ರಸ್ತೆ ಕಾಮಗಾರಿಗೆ ಭೂಮಿಪೂಜೆ

ಹುಬ್ಬಳ್ಳಿ,ಫೆ23: ತಾಲೂಕಿನ ನೂಲ್ವಿ ಗ್ರಾಮದ ಅಂದಾಜು ಮೊತ್ತ 18 ಲಕ್ಷ ರೂ. ಗಳ ರಸ್ತೆ ಕಾಮಗಾರಿ ಭೂಮಿಯ ಪೂಜೆಯನ್ನು ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕುಸುಮಾವತಿ ಚ ಶಿವಳ್ಳಿಯವರು ನೆರವೇರಿಸಿದರು.
ನಂತರ ಮಾತನಾಡಿದ ಅವರು ತಮ್ಮ ಗ್ರಾಮದ ಬಹುದಿನದ ಬೇಡಿಕೆಯ ರಸ್ತೆ ಕಾಮಗಾರಿಯಾಗಿದ್ದು, ಇದರ ಉಪಯೋಗ ತಮ್ಮೆಲ್ಲರಿಗೂ ದೊರಕಲಿ ಎಂದು ತಿಳಿಸಿದರು.
ತಮ್ಮ ಗ್ರಾಮಕ್ಕೆ ಹತ್ತು ಹಲವಾರು ಸೌಲಭ್ಯ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಸೇವೆಯನ್ನು ಮಾಡಿದ್ದೇನೆ ತಮ್ಮೆಲ್ಲರ ಬೆಂಬಲ ಸದಾ ಇರಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಚಂದ್ರಸ್ವಾಮಿ ಹಿರೇಮಠ ಮುಖಂಡರಾದ ಜಗನ್ನಾಥ ಸಿದ್ದನಗೌಡ್ರ, ಗ್ರಾಪಂ ಅಧ್ಯಕ್ಷರ ಚಂದ್ರಗೌಡ ಪಾಟೀಲ, ಸರೋಜಾ ಗಾಡದ, ಗಂಗಾಧರಗೌಡ ಸಿದ್ದನಗೌಡ, ದೇವೇಂದ್ರಗೌಡ ಧರ್ಮಗೌಡ, ಅಶೋಕ ಬಲ್ಲಣ್ಣವರ, ಹಸೆನ ಕುರಟ್ಟಿ, ಗದಿಗೆಪ್ಪ ಶಿರೂರ, ನಿಂಗಪ್ಪ ಮಾಯಕಾರ, ಈಶ್ವರ ಹೊಳೆಮ್ಮನವರ, ಕಂತೆಪ್ಪ ಕೊಪ್ಪದ, ಮಲ್ಲಮ್ಮ ಜಾಲಿಕಟ್ಟಿ, ಉಡಚಮ್ಮ ಕಂಬಳಿ, ಬಸವರಾಜ ಬಡಿಗೇರ, ಕಲ್ಲಪ್ಪ ಬೆಟದೂರ, ಉಡಚಪ್ಪ ಜಿಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.