ರಕ್ತದಾನ ಶ್ರೇಷ್ಠವಾದದ್ದು ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಬೇಕು: ಸನ್ನಿ ಗೌಡ ತುನ್ನೂರ

ಶಹಾಪುರ :ಜೂ.15: ವಡಗೇರಾ.ನವ ಚೇತನ ಟ್ರಸ್ಟ್ ವಡಗೇರಾ ಹಾಗೂ ಗೆಳೆಯರ ಬಳಗದ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಶಾಸಕರ ಸುಪುತ್ರ ಸನ್ನಿ ಗೌಡ ತನ್ನೂರವರು. ಉದ್ಘಾಟಿಸಿ ಮಾತನಾಡಿದರು. ರಕ್ತದಾನ ಮಹಾದಾನ ಉಚಿತ ರಕ್ತದಾನ ಶಿಬಿರದಿಂದ ಬಡ ಜನರಿಗೆ ತುಂಬಾ ಅನುಕೂಲವಾಗಲಿದೆ ಪ್ರತಿಯೊಬ್ಬರೂ ಕೂಡ ವರ್ಷದಲ್ಲಿ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು ನವ ಚೇತನಟ್ರಸ್ಟನ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಸಂದರ್ಭದಲ್ಲಿ ಯಾರಿಗಾದರೂ ರಕ್ತ ಬೇಕಾದರೆ ನನಗೆ ಕರೆ ಮಾಡಿ ನಾನು ಸ್ವತಃ ಬಂದು ರಕ್ತದಾನ ಮಾಡುತ್ತೇನೆ ಎಂದು ಹೇಳಿದರು . ಈ ಸಮಯದಲ್ಲಿ ಶಾಸಕರ ಸುಪುತ್ರ ಸನ್ನಿ ಗೌಡ ಅವರು ಕೂಡ ರಕ್ತದಾನ ಮಾಡಿದರು. ಪಟ್ಟಣದ ಹಿರಿಯ ಮುಖಂಡ ಭಾಷುಮಿಯಾ ನಾಯ್ಕೋಡಿ.ಮಾತನಾಡಿದರು . ಯುವಕರ ದುಶ್ಚಟಗಳಿಗೆ
ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳದೆ ಪ್ರತಿಯೊಬ್ಬರೂ ಕೂಡ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವಂತಹ ಕೆಲಸಕ್ಕೆ ಮುಂದಾಗಲು ಸಲಹೆ ನೀಡಿದರು. ನವಚೇತನ ಟ್ರಸ್ಟ್, ಸುಮಾರು 5 ವರ್ಷಗಳಿಂದ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡುತ್ತಿರುವುದಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಾದ. ರಾಘವೇಂದ್ರ ಕಲಾಲ. ಶರಣಗೌಡ ಐಕುರ. ಮೈಬೂಬ್ ಖುರೇಶಿ.ಇವರಿಗೆ ಸನ್ಮಾನಿಸಲಾಯಿತು.ಈ ಶಿಬಿರದಲ್ಲಿ ಯುವಕರು ಮಹಿಳೆಯರು ಅಧಿಕಾರಿಗಳು ಇನ್ನಿತರರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ . ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಂಗಣ್ಣ ಜಡಿ. ವಹಿಸಿಕೊಂಡಿದ್ದರು. ವಡಗೇರಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಜಗನ್ನಾಥ ರೆಡ್ಡಿ ತಂಗಡಗಿ .ಸಭೆ ಮಾಜಿ ಸದಸ್ಯ ಮಲ್ಲಣ್ಣ ಐಕೂರ. ಸಂಗುಗೌಡ ಮಾಲಿ ಪಾಟೀಲ. ಮಕ್ಕಳ ತಜ್ಞ ಡಾ. ಸುರೇಶ. ಡಾ. ಭವಾನಿ.ಬಸವರಾಜ ನೀಲಹಳ್ಳಿ. ಕರವೇ ಮುಖಂಡ ಶರಣು ಇಟಗಿ. ಮರಿಲಿಂಗಪ್ಪ ಸಾಹುಕಾರ ಕುಮನೂರ .ಸೂಗಪ್ಪ ಸಾಹುಕಾರ ಅಮಂಗಿ.ಮಹೇಶ್ ಗೌಡ ಕ್ಯಾತನಾಳ. ಕಂದಾಯ ನಿರೀಕ್ಷಕ ಸಂಜು ಕುಮಾರ. ನಿಂಗಣಗೌಡ ಬೋರಡ್ಡಿ. ರಾಚಣ್ಣ ಗೌಡ ಕರಡ್ಡಿ. ಅಮರೇಶ್ ಬೂತಿ. ಡಾ. ಸುರಗಿಮಠ. ಅರ್ಚನಾ.ಅಯ್ಯಪ್ಪ ಹಾಲಗೇರಾ . ಶರಣು ಕುರಿ. ರುಕುಮುದ್ದೀನ್ ದೇವದುರ್ಗ. ಶಿವರಾಜ ಬಾಗುರ. ಮರಿಲಿಂಗ ಗೋನಾಲ. ಈಶ್ವರ್ ಚಟ್ನಳ್ಳಿ.ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶಿಕ್ಷಕ ನಾಗಪ್ಪ ನಿರೂಪಿಸಿ ವಂದಿಸಿದರು.