ಶಿವಮೊಗ್ಗ.ಜು.೨೫; ಶಿಕ್ಷಣ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರದೆ, ಮಕ್ಕಳ ಸವೋತೋಮುಖ ಬೆಳವಣಿಗೆಗೆ ಸೀಮಿತವಾಗಿರಬೇಕು. ಪುಸ್ತಕದ ಕಲಿಕೆಯಿಂದ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯವಿಲ್ಲ ಜೀವನದ ಪ್ರತಿಯೊಂದು ಕ್ಷಣವನ್ನು ಸದುಪಯೋಗ ಮಾಡಿಕೊಂಡು ನಮ್ಮಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಮಕ್ಕಳು ಪರಿಸರದೊಂದಿಗೆ ಬೆರೆತು ಕಲಿಯಬೇಕು, ಸಮಾಜಸೇವೆ ಮತ್ತು ದೇಶ ಸೇವೆಯೇ ಮುಖ್ಯ ಧ್ಯೇಯವಾಗಿರಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೃಷ್ಣಪ್ಪ ಜಿಲ್ಲಾ ಮಟ್ಟದ ರೋರ್ಸ್ ಮತ್ತು ರೇಂರ್ಸ್ ಪರೀಕ್ಷಾ ಶಿಬಿರದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ನಾನು ಸಹ 7ನೇ ತರಗತಿಯಲ್ಲಿ ಸ್ಕೌಟ್ ಆಗಿ ತುಂಬಾ ಅನುಭವವನ್ನು ಪಡೆದುಕೊಂಡಿದ್ದೇನೆ. ತೀರ್ಥಹಳ್ಳಿಯಲ್ಲಿ ಹೋಗಿ ಶಿಬಿರ ಮಾಡಿದ್ದು ಮರೆಯಲು ಅಸಾದ್ಯ ಎಂದು ತಿಳಿಸಿದರು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಜಿಲ್ಲಾ ಆಯುಕ್ತರಾದ ಕೆ.ಪಿ.ಬಿಂದುಕುಮಾರ ಇಂದಿನ ಯುವ ಪೀಳಿಗೆ ತಮ್ಮ ಅಮೂಲ್ಯವಾದ ಸಮಯವನ್ನು ಅಂತರ್ಜಾಲದಲ್ಲಿ ಕಳಿಯುತ್ತಿರುವುದು ವಿಷಾದನಿಯ, ಸಮಯದ ಸದುಪಯೋಗ ಪಡಿಸಿಕೊಂಡು ಜೀವನದ ಗುರಿಯತ್ತ ಗಮನವಹಿಸಬೇಕೆಂದು ನುಡಿಯುತ್ತಾ ಪರೀಕ್ಷೆಗೆ ಎಲ್ಲರಿಗೂ ಶುಭಕೋರಿದರು.ಈ ವೇಳೆ ಹೆಚ್. ಶಿವಶಂಕರ್, ಪರಮೇಶ್ವರಯ್ಯ, ವಿಜಯಲಕ್ಷ್ಮೀ, ಸುನಿತಾ, ಗಿರಿಜಮ್ಮ, ಹೇಮಲತಾ, ಚಂದ್ರಶೇಖರಯ್ಯ, ಬಸವಣ್ಣಪ್ಪ ಕಾಲೇಜಿನ ರೇಂಜರ್ ಲೀಡರ್ಗಳು ಉಪಸ್ಥಿತರಿದ್ದರು.