
ಜಗಳೂರು.ಮೇ.೧೫:- ತಾಲೂಕಿನಲ್ಲಿ ನೀರಾವರಿ, ಶಿಕ್ಷಣ, ಆರೋಗ್ಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಗಳನ್ನು ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು. ಪಟ್ಟಣದಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ನನಗೆ ಮತ ನೀಡಿದ ಎಲ್ಲಾ ಮತದಾರ ರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಂಗ್ರೆಸ್ ಸರ್ಕಾರದ ಕೂಸಾಗಿದೆ. ಆದರೆ ಹಿಂದಿನ ಸರ್ಕಾರ ಅದನ್ನು ಲಾಲನೆ, ಪಾಲನೆ ಮಾಡದೇ ನಿರ್ಲಕ್ಷ ತೋರಿದ್ದರಿಂದ ಯೋಜನೆ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ. ಇದೀಗ ನಮ್ಮದೇ ಸರ್ಕಾರ ಬಂದಿರುವುದರಿoದ ನಮ್ಮ ಕೂಸನ್ನು ಚನ್ನಾಗಿ ಬೆಳೆಸಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು, ಭದ್ರಾ ಮೇಲ್ದಂಡೆ ಯೋಜನೆಯತ್ತಾ ಗಮನಹರಿಸಲಾಗುವುದು, ನೆನಗುದಿಗೆ ಬಿದ್ದಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾ ಗುವುದು ಎಂದರು. ಕ್ಷೇತ್ರದ ಮತದಾರರು ಈ ಬಾರಿ ನನ್ನನ್ನು ಆಶೀರ್ವದಿಸಿ ವಿಧಾನ ಸೌಧಕ್ಕೆ ಕಳಿಸಿಕೊಟ್ಟಿದ್ದಾರೆ. ಐದು ವರ್ಷಗಳಲ್ಲಿ ಎಲ್ಲಾ ಧರ್ಮ, ಜಾತಿ, ಸಮುದಾಯಗಳ ಋಣ ತೀರಿಸುತ್ತೇನೆ. ತಾಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಇನ್ನೂರು ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುವುದು, ಶಿಕ್ಷಣಕ್ಕೆ ಒತ್ತು ನೀಡಲಾಗುವುದು, ಕೆಎಸ್ಆರ್ಟಿಸಿ ಡಿಪೋ ನಿರ್ಮಾಣ, ದ್ವಿಮುಖ ರಸ್ತೆ ಅಭಿವೃದ್ದಿ ಹೀಗೆ ಸಾಲು ಸಾಲು ಸವಾಲುಗಳು ನನ್ನೆದುರಲ್ಲಿವೆ. ಹಂತ ಹಂತವಾಗಿ ಸರ್ಕಾರದಿಂದ ಅನುದಾನ ತಂದು ಅಭಿವೃದ್ದಿ ಪಡಿಸಲಾಗುವುದು ಎಂದರು.ಕಾoಗ್ರೆಸ್ ಪಕ್ಷದವರೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನನ್ನೆದುರಿಗೆ ನಿಂತು ಹೋರಾಟ ನಡೆಸಿದರು. ಆದರೆ ಕ್ಷೇತ್ರದ ಮತದಾರರು ನನ್ನ ಕೈ ಬಿಡಲಿಲ್ಲಿ, ಮುಂದೆ ನನ್ನ ಮತದಾರರನ್ನು ನಾನು ಕೈಬಿಡುವುದಿಲ್ಲ ಎಂದರು.ಕೆ.ಪಿ ಪಾಲಯ್ಯ ಆರಂಭದಿoದಲೂ ನನಗೆ ಜೋಡೆತ್ತಾಗಿ ಜತೆ ಯಾಗಿ ನಿಂತು ಗೆಲುವಿನ ದಡ ಸೇರಿಸಿದ್ದಾರೆ. ನಾನು ಪ್ರತಿ ಯೊಂದು ಕೆಲಸದಲ್ಲೂ ನನ್ನೊಂದಿಗೆ ಅವರಿರುತ್ತಾರೆ. ಸರ್ಕಾರ ಕೂಡ ಅವರಿಗೆ ಉತ್ತಮವಾದ ಸ್ಥಾನ ಮಾನ ನೀಡಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಮಾಜಿ ಅಧ್ಯಕ್ಷ ಸುರೇಶ್ಗೌಡ್ರು, ವಕೀಲ ಪ್ರಕಾಶ್, ಮುಖಂಡರಾದ ದಿದ್ದಿಗಿ ಪ್ರಕಾಶ್, ಮಹಮದ್ಶಫೀವುಲ್ಲಾ, ಗುರುಮೂರ್ತಿ, ಕಾನನಕಟ್ಟೆ ಪ್ರಭು, ಓಮಣ್ಣ, ವಿಜಯ್, ರಮೇಶ್ ಸರ್ಕಾರ್, ತಿಪ್ಪೇಸ್ವಾಮಿ. ಕೊರಟಿಕೆರೆ ಗುರುಸಿದ್ದನಗೌಡ್ರು ಸೇರಿದಂತೆ ಇತರರು ಇದ್ದರು.