ರಾಜ್ಯಮಟ್ಟದ ಜೋಡಿ ಎತ್ತಿನಗಾಡಿ ಓಟ’ದ ಸ್ಪರ್ಧೆ

ಸಾಣೇಹಳ್ಳಿ: ಜೂ. 25; ಬಸವಣ್ಣನವರು ‘ದಯವಿಲ್ಲದಾ ಧರ್ಮ ಅದಾವುದಯ್ಯಾ’ ಎಂದು ಪ್ರಶ್ನಿಸಿದ್ದಾರೆ. ಇದರರ್ಥ ಸಕಲ ಜೀವಿಗಳಲ್ಲಿಯೂ ದಯೆ ತೋರಬೇಕು ಎಂಬುದು. ಆದರೆ ಎಲ್ಲ ಸಂದರ್ಭದಲ್ಲಿ ದಯೆಯನ್ನು ಅನುಕರಣೆ ಮಾಡ್ಲಿಕ್ಕೆ ಆಗಲ್ಲ. ಹಾಗಂತ ಅನಗತ್ಯವಾಗಿ ಪ್ರಾಣಿಗಳಿಗೆ ಹಿಂಸೆ ಕೊಡಬಾರದು. ಸ್ಪರ್ಧೆಯ ಸಂದರ್ಭದಲ್ಲಿ ಎತ್ತುಗಳಿಗೆ ಚಾಟಿಯ ಏಟನ್ನು ಕೊಟ್ಟರೆ ನಮ್ಮ ಹೃದಯಕ್ಕೇ ಚಾಟಿ ಕೊಟ್ಟಂತೆ ಭಾಸವಾಗುತ್ತದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಹೇಳಿದರು.ಇಲ್ಲಿನ ಯುವಕರು ಏರ್ಪಡಿಸಿದ್ದ ‘ರಾಜ್ಯಮಟ್ಟದ ಜೋಡಿ ಎತ್ತಿನಗಾಡಿ ಓಟ’ದ ಸ್ಪರ್ಧೆಯನ್ನು ಉದ್ಘಾಟಿಸಿ  ಮಾತನಾಡಿದ ಶ್ರೀ ಗಳು ಸ್ಪರ್ಧೆಗಳು ಮಾನವೀಯತೆಯ ಎಲ್ಲೆಯನ್ನು ಮೀರಬಾರದು. ಎತ್ತಿನ ಗಾಡಿಗಳ ಈ ಸ್ಪರ್ಧೆಯು ಎತ್ತುಗಳ ಬಗೆಗೆ ಕಾಳಜಿವಹಿಸುವಂತೆ ಮಾಡುತ್ತದೆ. ಅಲ್ಲದೆ ನಮ್ಮ ಪರಂಪರೆಯನ್ನೂ ಪೋಷಿಸುತ್ತದೆ. ಯುವಕರ ಈ ಉತ್ಸಾಹ ಸನ್ಮಾರ್ಗದ ಕಡೆಗೆ ಕರೆದುಕೊಂಡು ಹೋಗುವಂತಾಗಬೇಕು. ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮ ಮಠ, ಕಲಾಸಂಘದಿAದ ವರ್ಷಪೂರ್ತಿ ನಿರಂತರವಾಗಿ ಸಾತ್ವಿಕ ಚಟುವಟಿಕೆಗಳು ನಡೆಯುತ್ತವೆ. ಕ್ರೌರ್ಯದ, ಹಿಂಸೆಯ ಚಟುವಟಿಕೆಗಳಿಗಿಂತ ಸಾತ್ವಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಆಗ ಸಹಜವಾಗಿಯೇ ನಮ್ಮೊಡನೆ ಇರುವ ಪ್ರಾಣಿಗಳ ಬಗ್ಗೆಯೂ ಪ್ರೀತಿ ತಾನಾಗಿಯೇ ಮೂಡುತ್ತದೆ ಎಂದರು.ಯುವಮುಖಂಡ ಹೆಬ್ಬಳ್ಳಿಯ ದಿಲೀಪ್ ಗುರುಸ್ವಾಮಿ ಮಾತನಾಡಿ ಜಾನಪದ ಸೊಗಡು ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ಕೆಲಸವನ್ನು ಸಾಣೇಹಳ್ಳಿಯ ಯುವಕರು ಮಾಡ್ತಾ ಇರುವುದು ತುಂಬಾ ಸಂತೋಷ. ನೈತಿಕತೆ, ಪ್ರಾಮಾಣಿಕತೆಯೇ ನಮ್ಮ ಸಂಸ್ಕöÈತಿಯಲ್ಲಿದೆ. ನೈತಿಕತೆ, ಪ್ರಾಮಾಣಿಕತೆ ಪ್ರತಿಯೊಬ್ಬ ಯುವಕರು ರೂಢಿಸಿಕೊಳ್ಳಬೇಕೆಂದರು.ರಾಜ್ಯದ ಮೂಲೆ ಮೂಲೆಯಿಂದ ಸುಮಾರು ಐವತ್ತು ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನವನ್ನು ಬೌರ್ಯ ಮತ್ತು ಬ್ರಾಂಡ್ ಅಣ್ಣಪ್ಪ ಸಾಣೇಹಳ್ಳಿ, ದ್ವಿತೀಯ ಬಹುಮಾನವನ್ನು ಇಂದ್ರ ಮತ್ತು ಬೀರ ಮಂಡ್ಯ, ತೃತೀಯ ಬಹುಮಾನವನ್ನು ಮಹಾರಾಜ ಮತ್ತು ಜಗ್ಗು, ಚಿಕ್ಕಮಗಳೂರು, ಚತುರ್ಥಿ ಬಹುಮಾನವನ್ನು ಸರ್ಜ ಮತ್ತು ಕಲ್ಕಿ, ಅಜ್ಜಂಪುರ ಪಡೆದುಕೊಂಡವು.