ರಾಮನವಮಿ ಮೆರವಣೆಗೆ ವೇಳೆ ಮಾರಾಮಾರಿ ಇಬ್ಬರಿಗೆ ಇರಿತ

ಹಾಸನ,ಮಾ.೩೧-ರಾಮನವಮಿ ಮೆರವಣೆಗೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಅನ್ಯಕೋಮಿನ ಯುವಕರ ಗುಂಪೊಂದು ಇಬ್ಬರು ಅಪ್ರಾಪ್ತ ಬಾಲಕರಿಗೆ ಚಾಕುವಿನಿಂದ ಇರಿದಿರುವ ಘಟನೆ ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ನಡೆದಿದೆ.
ಗಾಯಗೊಂಡ ಮುರಳಿ, ಹರ್ಷಗೆ ಎಂಬ ಬಾಲಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಖುರಾನ್ ಪಠಣ:
ಇನ್ನು ವಿಶ್ವ ವಿಖ್ಯಾತ ಬೇಲೂರಿನ ಐತಿಹಾಸಿಕ ಚನ್ನಕೇಶವಸ್ವಾಮಿ ರಥೊತ್ಸವದ ವೇಳೆ ನಡೆಸಲಾಗುತ್ತಿದ್ದ ಖುರಾನ್ ಪಠಣ ಈ ವರ್ಷ ವಿವಾದದ ಸ್ವರೂಪ ಪಡೆದುಕೊಂಡಿದೆ, ಈ ವರ್ಷದಿಂದ ರಥೋತ್ಸವದ ವೇಳೆ ಖುರಾನ್ ಪಠಣ ಬೇಡಾ ಎಂದು ಹಿಂದೂಪರ ಸಂಘಟನೆಗಳು ಹೋರಾಟ ನಡೆಸಿ ಮೇ ೩ರ ಒಳಗೆ ತೀರ್ಮಾನ ಮಾಡದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ,ಇದೀಗ ಈ ಹೋರಾಟ ರಾಜ್ಯ ಪುರಾತತ್ವ ಇಲಾಖೆಯ ಅಂಗಳಕ್ಕೆ ತಲುಪಿದೆ. ಶತಮಾನಗಳಿಂದ ನಡೆದುಕೊಂಡು ಬರ್ತಿದ್ದ ಸಂಪ್ರದಾಯ ಮುಂದುವರೆಸಬೇಕು ಎನ್ನೋ ಒತ್ತಾಯ ಒಂದೆಡೆಯಾದರೆ, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಆಚರಣೆ ಬೇಡ ಎನ್ನುವ ಒತ್ತಾಯ ಹಿಂದುಪರ ಸಂಘಟನೆಗಳಿಂದ ಕೇಳಿ ಬಂದಿದ್ದು ಈ ಮಧ್ಯೆ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಯಾಗಿದೆ.