(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಗರದ ಡಿ ಆರ್. ಕೆ ರಂಗ ಸಿರಿಯಲ್ಲಿ ನಿನ್ನೆ ಸಿನಿಮಾ ಮತ್ತು ಚಿತ್ರಕಥೆ ಬರೆಯೋದು ಹೇಗೆ ಎನ್ನುವ ವಿಷಯ ಕುರಿತು ಒಂದು ದಿನದ ಕಾರ್ಯಗಾರವನ್ನು ರಂಗ ಜಂಗಮ ಸಂಸ್ಥೆ ಡಿ.ಕಗ್ಗಲು ಹಾಗೂ ಅವ್ಯಕ್ತ ಫಿಲಂಸ್ ಸಹಯೋಗ ದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಬಿರದ, ಸಿನಿಮಾ ನಿರ್ದೇಶಕ ಸಂತೋಷ್ ಗೋಪಾಲ್ ರೆಡ್ಡಿ ಅವರು. ಮೀಡಿಯಾ ಮತ್ತು ರಂಗಭೂಮಿಗೆ ಯುವ ಬರಹಗಾರರ ಅವಶ್ಯಕತೆ ಇದೆ ಪ್ರಾದೇಶಿಕ ಭಿನ್ನತೆಗಳನ್ನು ಒಳಗೊಂಡಿರುವ ಕಥೆಗಳು ಕಾದಂಬರಿಗಳು ಮತ್ತು ನಾಟಕ ಹಾಗೂ ಸಿನಿಮಾ ಸ್ಕ್ರಿಪ್ಟ್ಗಳನ್ನು ರಚಿಸುವ ಮೂಲಕ ನಾಡಿಗೆ ಹೊಸ ಆಯಾಮವನ್ನು ಪರಿಚಯಿಸಬೇಕಾದ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮೇಲಿದೆಂದರು.
ಪ್ರಸ್ತಾವಿಕವಾಗಿ ಮಾತನಾಡಿದ ರಂಗ ನಿರ್ದೇಶಕ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ಇಂತಹ ತರಬೇತಿ ಶಿಬಿರಗಳು ಮತ್ತು ಕಾರ್ಯಗಾರ ಅವಶ್ಯಕತೆ ಇಂದಿನ ಯುವ ಸಮೂಹಕ್ಕೆ ಅವಶ್ಯಕತೆ ಇದೆ. ಅದೇ ನಿಟ್ಟಿನಲ್ಲಿ ಈ ಭಾಗದ ಸಮೂಹಕ್ಕೆ ಇದರ ಉಪಯೋಗವಾಗಲಿ ಎಂದರು.
ರಂಗಭೂಮಿ ಕಲಾವಿದ ಅಮರೇಶ್ ಹಚ್ಚೊಳಿಮಠ, ಉಪನ್ಯಾಸಕ ಕಾಶಿಮಲಿ ಹಾಗೂ ರಂಗಭೂಮಿ ಮತ್ತು ಕಥೆಗಾರ ಮರಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವಿವಿಧಡೆಯಿಂದ ಶಿಬಿರಾರ್ಥಿಗಳು ಭಾಗವಹಿಸಿದ್ದರು.