ಮಾ.೪,೫ ರಂದು ಲಿಂಗಾಯತ ಮಹಾ ಅಧಿವೇಶನ

ಲಿಂಗಸುಗೂರು,ಮಾ.೦೧- ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಲಿಂಗಸುಗೂರ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಐದನಾಳ ಲಿಂಗಾಯತ ಧರ್ಮದ ಜನ್ಮ ಭೂಮಿ ಬಸವ ಕಲ್ಯಾಣದಲ್ಲಿ ಪ್ರಥಮ ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನವನ್ನು ಅಧಿವೇಶನ ಮಾ.೪ ಮತ್ತು ೫ ರಂದು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಜಾತಿ, ಮತ, ಪಂಥಗಳ ಬೇಧ ಬಾವವಿಲ್ಲದೆ ೧೨ ನೇ ಶತಮಾನದಲ್ಲಿ ಲಿಂಗಾಯತ ಧರ್ಮವನ್ನು ಲೋಕ ಕಲ್ಯಾಣಕ್ಕಾಗಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದರು. ಸರ್ವರು ಸಮಾನರು ಎಂಬ ತತ್ವ ಹಾಗೂ ಸಿದ್ದಾಂತಗಳ ಆಧಾರದ ಮೇಲೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ನೀಡಬೇಕು. ಜೈನ, ಬೌದ್ಧ, ಧರ್ಮಗಳಿಗೆ ನೀಡಿದಂತೆ ಹಾಗೂ ಲಿಂಗಾಯತ ಧರ್ಮಕ್ಕೆ ಸರ್ಕಾರ ಸ್ವತಂತ್ರ ಧರ್ಮವೆಂದು ಘೋಷಿಸಬೇಕು ಅತಿ ಹೆಚ್ಚಿನ ಸ೦ಖ್ಯೆಯಲ್ಲಿ ಲಿಂಗಾಯತರು ಅಧಿವೇಶನಕ್ಕೆ ಆಗಮಿಸಿ, ಲಿಂಗಾಯತ ಧಮ ಅಧಿವೇಶನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗಿರಿಮಲ್ಲನಗೌಡ ಭೂಪನಗೌಡ ಪಾಟೀಲ, ಶಿವಪ್ಪ ಸಕ್ರಿ, ಜಂಗಮ ಮೂರ್ತಿ, ವಿಶ್ವನಾಥ ಅನ್ವರಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.