ರಾಯಚೂರುಗೆ ಏಮ್ಸ್ ಮಂಜೂರು ಮಾಡಿ

ದೇವದುರ್ಗ,ಮಾ.೩೦- ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ರಾಯಚೂರುಗೆ ಏಮ್ಸ್ ಸಂಸ್ಥೆ ಮಂಜೂರು ಮಾಡುವಂತೆ ಒತ್ತಾಯಿಸಿ ಶಿರಸ್ತೇದಾರ್ ಗೋವಿಂದ್‌ಗೆ ಆಟೋ ವಾಹನ ಚಾಲಕರ ಒಕ್ಕೂಟ ಮನವಿ ಸಲ್ಲಿಸಿತು.
ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರಾತಿ ಮಾಡುವಂತೆ ಜಿಲ್ಲಾ ಹೋರಾಟ ಸಮಿತಿ ಹಮ್ಮಿಕೊಂಡ ಧರಣಿ ೩೨೧ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹೋರಾಟಕ್ಕೆ ಸ್ಪಂದಿಸಿರುವುದು ಖಂಡನೀಯ. ಜಿಲ್ಲೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದು ಈ ಭಾಗದಲ್ಲಿ ಸುಸಜ್ಜಿತ ಶಿಕ್ಷಣ ಸಂಸ್ಥೆಗಳಿಲ್ಲ. ಏಮ್ಸ್ ಮಂಜೂರು ಮಾಡಿದರೆ ಇಲ್ಲಿನ ಜನರಿಗೆ ಉತ್ತಮ ಆರೋಗ್ಯದ ಜತೆಗೆ ಉದ್ಯೋಗಾವಕಾಶಗಳು ಸಿಗಲಿವೆ ಎಂದು ಮನವಿ ಮಾಡಿದರು.
ಕೂಡಲೇ ಕೇಂದ್ರ ಸರ್ಕಾರ ರಾಯಚೂರಿಗೆ ಏಮ್ಸ್ ಸಂಸ್ಥೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. ಗೌರವಾಧ್ಯಕ್ಷ ಹನುಮಯ್ಯ ನಾಡಿದಾಳ್, ಅಧ್ಯಕ್ಷ ರಪಿ, ಮಹಾಂತೇಶ್, ಶಿವಕುಮಾರ್, ಮುದ್ದುರಂಗಪ್ಪ ಪೂಜಾರಿ, ಶರಣಪ್ಪ, ಯಂಕಪ್ಪ, ಅರ್ಜುನ್, ಹನುಮಂತ, ಮೈನುದ್ದೀನ್, ಎಚ್.ಶಿವರಾಜ್ ಇತರರಿದ್ದರು.