ರಮಾಸಾಹೇಬಾ ಚಿತ್ರ ಪ್ರಯೋಗಶೀಲ ಗುಣ ಹೊಂದಿದೆ:ಮಹಿಪಾಲರೆಡ್ಡಿ ಮುನ್ನೂರ

ವಿಜಯಪುರ : ಆ.8:ರಮಾ ಸಾಹೇಬಾ ಚಿತ್ರವು ಸೂಕ್ಷ್ಮ ಪ್ರಯೋಗಶೀಲ ಗುಣಗಳನ್ನು ಹೊಂದಿದೆ. ಅಂಬೇಡ್ಕರ್ ಆಗಿ ಪೆÇ್ರ ಎಚ್ ಟಿ ಪೆÇೀತೆ ಅವರು ರಾಮಾಸಾಹೇಬ್ ಚಿತ್ರದಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ ಎಂದು ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಅವರು ಹೇಳಿದರು.

ಅವರು ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಜಯಪುರದ ಸುನೀಲಕುಮಾರ ಸುಧಾಕರ ನಿರ್ದೇಶನದ ರಮಾಸಾಹೇಬಾ ಕಿರು ಚಿತ್ರದ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ರೇಖಾ ಪಾಟೀಲ ಅವರು ಚಿತ್ರದಲ್ಲಿ ನಟಿಸುತ್ತಾ ನಟಿಸುತ್ತಾ ರಾಮಬಾಯಿಯಾಗಿ ಜೀವಂತಕಿ ತುಂಬಿದ್ದಾರೆ, ಚಿತ್ರದಲ್ಲಿ ಕ್ಯಾಮೆರಾ ಸಂಭಾಷಣೆ, ಡಬ್ಬಿಂಗ್ ಎಲ್ಲವೂ ಸೊಗಸಾಗಿ ಮೂಡಿಬಂದಿದೆ ಎಂದು ಅವರು ಹೇಳಿದರು.

ಕೇಂದ್ರೀಯ ವಿವಿ ಪ್ರಾಧ್ಯಪಕಿ ಮಹಿಮಾ ರಾಜ್ ಅವರು ಮಾತನಾಡಿ ಚಿತ್ರ ಸೊಗಸಾಗಿ ಮೂಡಿ ಬಂದಿದ್ದಕ್ಕೆ ಎಲ್ಲರನ್ನು ಅಭಿನಂದಿಸುತ್ತೇನೆ ಮರಾಠಿಯಲ್ಲಿ ಕೆಲವು ಸಿನಿಮಾಗಳು ಬಂದಿವೆ ಆದರೆ ಕನ್ನಡದಲ್ಲಿ ಬಂದಿರಲಿಲ್ಲ ಈ ಥರ ಚಿತ್ರಗಳು ಹೆಚ್ಚಾಗಿ ಬರಬೇಕು ಈ ಸಿನಿಮಾದಲ್ಲಿ ಸಾಕಷ್ಟು ಪ್ರಯೋಗಶೀಲ ಗುಣಗಳಿವೆ ಒಂದು ಕಡೆ ರಮಾಬಾಯಿ ಕಷ್ಟದ ಜೀವನ ಸಾಗಿಸುತ್ತಿದ್ದಾರೆ ಇನ್ನೊಂದೆಡೆ ಅಂಬೇಡ್ಕರ್ ಅವರ ಶೈಕ್ಷಣಿಕ ಮತ್ತು ಔದ್ಯೋಗಿಕ ಜೀವನವನ್ನು ಸುಂದರವಾಗಿ ತೋರಿಸುವ ಕೆಲಸವನ್ನು ನಿರ್ದೇಶಕ ಸುನೀಲಕುಮಾರ ಸುಧಾಕರ ಅವರು ಮಾಡಿದ್ದಾರೆ ಸಾಮಾಜಿಕ ಪ್ರಜ್ಞೆ ಮೂಡಿಸುವ ಏಕೀಕರಣಗೊಳಿಸುವ ಕೆಲಸವನ್ನು ಒಟ್ಟೊಟ್ಟಿಗೆ ಮಾಡುತ್ತದೆ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಅವರು ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳುವುದು ಭಾಳ ಇದೆ ಹಿಂದೂ ಧರ್ಮದ ದೇವರ ಮೇಲೆ ರಮಾತಾಯಿ ಅವರಿಗೆ ಭಾಳ ಭಕ್ತಿ ಇತ್ತು,ರಮಾತಾಯಿ ತ್ಯಾಗದಿಂದ ಬಾಬಾಸಾಹೇಬರು ವಿಶ್ವ ಮಟ್ಟಕ್ಕೆ ಬೆಳೆದರೂ ಪೆÇೀತೆ ಸರ್ ಅಂಬೇಡ್ಕರ್ ಅವರ ಪಾತ್ರ ಮಾಡಿದ್ದೂ ನಮ್ಮ ಮನೆಯ ಅಣ್ಣನೇ ಮಾಡಿದಷ್ಟು ಖುಷಿಯಾಗಿದೆ,ಈ ಸಿನಿಮಾ ಎಲ್ಲರ ಕಣ್ಣಲ್ಲಿ ನೀರು ತರಿಸಿತು, ಈ ಅಪರೂಪದ ಸಿನಿಮಾ ಶಾಲೆ -ಕಾಲೇಜುಗಳಲ್ಲಿ ಪ್ರದರ್ಶನಗೊಳ್ಳಬೇಕು ಎಂದರು.

ದಸಾಪ ರಾಜ್ಯ ಖಜಾಂಚಿ ಡಾ ಎಚ್ ಬಿ ಕೋಲ್ಕಾರ ಅವರು ಮಾತನಾಡಿ ನಮ್ಮ ಕಾಲದ ಬಾಬಾಸಾಹೇಬರಾಗಿ ನಮ್ಮ ಮಧ್ಯ ಪೆÇೀತೆ ಅವರು ಇದ್ದಾರೆ ಅಕ್ಷರ ಕ್ರಾಂತಿಯ ಈ ಚಿತ್ರದಲ್ಲಿ ಬದುಕೇ ಒಂದು ಹಾಡಾಗಿದೆ ಎಲ್ಲ ನೋವುಗಳನ್ನು ಕಲಾತ್ಮಕವಾಗಿ ಚಿತ್ರಿಸುವ ಕಲೆ ಕರಗತ ಮಾಡಿಕೊಂಡಿರುವ ನಿರ್ದೇಶಕ ಸುನೀಲಕುಮಾರ ಸುಧಾಕರ ಅವರ ಶ್ರಮ ಸಾರ್ಥಕವಾದದ್ದು ಎಂದರು. ನಿಕಟ ಪೂರ್ವ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅವರು ಮಾತನಾಡಿ ರಮಾಬಾಯಿ ಮತ್ತು ಅಂಬೇಡ್ಕರ್ ಎರಡು ಪಾತ್ರಧಾರಿಗಳು ಪೈಪೆÇೀಟಿಗೆ ಬಿದ್ದಂತೆ ನಟಿಸಿದ್ದಾರೆ ಈ ರೀತಿಯ ಸಿನಿಮಾ ನೋಡಲು ಪ್ರೇಕ್ಷಕರಿಗೆ ವಿಶೇಷ ಮನಸ್ಥಿತಿ ಬೇಕಾಗುತ್ತದೆ ಅಂಬೇಡ್ಕರ್ ಅವರದ್ದು ಗಂಭೀರ ವ್ಯಕ್ತಿತ್ವ ಅಂತಹ ಪರಿಣಾಮಕಾರಿ ಪಾತ್ರ ಈ ಸಿನಿಮಾದಲ್ಲಿ ಅಂಬೇಡ್ಕರ್ ಅವರನ್ನು ಕನ್ನಡದ ಅಂಬೇಡ್ಕರ್ ಆಗಿ ತೋರಿಸಿದ್ದು ಹೆಮ್ಮೆಯ ವಿಷಯ ಎಂದು ಹೇಳಿದರು. ಅರುಣ ಜೋಳದ ಕೂಡ್ಲಗಿ ಅವರು ಮಾತನಾಡಿ ದೃಶ್ಯದಲ್ಲಿ ರಮಾಬಾಯಿ ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಪೆÇ್ರ ಎಚ್ ಟಿ ಪೆÇೀತೆ ಅವರು ಮಾತನಾಡಿ ಚಿತ್ರ ತಂಡದ ಪ್ರೀತಿ ವಿಶ್ವಾಸಕ್ಕೆ ಪಾತ್ರನಾಗಿ ಈ ಚಿತ್ರ ನಾನು ಅಭಿನಯಿಸಿದೆ.ಚಿತ್ರೀಕರಣ ವೇಳೆ ಭಾವುಕ ನಾಗಿ ಅತ್ತಿದ್ದೆ, ಚಿತ್ರದಲ್ಲಿ ಕನಿಷ್ಠ ಬಡತನ ನೈಜವಾಗಿ ತೋರಿಸುವ ಕೆಲಸ ಮಾಡಿದ ನಿರ್ದೇಶಕರ ಕಾರ್ಯ ಶ್ಲಾಘನೀಯವಾದುದು ಸಿನಿಮಾಕ್ಕೆ ಇರುವ ಮಿತಿಗಳ ನಡುವೆ ನಿರ್ದೇಶಕರು ಉತ್ತಮ ಪ್ರಯತ್ನ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ದಸಾಪ ರಾಜ್ಯಾಧ್ಯಕ್ಷ ಅರ್ಜುನ ಗೊಳಸಂಗಿ, ನಿರ್ದೇಶಕ ಸುನೀಲಕುಮಾರ ಸುಧಾಕರ, ನಿರ್ಮಾಪಕ ಜೀವನ ಗೊಳಸಂಗಿ, ನಟಿ ರೇಖಾ ಪಾಟೀಲ, ಕಲಾವಿದರಾದ ವಿಶ್ವೇಶ್ವರಯ್ಯ ಮಠಪತಿ, ಬಾಬು ತಡಲಗಿ, ಲಕ್ಷ್ಮಣ ಹಂದ್ರಾಳ, ಲಾಯಪ್ಪ ಇಂಗಳೆ , ಕಲ್ಲಪ್ಪ ಶಿವಶರಣ, ರಾಹುಲ ಮೆಳ್ಳಿ, ಸುನೀಲ ಕಳ್ಳಿಮನಿ, , ಚಂದ್ರಶೇಖರ ಅಂಬಲಿ, ಜಗದೀಶ ಗಲಗಲಿ, ಶ್ರೀಶೈಲ ನಾಗರಾಳ ,ಪ್ರೀತಿ ಪಾಟೀಲ ಸೇರಿದಂತೆ ಕಲ್ಬುರ್ಗಿವಿವಿ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರು,ಸಾಹಿತಿಗಳು, ಕಲಾವಿದರು,ವಿದ್ಯಾರ್ಥಿಗಳು ಹಾಗೂ ಎಚ್.ಟಿ.ಪೆÇೀತೆ ಅವರ ಅಭಿಮಾನಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.