ಯುವ ಜನಾಂಗ ಪಾಶ್ಚಾತ್ಯ ಸಂಸ್ಕøತಿಯತ್ತ ವಾಲುತ್ತಿರುವುದು ವಿಷಾದನೀಯ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.7: ಇಂದಿನ ಯುವ ಜನಾಂಗ ನಮ್ಮ ಸಂಸ್ಕøತಿಯ ಸೊಬಗು ಬಿಟ್ಟು ಪಾಶ್ಚಾತ್ಯ ಸಂಸ್ಕøತಿಯತ್ತ ವಾಲುತ್ತಿರುವುದು ಅತ್ಯಂತ ವಿಷಾದದ ಸಂಗತಿ ಎಂದು ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಹೇಳಿದರು.
ಇಲ್ಲಿಗೆ ಸಮೀಪದ ಹಿಟ್ಟಿನಹಳ್ಳಿಯಲ್ಲಿ ಕರ್ನಾಟಕ ರಾಜ್ಯಕ್ಕಮಹಾದೇವಿ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಮುಕ್ತ ಹಾಗೂ ಬ ಘಟಕದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲಾ ಯುವ ಪೀಳಿಗೆಯವರು ಶಿಬಿರದ ಸದುಪಯೋಗ ಪಡೆದುಕೊಂಡು ಉನ್ನತ ಹುದ್ದೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಸೇವೆಯ ಕಾರ್ಯವನ್ನು ಮಾಡುವುದು ಅವಶ್ಯ. ಮನುಷ್ಯನಲ್ಲಿ ಹುಮ್ಮಸ್ಸು, ಹಟ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ್ದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಪಿ.ಜಿ.ತಡಸದ ಅವರು ಮಾತನಾಡಿ, ‘ಮಾತು ಬಲ್ಲವ ಮಾಣಿಕ್ಯ ತಂದ’ ಎಂಬ ಗಾದೆ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸುಂದರವಾಗುತ್ತದೆ. ಸಂವಹನಕ್ಕೆ ಅತೀ ಮುಖ್ಯವಾಗಿ ಬೇಕಾಗುವುದು ಭಾಷೆ. ಅದನ್ನು ಅರಿತು ನಡೆಯುವುದನ್ನು ರೂಢಿಸಿಕೊಳ್ಳುವುದು ಅಗತ್ಯವೆಂದು ಹೇಳಿದರು.
ಸಂವಹನಕಾರನ ಸಂದೇಶ ಕೇಳುಗನಿಗೆ ಅರ್ಥವಾಗುವಂತಿದ್ದರೆ ಮಾತ್ರ ಸಂವಹನ ಯಶಸ್ವಿಯಾಗಲು ಸಾಧ್ಯ. ಸಂವಹನಕಾರ, ಸಂದೇಶ, ಸಂವಹನ ಕೇಳುಗ ಈ ಮೂರು ಅಂಶಗಳು ಸಂವಹನಕ್ಕೆ ಅತೀ ಮುಖ್ಯವಾಗಿವೆ. ಸಂವಹನದಲ್ಲಿ ಅಡೆತಡೆಗಳನ್ನು ನಿವಾರಿಸಿ ಸಂದೇಶವನ್ನು ತಲುಪಿಸುವ ಪ್ರಯತ್ನವನ್ನು ಮಾಡಬೇಕು ಹಾಗೂ ಸಂದರ್ಭನುಸಾರವಾಗಿ ಮಾತನಾಡುವ ಕಲೆಯನ್ನು ಹೊಂದುವುದೇ ಸಂವಹನವಾಗಿದೆ ಎಂದರು.
ಇನ್ನೋರ್ವ ಅತಿಥಿಗಳಾದ ಅಸಿಸ್ಟಂಟ್ ಕಮಿಷನರ್, ಕ್ಯಾಪ್ಟನ್ ಮಹೇಶ ಮಾಲಗತ್ತಿ ಮಾತನಾಡಿ, ಹಳ್ಳಿಗಳು ಉದ್ಧಾರವಾದರೆ ದೇಶಗಳು ಉದ್ಧಾರವಾದಂತೆ. ಎನ್.ಎಸ್.ಎಸ್. ವ್ಯಕ್ತ್ತಿತ್ವ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಎನ್.ಎಸ್.ಎಸ್ ಶಿಬಿರ ಜೀವನದಲ್ಲಿ ಉತ್ತಮ ಶಿಬಿರವಾಗಬೇಕು. ಉತ್ತಮ ಚರಿತೆಯಾಗಬೇಕು, ಸಮಾಜದ ಬಗ್ಗೆ ಅರಿತು ಜೀವನದಲ್ಲಿ ಸಫಲತೆ ಹೊಂದಬೇಕು. ತಂದೆ ತಾಯಿಗಳ ಭರವಸೆ ಸಾಕಾರಗೊಳಿಸಬೇಕು ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತ ಹಾಗೂ ಎನ್.ಎಸ್.ಎಸ್. ಸಲಹಾ ಸಮಿತಿಯ ಸದಸ್ಯ ಡಾ.ಜಾವೇದ ಜಮಾದಾರ ತಿಳಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಇಂಗ್ಲೀಷ್, ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ದೀಪಕ್ ಶಿಂಧೆ ಮಾತನಾಡಿ ನೇರವಾಗಿರಲಿ ಅಥವಾ ನೇರವಾಗಿರದೆ ಇರಲಿ ಸಂವಹನವು ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ. ಪರಿಣಾಮಕಾರಿ ಸಂವಹನಕಾರನಾಗಲು ಮೊದಲು ಉತ್ತಮ ಕೇಳುಗನಾಗಿರಬೇಕು. ಅಂದಾಗ ಮಾತ್ರ ಒಂದು ಪರಿಣಾಮಕಾರಿ ಸಂವಹನ ಜರುಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಪ್ರೊ.ಶಾಂತಾದೇವಿ.ಟಿ, ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಪ್ರೊ.ಲಕ್ಷ್ಮೀದೇವಿ ವೈ, ಶಿಬಿರದ ನಿರ್ದೇಶಕರಾದ ಡಾ.ತಹಮೀನಾ ನಿಗಾರ ಸುಲ್ತಾನಾ ಹಾಗೂ ಡಾ.ಅಮರನಾಥ ಪ್ರಜಾಪತಿ, ವಿವಿಯ ಮುಕ್ತ ಮತ್ತು ಬ ಘಟಕದ ಸ್ವಯಂಸೇವಕಿಯರು ಉಪಸ್ಥಿತರಿದ್ದರು.
ಸ್ವಯಂ ಸೇವಕಿಯರಾದ ಸಾವಿತ್ರಿ ಪಡಸಾಲಿ ಸ್ವಾಗತಿಸಿದರು, ವಿವಿಯ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ವಿಷ್ಣು ಶಿಂಧೆ, ಸ್ವಯಂ ಸೇವಕಿ ಸುಜಾತಾ ಗಡೇದ ಮತ್ತು ಅಶ್ವಿನಿ ಕಾಂಬಳೆ ಅತಿಥಿಗಳನ್ನು ಪರಿಚಯಿಸಿದರು. ರೇಣುಕಾ ನಿರೂಪಿಸಿದರು. ಸಿದ್ದಮ್ಮ ವಂದಿಸಿದರು.