
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.08 ರಾವ್ ಬಹದ್ದೂರ್ ವೈ ಮಹಬಲೇಶ್ವರಪ್ಪ ತಾಂತಿಕ ಮಹಾವಿದ್ಯಾಲಯದಲ್ಲಿ ನಿನ್ನೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ “ವಿಜ್ಞಾನದಲ್ಲಿ ಮಹಿಳೆಯರು: ವಿಕಾಸಿತ ಭಾರತವನ್ನು ವೇಗಗೊಳಿಸುವುದು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ||. ಡಾ. ಅಜಿತ್ ಕೆ.ಎಂ., ಭೌತಶಾಸ್ತ್ರ ವಿಭಾಗ, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್ ಐ ಟಿ ಕರ್ನಾಟಕ), ಸುರತ್ಕಲ್, ವೀ.ವಿ.ಸಂಘದ ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್, ಪ್ರಾಂಶುಪಾಲರು ಡಾ. ರಾಜಶೇಖರನ್ ಷಣ್ಮುಗಂ, ಉಪ ಪ್ರಾಂಶುಪಾಲರು ಡಾ. ಸವಿತಾ ಸೋನೋಳಿ, ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಮತ್ತು ಎಂಜಿನಿಯರಿಂಗ್ ವಿಭಾಗಗಳ ಮುಖ್ಯಸ್ಥರು-ಡಾ.ಸುಮಂಗಳ, ಡಾ.ಕೊಟ್ಟೂರೇಶ್ವರ ಎನ್ ಎಂ, ಡಾ.ನಾಗಭೂಷಣ, ಡಾ ಕೋರಿ ನಾಗರಾಜ, ಡಾ.ನಾಗರಾಜ, ಡಾ ಕೆ.ಆರ್.ಭಾಗ್ಯ, ಡಾ.ವೀರೇಶ್, ಡಾ.ಆನಂದ್ ಮತ್ತು ಆರ್.ವೈ.ಎಂ.ಇ.ಸಿ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
“ವಿಜ್ಞಾನದಲ್ಲಿ ಮಹಿಳೆಯರು: ವಿಕಾಸಿತ ಭಾರತವನ್ನು ವೇಗಗೊಳಿಸುವುದು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ|| ಡಾ. ಅಜಿತ್ ಕೆ.ಎಂ.,“ಭಾರತದ ವೈಜ್ಞಾನಿಕ ಪರಿಸರ ವ್ಯವಸ್ಥೆಯು ಭೌಗೋಳಿಕತೆಯಾದ್ಯಂತ ಮಹಿಳೆಯರ ಪ್ರತಿಭೆಯನ್ನು ಪೋಷಿಸಬೇಕು, ಸಂಶೋಧನೆ, ನಾಯಕತ್ವ ಸ್ಥಾನಗಳು ಮತ್ತು ನಾವೀನ್ಯತೆ-ಚಾಲಿತ ವಲಯಗಳಲ್ಲಿ ಮಹಿಳೆಯರ ಹೆಚ್ಚುತ್ತಿರುವ ಪ್ರಾತಿನಿಧ್ಯವನ್ನು ತೋರಿಸಿಬೇಕು, ಭಾರತದ ವಿಜ್ಞಾನ ಭೂದೃಶ್ಯದ ರೂಪಾಂತರಕ್ಕೆ ನೀತಿ ಬೆಂಬಲ ಮತ್ತು ಸಾಂಸ್ಥಿಕ ಬದ್ಧತೆ ಎರಡೂ ಅಗತ್ಯವಿದೆ, 2047 ರ ವೇಳೆಗೆ ಅಭಿವೃದ್ಧಿ ಹೊಂದಿದ, ಸ್ವಾವಲಂಬಿ ಭಾರತ ರಾಷ್ಟ್ರದ ಪ್ರಯಾಣದಲ್ಲಿ ಮಹಿಳೆಯರನ್ನು “ಸಕ್ರಿಯ ವೇಗವರ್ಧಕರು” ಎಂದು ಕರೆನೀಡಿದರು.
ವೀ.ವಿ.ಸಂಘದ ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್, “ವಿಜ್ಞಾನ ಮತ್ತು ಎಂಜಿನಿಯರಿಂಗ್ ಕಲಿಯುತ್ತಿರುವ ಈ ಯುವ ಪೀಳಿಗೆಗೆ ಮೇಡಂ ಕ್ಯೂರಿಯಿಂದ ಪ್ರೇರಣೆ ಸಿಗಬೇಕು. ಮೇಡಂ ಮೇರಿ ಕ್ಯೂರಿ ವಿಕಿರಣಶೀಲತೆಯ ಕುರಿತು ಸಂಶೋಧನೆಯಲ್ಲಿ ಪ್ರವರ್ತಕ, ಈ ಪದವನ್ನು ಸೃಷ್ಟಿಸಿದ, ಎರಡು ಹೊಸ ಅಂಶಗಳನ್ನು (ಪೊಲೋನಿಯಮ್ ಮತ್ತು ರೇಡಿಯಂ) ಕಂಡುಹಿಡಿದ ಮತ್ತು ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ, ಎರಡು ನೊಬೆಲ್ ಪ್ರಶಸ್ತಿಗಳನ್ನು ಗೆದ್ದ ಮೊದಲ ವ್ಯಕ್ತಿ ಮತ್ತು ಎರಡು ವಿಭಿನ್ನ ವೈಜ್ಞಾನಿಕ ಕ್ಷೇತ್ರಗಳಲ್ಲಿ (ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ) ಗೆದ್ದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ವಿಜ್ಞಾನವಿಲ್ಲದ ಜೀವನ ಅರ್ಥಹೀನವಾಗುತ್ತದೆ.” ಕರೆನೀಡಿದರು
ಪ್ರಾಂಶುಪಾಲರು ಡಾ. ರಾಜಶೇಖರನ್ ಷಣ್ಮುಗಂ, ಉಪ ಪ್ರಾಂಶುಪಾಲರು ಡಾ. ಸವಿತಾ ಸೋನೋಳಿ , “ರಾಷ್ಟ್ರೀಯ ವಿಜ್ಞಾನ ದಿನಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ.ವಿ. ರಾಮನ್ ಅವರು ಫೆಬ್ರವರಿ 28, 1928 ರಂದು ರಾಮನ್ ಪರಿಣಾಮವನ್ನು ಕಂಡುಹಿಡಿದ ನೆನಪಿಗಾಗಿ ಪ್ರತಿ ವರ್ಷ ಫೆಬ್ರವರಿ 28 ರಂದು ಭಾರತದಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಅವರು ಒಬ್ಬ ಮಹಾನ್ ವಿಜ್ಞಾನಿ, ಅವರ ಅನೇಕ ಸಂಶೋಧನೆಗಳು ಇಂದಿಗೂ ನಮ್ಮ ಜನರಿಗೆ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲ, ನಮ್ಮ ಯುವ ಪೀಳಿಗೆಯ ವಿದ್ಯಾರ್ಥಿಗಳು ಇಂತಹ ವಿಜ್ಞಾನಿಗಳಿಂದ ಪ್ರೇರಿತರಾಗಬೇಕು, ವಿಜ್ಞಾನಕ್ಕೆ ಕೊಡುಗೆ ನೀಡಬೇಕು” ತಿಳಿಹೇಳಿದರು. ಶ್ರೀಮತಿ ಗಂಗಾ ಮಹೇಶ್ ಸಜ್ಜನ ನಿರೂಪಿಸಿದರು, ಡಾ.ಮೇಟಿ ಪ್ರಭಾಕರ್. ವಂದಿಸಿದರು































