
ಬೆಂಗಳೂರು,ಮೇ೪- ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಕರಾವಳಿಯ ಎಲ್ಲಾ ಜಿಲ್ಲೆಗಳು, ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ನಲ್ಲಿ ಮಳೆಯಾಗಲಿದೆ.ಅದರಲ್ಲೂ, ದಕ್ಷಿಣ ಒಳನಾಡಿನ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಪ್ರಮುಖವಾಗಿ ಬೆಂಗಳೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರದಲ್ಲಿ ಮಳೆಯಾಗಲಿದೆ.
ಕಾರವಾರ ಮತ್ತು ವಿಜಯಪುರದಲ್ಲಿ ೩೬.೫ ಡಿಗ್ರಿ ಸೆಲ್ಸಿಯಸ್ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ತುಮಕೂರು, ಪಾವಗಡ, ಚನ್ನಪಟ್ಟಣ, ರಾಮನಗರ, ಹರದನಹಳ್ಳಿ, ನಾಲ್ವತವಾಡ, ಕುಣಿಗಲ್, ಯಡ್ರಾಮಿ, ಜೇವರ್ಗಿ, ಕೋಡ್ಲಾ, ಫರಹತಾಬಾದ್, ಗುಂಡಗುರ್ತಿ, ಕಕ್ಕೇರಿ, ಪರಶುರಾಂಪುರ, ಮದ್ದೂರು.
ಮಳವಳ್ಳಿ, ಚಾಮರಾಜನಗರ, ಗುಬ್ಬಿ, ಬುಕ್ಕಪಟ್ಟಣ, ಬಂಡೀಪುರ, ದೊಡ್ಡಬಳ್ಳಾಪುರ, ಅಡಕಿ, ಅರಕಲಗೂಡು, ಚನ್ನರಾಯಪಟ್ಟಣ, ಕೋಣನೂರು, ಹೆಬ್ಬೂರು, ಮೈಸೂರು, ಕೆಂಭಾವಿ, ನಾರಾಯಣಪುರ, ಮುಧೋಳ, ಸೇಡಂ, ನೆಲೋಗಿ, ಗೋಪಾಲನಗರ, ಉತ್ತರಹಳ್ಳಿ, ಬೆಂಗಳೂರು ಕೆಐಎಎಲ್, ಶ್ರೀಮಂಗಲ, ಸುಂಟಿಕೊಪ್ಪ, ಸರಗೂರು, ಟಿ ನರಸೀಪುರ, ಶ್ರೀರಂಗಪಟ್ಟಣ, ಮಧುಗಿರಿ, ಸಿರಾ, ಚಿಕ್ಕನಹಳ್ಳಿ, ಹಿಡಿಯೂರು, ಕೊಳ್ಳೇಗಾಲ, ಶಿಡ್ಲಘಟ್ಟದಲ್ಲಿ ಮಳೆಯಾಗಲಿದೆ.