
ದಾವಣಗೆರೆ.ಮೇ.೧೮: ವಿಶ್ವಕರ್ಮ ಸಮಾಜ ದಾವಣಗೆರೆ ಮತ್ತು ಜಿಲ್ಲೆಯ ವಿಶ್ವಕರ್ಮ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 40ನೇ ವರ್ಷದ ಸಾಮೂಹಿಕ ಉಪನಯನ ಮತ್ತು ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ನಗರದ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಮೇ 20ಕ್ಕೆ ಆಚರಿಸಲಾಗುತ್ತಿದೆ ಎಂದು ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ವಿ ಎಂ ಕೊಟ್ರೇಶ್ ಆಚಾರ್ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಅನಗೂಡಿನ ಅಂತರವಳ್ಳಿ ಶಾಖಾಮಠದ ಶ್ರೀ ಭಾಸ್ಕರ್ ಸ್ವಾಮೀಜಿ ಸಾನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಸಾಪುರದ ಬಿ ನಾಗೇಂದ್ರಚಾರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಮೇಯರ್ ವಿನಾಯಕ ಪೈಲ್ವಾನ್, ವರ್ತಕ ಬಿ.ಸಿ.ಉಮಾಪತಿ, ದಾವಣಗೆರೆ ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ ಅಧ್ಯಕ್ಷ ಎನ್.ಮುರುಗೇಶ್ ಆಗಮಿಸುವರು ಎಂದು ತಿಳಿಸಿದರು.ಅತಿಥಿಗಳಾಗಿ ಬಿ.ಎಲ್.ಸೀತಾರಾಮಚಾರ್, ಬಿ.ವಿ.ಶಿವಾನಂದ್, ಎನ್. ಪೂರ್ವಾಚಾರ್ಯ, ಜಿ.ಪಿ.ಜಗನ್ನಾಥ, ರಾಕೇಶ್ ಜಾಧವ್, ಕೆ.ಪಿ.ಪರಮೇಶ್ವರಪ್ಪ, ಹೆಚ್.ಓ.ವಿರುಪಾಕ್ಷಾಚಾರ್, ಅಖಂಡೇಶ್ಬರ ಎಂ.ಪತ್ತಾರ, ಎಸ್.ರುದ್ರಾಚಾರ, ಎಸ್.ತಿಪ್ಪೇಸ್ವಾಮಿ, ಶಾಂತಾಚಾರ್, ನಾಗರಾಜಚಾರ್, ಗುರುಸಿದ್ದಚಾರ್, ವೀರಾಚಾರ್ ಆಗಮಿಸುವರು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಸಾಪುರದ ಬಿ.ನಾಗೇಂದ್ರಚಾರ್, ಬೇತೂರು ಮಂಜುನಾಥ್ ಅಚಾರ್, ಪೂರ್ವಾಚಾರ್, ಸಿದ್ದಾಚಾರ್ ಇತರರು ಇದ್ದರು.