ರೈತರ ನಿದ್ದೆಗೆಡಿಸಿದ್ದ ಪುಂಡಾನೆ ಸೆರೆ

ಚಾಮರಾಜನಗರ, ಜೂ.08-ಕಾಡಂಚಿನ ಗ್ರಾಮಗಳಲ್ಲಿ ಜಮೀನುಗಳಿಗೆ ನುಗ್ಗಿ ಬೆಳೆನಾಶ ಮಾಡಿರೈತರ ನಿದ್ದೆಗೆಡಿಸಿದ್ದ ಪುಂಡಾನೆಯನ್ನು ಬಂಡೀಪುರಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.
ಗುಂಡ್ಲುಪೇಟೆತಾಲೂಕಿನ ಲೊಕ್ಕೆರೆಅರಣ್ಯ ಪ್ರದೇಶದಲ್ಲಿ ಬಿದಿರುತಿನ್ನುತ್ತಿದ್ದ ಪುಂಡಾನೆಯನ್ನುಜಯಪ್ರಕಾಶ್, ಪಾರ್ಥಸಾರಥಿ, ಗಜೇಂದ್ರ, ಹರ್ಷ ಎಂಬ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿಯಲಾಯಿತು.
ಕುಂದಕೆರೆಅರಣ್ಯ ವಲಯದ ಜಮೀನುಗಳಲ್ಲಿ ನಿತ್ಯವೂ ಈ ಪುಂಡಾನೆ ಬೆಳೆ ನಾಶ ಮಾಡುತ್ತಿತ್ತು. ರೋಸಿಹೋದ ಗ್ರಾಮಸ್ಥರುಅರಣ್ಯ ಇಲಾಖೆ ವಿರುದ್ಧಆಕ್ರೋಶ ಹೊರಹಾಕಿದ್ದರು. ಎಚ್ಚೆತ್ತ ಬಂಡೀಪುರಅರಣ. ಇಲಾಖೆ 4 ದಿನಗಳಿಂದ ಸೆರೆಕಾರ್ಯಾಚರಣೆಕೈಗೊಂಡಿತ್ತು.
ಕೇರಳದಿಂದ ತಮಿಳುನಾಡಿಗೆ ಬಂದಿದ್ದ ಆನೆ: ಕೇರಳದಿಂದ ತಮಿಳುನಾಡಿಗೆ ಬಂದುಅಟ್ಟಹಾಸ ಮೆರೆದಿದ್ದಅರಿಕೊಂಬನ್ ಆನೆಯನ್ನು ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಇತ್ತೀಚೆಗೆ ಸೆರೆಹಿಡಿದಿದ್ದರು. ಕೇರಳ ರಾಜ್ಯದ ಮುನ್ನಾರ್ ಪ್ರದೇಶದಲ್ಲಿಆನೆಯನ್ನು ಕೆಲವು ದಿನಗಳ ಹಿಂದμÉ್ಟೀಅರಣ್ಯ ಇಲಾಖೆ ಕುಮ್ಮಿಆನೆಯ ಸಹಾಯದಿಂದ ಸೆರೆ ಹಿಡಿದಿತ್ತು. ಇದೀಗ ಅರಿಕೊಂಬನ್ ಆನೆಗೆ ಅರಿವಳಿಕೆ ನೀಡಿ ನಾಲ್ಕು ಕುಮ್ಮಿ ಆನೆಗಳ ಸಹಾಯದಿಂದ ಪೆರಿಯಾರ್ ಹುಲಿ ಅರಣ್ಯಧಾಮಕ್ಕೆರವಾನಿಸಲಾಗಿದೆ.