ಮುಖ್ಯಮಂತ್ರಿ ಭೇಟಿ:ಶಾಸಕ ಸ್ಥಳ ಪರಿಶೀಲನೆ

ಗಬ್ಬೂರು,ಮಾ.೧೫-ವಿವಿಧ ಅಭಿವೃದ್ಧಿ ಕಾಮಗಾರಿಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭಕ್ಕೆ ದೇವದುರ್ಗ ತಾಲೂಕಿನ ಐತಿಹಾಸಿಕ ಗಬ್ಬೂರು ಪಟ್ಟಣಕ್ಕೆ ಇದೆ ತಿಂಗಳು ೨೬ಕ್ಕೆ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿರುವ ಹಿನ್ನೆಲೆಯಲ್ಲಿ ಇಂದು ದೇವದುರ್ಗ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಶಾಸಕ ಕೆ. ಶಿವನಗೌಡ ನಾಯಕ ಅವರು ಇಂದು ಸ್ಥಳ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಸಾಯಿಬಾಬ ಸ್ವಾಮಿಗಳು, ಹಿರಿಯ ಮುಖಂಡರಾದ ಕೊರವಿ ಶರಣಪ್ಪಗೌಡ ಗಬ್ಬೂರು, ಸಂಗನಗೌಡ ಮದರಕಲ್, ಶಿವು ಸಾಹುಕಾರ್ ಗಬ್ಬೂರು, ಶೀತಕಾಂತ ಗುಡಿ, ತಾಯೆಜ್ ಕುಮಾರ ರಾಮದುರ್ಗ, ಕೆಡಿಪಿ ಸದಸ್ಯರಾದ ಮಸ್ತಾನಿ ನಾಯಕ ಖಾನಾಪೂರ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.