
ಮುಂಬೈ, ಸೆ.೫- ಛತ್ತೀಸ್ಗಡ ಮೂಲದ ಗಗನಸಖಿಯನ್ನು ಮುಂಬೈನಲ್ಲಿ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮುಂಬೈನ ಪೊವೈ ಪೊಲೀಸ್ ಠಾಣೆ ವ್ಯಾಪ್ತಿಯ ಮರೋಲ್ನಲ್ಲಿರುವ ಫ್ಲಾಟ್ನಲ್ಲಿ ೨೪ ವರ್ಷದ ರೂಪಲ್ ಗಗನಸಖಿಯ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಪೊವೈ ಪೊಲೀಸರು ಕೇವಲ ಎಂಟು ಗಂಟೆಗಳಲ್ಲಿ ಆರೋಪಿ ವಿಕ್ರಮ್ ಅಥ್ವಾಲ್ (೪೦) ನನ್ನು ಬಂಧಿಸಿದ್ದಾರೆ.ಇನ್ನೂ, ಈತ ಮನೆಗೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ತಿಳಿದಿದೆ.
ಕಳೆದ ಹಲವು ದಿನಗಳಿಂದ ರೂಪಾಲ್ ಮೇಲೆ ಕೆಟ್ಟ ದೃಷ್ಟಿ ಬಿದ್ದಿತ್ತು. ರೂಪಾಲಿ ತನ್ನ ಸಹೋದರಿ ಮತ್ತು ತನ್ನ ಸಹೋದರಿಯ ಸ್ನೇಹಿತೆಯೊಂದಿಗೆ ಒಂದೇ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು. ಆದರೆ, ರೂಪಲ್ ನಿನ್ನೆ ಮನೆಯಲ್ಲಿ ಒಬ್ಬಳೇ ಇದ್ದಾಗ, ಆಕೆಯನ್ನು ಕೊಲೆ ಮಾಡಲಾಗಿದೆಯೇ ಎಂಬ ಶಂಕೆಯೊಂದಿಗೆ ಪೊವೈ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತ ಯುವತಿ ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬಂದಿಲ್ಲ. ಆದ್ದರಿಂದ, ಉಪ ಪೊಲೀಸ್ ಆಯುಕ್ತ ದತ್ತಾ ನಲವ್ಡೆ ಅವರು, ಲೈಂಗಿಕ ಕಿರುಕುಳ ಅಥವಾ ಆಕೆಯನ್ನು ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಮೃತ ಯುವತಿಯ ಪೋಷಕರು ಛತ್ತೀಸ್ಗಢದಿಂದ ಮುಂಬೈಗೆ ಬಂದಿದ್ದು, ಆಕೆಯ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ, ಕಾರಣ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.
೨೪ ವರ್ಷದ ಯುವತಿಯೊಬ್ಬಳ ಶವ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಮರೋಲ್ ಪ್ರದೇಶದಲ್ಲಿ ಯುವತಿ ವಾಸಿಸುತ್ತಿದ್ದಳು. ಯುವತಿಯ ಪೋಷಕರು ಮೊಬೈಲ್ಗೆ ಕರೆ ಮಾಡುವ ಮೂಲಕ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ, ಅವಳು ಫೋನ್ ಎತ್ತಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಪೋಷಕರು ರೂಪಾಲ್ ಸ್ನೇಹಿತೆಗೆ ಕರೆ ಮಾಡಿ ರೂಪಾಲ್ ಬಗ್ಗೆ ವಿಚಾರಿಸುವಂತೆ ತಿಳಿಸಿದ್ದಾರೆ. ಆ ಸಮಯದಲ್ಲಿ ರೂಪಲ್ನ ಸ್ನೇಹಿತ ಅವಳ ಫ್ಲಾಟ್ಗೆ ತೆರಳಿದ್ದಾನೆ. ಬೆಲ್ ಬಾರಿಸಿದರೂ ರೂಪಲ್ ಬಾಗಿಲು ತೆರೆಯಲಿಲ್ಲ. ರೂಪಲ್ ಅವರ ಫ್ಲಾಟ್ಗೆ ಒಳಗಿನಿಂದ ಬೀಗ ಹಾಕಲಾಗಿದ್ದು, ಬಾಗಿಲು ಒಡೆದು ಒಳಗೆ ಪ್ರವೇಶಿಸಿದ ಬಳಿಕ, ರೂಪಾಲ್ ಶವ ಪತ್ತೆಯಾಗಿದೆ. ಪೊವೈ ಪೊಲೀಸರು ಮತ್ತು ಅಪರಾಧ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು.