಿನಗಳ ಹೋರಾಟದ ನಂತರ ಕಬ್ಬಿಗೆ ಹೆಚ್ಚುವರಿ ದರ 150 ರೂ. ನಿಗದಿ ಮಾಡಿ ಆದೇಶವಾಗಿದ್ದರೂ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಾಗ, ಸರ್ಕಾರಿ ವಕೀಲರು ಸರ್ಕಾರದ ಆದೇಶ ಜಾರಿ ಮಾಡುವುದಿಲ್ಲ ಎಂದು ಹೇಳುವ ಮೂಲಕ ಇಬ್ಬಂದಿತನ ಪ್ರದರ್ಶಿಸಿ ರೈತರಿಗೆ ದ್ರೋಹವೆಸಗುತ್ತಿದ್ದಾರೆ ಎಂದು ಕಿಡಿ ಕಾರಿದರು.
ರೈತ ಪ್ರಣಾಳಿಕೆ ಬಗ್ಗೆ ಯಾವುದೇ ಪಕ್ಷದಿಂದ ಬದ್ಧತೆ ಸ್ಪಷÀ್ಟ ನಿರ್ಧಾರ ಹೊರಬೀಳದಿದ್ದರೆ, ದಾವಣಗೆರೆಯಲ್ಲಿ ರಾಜ್ಯಮಟ್ಟದ ಸಭೆ ಕರೆದು ಒಂದು ನಿರ್ಣಯಕ್ಕೆ ಬರಲಾಗುವುದು. ರಾಜ್ಯದ ರೈತರು ಹಳ್ಳಿ ಹಳ್ಳಿಗಳಲ್ಲಿ ರಾಜಕೀಯ ಪಕ್ಷಗಳನ್ನು ಪ್ರಶ್ನೆ ಮಾಡುವಂತೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಳ್ಳಿ ದೇವರಾಜ್, ಜಿಲ್ಲಾ ಸಂಚಾಲಕ ಸಾತನೂರು ವೇಣುಗೋಪಾಲ್ , ತುಮ್ಕೆರೆ ಮಂಜುನಾಥ್, ಕನ್ನಲಿ ದೇವರಾಜ್, ಶಿವಳ್ಳಿ ಲಕ್ಷ್ಮಣ್, ಹುಲಿವಾನ ಬಾ¯ ರಾಜ್, ಬಾಣಸವಾಡಿ ಪ್ರಸನ್ನ, ಬನ್ನೂರು ಶ್ರೀನಿವಾಸ್ ಹಾಜರಿದ್ದರು.
ಬಾಕ್ಸ್
ರೈತರ ಪ್ರಣಾಳಿಕೆ ಅಂಶಗಳು
ರೈತರಿಗೆ ಕನಿ?À್ಠ ಅದಾಯ ಖಾತರಿ ಒದಗಿಸಬೇಕು.ಹಗಲು ವೇಳೆಯಲ್ಲಿ ಕೃಷಿ ಪಂಪ್ಸೆಟ್ಗಳಿಗೆ 12 ಗಂಟೆಗಳ ನಿರಂತರ ವಿದ್ಯುತ್ ನೀಡಬೇಕು. ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಆಗಬೇಕು. ಎಲ್ಲಾ ಕೃಷಿ ಉತ್ತನ್ನಗಳಿಗೆ ಡಾ.ಎಂ.ಎಸ್. ಸ್ವಾಮಿನಾಥನ್ ವರದಿಯಂತೆ ಕನಿ?À್ಠ ಬೆಂಬಲ ಬೆಲೆ ನಿಗದಿಯಾಗಬೇಕು.ಫಸಲ್ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿ ಮಾಡಬೇಕು.
ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ಭೂಸ್ವಾಧಿನ ಪ್ರಕ್ರಿಯೆ ನಿಲ್ಲಿಸಬೇಕು, ಕಬ್ಬಿನ ಎಫ್ಆರ್ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು. ಆಲೆಮನೆಗಳಲ್ಲಿ ಕಬ್ಬಿನಿಂದ ಎಥೆನಾಲ್ ಉತ್ಪಾದನೆಗೆ ಅವಕಾಶ ನೀಡಬೇಕು.ಗ್ರಾಮೀಣ ಪ್ರದೇಶಲ್ಲಿ ವಾಸಿಸುವ ರೈತರ ಗಂಡು ಮಕ್ಕಳ ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ನೀಡಬೇಕು.ರಾಜ್ಯದಲ್ಲಿ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಬೇಕು.60 ವ?ರ್À ತುಂಬಿದ ರೈತರಿಗೆ ಕನಿ?À್ಠ 5000 ಪಿಂಚಣಿ ಯೋಜನೆ ಜಾರಿಗೆ ತರಬೇಕು