ರಾಷ್ಟ್ರೀಯ ಪಕ್ಷಗಳಿಂದ  ಜಿಲ್ಲೆಯಲ್ಲಿ  ಕುರುಬ ಸಮುದಾಯಕ್ಕೆ ಟಿಕೆಟ್ ನೀಡದೇ ಅನ್ಯಾಯ

ದಾವಣಗೆರೆ.ಏ.೨೦; ರಾಷ್ಟ್ರೀಯ ಪಕ್ಷಗಳಿಂದ ದಾವಣಗೆರೆ ಜಿಲ್ಲೆಯ ಕುರುಬ ಸಮಾಜಕ್ಕೆ ಟಿಕೇಟ್ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಹಾಲುಮತ ಮಹಾಸಭಾದ ಕಾರ್ಯಾಧ್ಯಕ್ಷ ಚಂದ್ರು ದೀಟೂರು ಬೇಸರ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಶೇಕಡ 55ರ ಹಿಂದುಳಿದ ವರ್ಗಗಳಿಗೆ ದಾವಣಗೆರೆ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡ ಎರಡು ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ, ಹೊನ್ನಾಳಿ,ಹರಿಹರ, ಚನ್ನಗಿರಿ ಉತ್ತರ, ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಭಾರತೀ ಜನತಾ ಪಕ್ಷವು ಒಂದೇ ಒಂದು ಅವಕಾಶ ನೀಡಿದೇ ಅನ್ಯಾಯ ಮಾಡಿದೆ. ಹಾಗೆಯೇ ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ನಂದಿಗಾವಿ ಶ್ರೀನಿವಾಸ್‌ ಅವರಿಗೆ ಮಾತ್ರ ಟಿಕೆಟ್ ನೀಡಿದೆ, ಹೊನ್ನಾಳಿ ಕ್ಷೇತ್ರದಿಂದ ಹೆಚ್, ಬಿ ಮಂಜಪ್ಪಗೆ ಟಿಕೇಟ್ ನೀಡಿಲ್ಲ.ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಮಹಾನಗರ ಪಾಲಿಕೆ ಸದಸ್ಯರಾಗಿರುವ ಡಿ. ಎನ್. ಶ್ರೀನಿವಾಸ್‌ , ದಾವಣಗೆರೆ ದಕ್ಷಿಣ ಕ್ಷೇತ್ರದಿಂದ  ಆನಂದಪ್ಪನವರು,  ರಾಜನಹಳ್ಳಿ ಶಿವಕುಮಾರ್‌,  ಕೊಳೇನಹಳ್ಳಿ ಸತೀಶ್‌,  ಶ್ರೀನಿವಾಸ್‌ ದಾಸಕರಿಯಪ್ಪನವರು ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದರು. ಹರಿಹರ ವಿಧಾನಸಭಾ ಕ್ಷೇತ್ರದಿಂದ  ಬೀರೇಶ್‌ ಅರ್ಜಿ ಸಲ್ಲಿಸಿದ್ದರು. ದಾವಣಗೆರೆ ಜಿಲ್ಲೆಯಲ್ಲಿ ಶೋಷಿತ ಹಿಂದುಳಿದ ವರ್ಗಗಳ (ಪ್ರವರ್ಗ 1, 2ಎ) ಕುರುಬ, ಗಂಗಾಮತ, ಉಪ್ಪಾರ, ನೇಕಾರ, ಮಡಿವಾಳ, ಗೊಲ್ಲರು, ಈಡಿಗರು, ಸವಿತಾ ಸಮಾಜ, ಮುಸ್ಲಿಂ ಸಮುದಾಯದವರು ಸೇರಿದಂತೆ ಹಲವಾರು ಸಮುದಾಯಗಳಿವೆ. ವಿಶ್ವಕರ್ಮ, ಈ ಸಮುದಾಯಗಳನ್ನು ಓಟ್ ಹಾಕಿಸಿಕೊಳ್ಳುವುದಕ್ಕೆ ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವುದು ಘೋಷಣೆಗೆ ಮಾತ್ರ ಸೀಮಿತವಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಅವಕಾಶ ನೀಡಬಹುದು ಎಂದು ಜಾತಕಪಕ್ಷಿಗಳ ಹಾಗೆ ಕಾದು ಕುಳಿತಿದ್ದವರಿಗೆ ಬಿಜೆಪಿ ಪಕ್ಷ 5 ರಲ್ಲಿ ಒಂದೂ ನೀಡಿಲ್ಲ. ಕಾಂಗ್ರೇಸ್‌ ಪಕ್ಷ 5 ರಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಕುರುಬ ಸಮುದಾಯದ ನಂದಿಗಾವಿ ಶ್ರೀನಿವಾಸ್‌ರವರಿಗೆ ಟಿಕೆಟ್ ನೀಡಿದೆ.  ರಾಜಕೀಯ ಪಕ್ಷಗಳಿಗೆ ಜೈಕಾರ ಹಾಕುತ್ತಲೇ ಓಟ್ ಬ್ಯಾಂಕ್‌ ಗಳಾಗಿರುವ ಶೋಷಿತ ಸಮುದಾಯಗಳು ತಮ್ಮ ಹಕ್ಕುಗಳನ್ನು ಕೇಳುವ ಧ್ವನಿಯನ್ನೇ ಕಳೆದುಕೊಳ್ಳುತ್ತಿವೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯವನ್ನು ಮುಂದಿನ ದಿನಗಳಲ್ಲಿ ಆಗಬಾರದು. ಈ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವುದು ದುರಂತ.ಹಿಂದುಳಿದ ವರ್ಗಗಳಿಗೆ ಇಡೀ ಜಿಲ್ಲೆಯಲ್ಲಿ ಕೊಟ್ಟಿರುವ ಒಂದೇ ಒಂದು ಅವಕಾಶ ಹರಿಹರ ವಿಧಾನಸಭಾ ಕ್ಷೇತ್ರ, ಹಿಂದುಳಿದ ವರ್ಗದ ಕುರುಬ ಸಮುದಾಯದ ಅಭ್ಯರ್ಥಿಯನ್ನು ಬೆಂಬಲಿಸಿ, ಗೆಲ್ಲಿಸಿ, ವಿಧಾನಸಭೆಗೆ ಕಳುಹಿಸುವ ಅನಿವಾರ್ಯತೆ ಈ ಸಮುದಾಯಗಳಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜು ಬಿ. ಮೌರ್ಯ,ಸಿ.ವೀರಣ್ಣ,ಜಿ.ಷಣ್ಮುಖಪ್ಪ,ಆರ್.ಬಿ ಪರಮೇಶ್,ಪ್ರವೀಣ್ ಎಸ್ ನಿಟುವಳ್ಳಿ,ಅಣ್ಣೇಶ್ ಹೆಚ್ ಉಪಸ್ಥಿತರಿದ್ದರು.