
ದಾವಣಗೆರೆ.ಏ.೨; ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಚಾರ ಸಾಮಾಗ್ರಿ ಹಾಗೂ ಕೇಬಲ್ ಟಿ.ವಿ ಸೇರಿದಂತೆ ವಿದ್ಯುನ್ಮಾನ ಮಾದ್ಯಮಗಳ ಜಾಹೀರಾತುಗಳ ಪ್ರಸಾರಕ್ಕೆ ಮುನ್ನಾ ಪೂರ್ವನುಮತಿ ಕಡ್ಡಾಯ ಭಾರತ ಚುನಾವಣಾ ಆಯೋಗದ ಮಾದರಿ ನೀತಿಸಂಹಿತೆ ಪಾಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಅವರು ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಮುದ್ರಣಾಲಯದ ಮಾಲೀಕರು ಹಾಗೂ ಲೋಕಲ್ ಕೇಬಲ್ ಟಿವಿ ಆಪರೇಟರ್ಗಳ ಸಭೆಯಲ್ಲಿ ಮಾತಾನಾಡಿದ ಅವರು, ಯಾವುದೇ ರಾಜಕೀಯ ಪಕ್ಷದವರು, ಅಭ್ಯರ್ಥಿ ಮುದ್ರಿಸಿದ ಪ್ರತಿಗಳ ಸಂಖ್ಯೆ ಸಹ ರಿಜಿಸ್ಟರ್ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದರು.
ಮುದ್ರಣಕ್ಕೆ ಆದೇಶ ನೀಡಿದ ವ್ಯಕ್ತಿಯಿಂದ ಕಡ್ಡಾಯವಾಗಿ ಒಂದು ಘೋಷಣೆಯನ್ನು ದ್ವಿಪ್ರತಿಯಲ್ಲಿ ಪಡೆದುಕೊಳ್ಳಬೇಕು ಹಾಗೂ ಈ ಘೋಷಣೆಗೆ ಇಬ್ಬರ ಸಾಕ್ಷಿದಾರರ ರುಜು ಪಡೆದುಕೊಳ್ಳಬೇಕು. ಘೋಷಣೆಯನ್ನು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದ ಚುನಾವಣೆ ಪ್ರತಿ ಮುದ್ರಣಾಲದ ಮಾಲೀಕರು ಯುಕ್ತವಾಗಿ ಪಡೆದುಕೊಂಡು ನಂತರ ಮಾಡಿರಬೇಕು. ಮುದ್ರಣ ಮಾಡಿದ ಎರಡುದಿನದೊಳಗಾಗಿ ಘೋಷಣೆ ಮತ್ತು ಮುದ್ರಿಸಿದ ಪ್ರಚಾರ ಸಾಮಗ್ರಿಯ ಒಂದು ಪ್ರತಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಚುನಾವಣಾ ಕರ್ತವ್ಯ ನಿರತ ಯಾವುದೇ ಅಧಿಕಾರಿ ಮಾಹಿತಿ ಕೇಳಿದಾಗ ತಕ್ಷಣ ನೀಡಬೇಕು ಎಂದರು.ಸ್ಥಳೀಯ ಕೇಬಲ್ ಆಪರೇಟರ್ಗಳು ಯಾವುದೇ ಪಕ್ಷ ಹಾಗೂ ಅಭ್ಯರ್ಥಿಯು ಜಾಹೀರಾತಿನಲ್ಲಿ ಬಳಸಲಾಗಿರುವ ವಿವರ(ಕಂಟೆಂಟ್) ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ. ಕಮೀಟಿಯಿಂದ ಪೂರ್ವಾನುಮತಿ ಕಡ್ಡಾಯವಾಗಿ ಪಡೆದಿರಬೇಕು. ಕೇಬಲ್ ಆಪರೇಟರ್ಗಳು ಈ ರೀತಿ ಪೂರ್ವಾನುಮತಿ ಪಡೆಯದ ಯಾವುದೇ ಜಾಹೀರಾತನ್ನು ಬಿತ್ತರಿಸುವಂತಿಲ್ಲ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದ ತಾಲೂಕುಗಳಲ್ಲಿ ಹಾಗೂ ಎಲ್ಲ ಸ್ಥಳೀಯ ಕೇಬಲ್ ಆಪರೇಟರ್ಗಳು ತಮ್ಮ ವಾಹಿನಿ, ಚಾನಲ್, ಕೇಬಲ್ ನೆಟ್ವರ್ಕ್ನಲ್ಲಿ ಬಿತ್ತರಿಸಿದ ಎಲ್ಲ ಜಾಹೀರಾತುಗಳ ಮಾಹಿತಿ ಮತ್ತು ಅದಕ್ಕೆ ವಿಧಿಸಲಾಗಿರುವ ವೆಚ್ಚದ ವಿವರವನ್ನು ಕಡ್ಡಾಯವಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಹಾಗೂ ಆಯಾ ತಾಲೂಕಿನ ವಿಧಾನಸಭಾ ಕ್ಷೇತ್ರದ ಚುನವಣಾಧಿಕಾರಿಗಳ ಗಮನಕ್ಕೆ ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು.ಕೇಬಲ್ ಆಪರೇಟ್ಗಳು ವಿದ್ಯುನ್ಮಾನ ಮಾಧ್ಯಮವು ಸೋಷಿಯಲ್ ಮೀಡಿಯಾ ಒಳಗೊಂಡಿರುವುದರಿಂದ ಈ ಸಾಮಾಜಿಕ ಜಾಲತಾಣ(ವೆಬ್ಸೈಟ್ ಇತ್ಯಾದಿ)ಗಳಲ್ಲಿ ಬಿತ್ತರಿಸುವ ಅಂಶವು ಸಹ ಎಂ.ಸಿ.ಎಂ.ಸಿಯಿಂದ ಪೂರ್ವಾನುಮತಿ ಪಡೆಯಬೇಕು. ಯಾವುದೇ ಪಕ್ಷ ಹಾಗೂ ಅಭ್ಯರ್ಥಿಯು 2023ರ ಕರ್ನಾಟಕ ವಿಧಾನಸಭಾ ಕ್ಷೇತ್ರದ ಚುನಾವಣೆಯ ಕುರಿತು ಮುದ್ರಿಸುವ ಕರಪತ್ರ, ಪಾಂಪ್ಲೆಂಟ್ ಮುಂತಾದವುಗಳು ಪ್ರಜಾಪ್ರಾರತಿನಿಧ್ಯ ಕಾಯ್ದೆ 1951 ಸೆಕ್ಷನ್ 127ಎ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದರು.ಮುದ್ರಿಸುವ ಪ್ರತಿ ಕರಪತ್ರಗಳ ಮೇಲೆಯು ಮುದ್ರಕರ ಮತ್ತು ಮುದ್ರಣಕ್ಕೆ ಆದೇಶ ನೀಡಿದವರ(ಪ್ರಿಂಟರ ಮತ್ತು ಪಬ್ಲಿಷರ್) ಹೆಸರು ಸ್ಪಷ್ಟವಾಗಿ ಮತ್ತು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಕರಪತ್ರಗಳ ಸಂಖ್ಯೆ ಸಹ ನಮೂದಿಸಬೇಕು. ವಿವರಗಳು ಇಲ್ಲದೆ ಯಾವುದೇ ಕರಪತ್ರ ಮುದ್ರಣ ಚುನಾವಣಾ ಅಪರಾಧವಾಗುತ್ತದೆ. ಯಾವುದೇ ಪತ್ರಿಕಾ ಮುದ್ರಣ ಮಾಲೀಕರಿಗೆ ಮುದ್ರಣಕ್ಕೆ ಸಂಬಂಧಿಸಿದಂತೆ ಏನಾದರು ಸಮಸ್ಯೆ ಉಂಟಾದಲ್ಲಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸಲಹೆ ನೀಡಿದರು.
ಮುದ್ರಣಾಲಯದ ಮಾಲೀಕರು ಅನುಬಂಧ (ಂಟಿಟಿexuಡಿe-ಂ) ನಲ್ಲಿ ಮಾಹಿತಿ ಪಡೆಯಬೇಕು, ನಂತ (ಂಟಿಟಿexuಡಿe-ಃ) ಃ ನೇದ್ದೆಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ಸಲ್ಲಿಸಬೇಕು. ಈ ನಿಯಮಗಳನ್ನು ಮುದ್ರಣಾಲಯದ ಮಾಲೀಕರು ಹಾಗೂ ಕೇಬಲ್ ಆಪರೇಟರ್ಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದಲ್ಲಿ ಅಥವಾ ಉಲ್ಲಂಘನೆಯಾದಲ್ಲಿ ಅಂತರ ವಿರುದ್ಧ ಪ್ರಜಾಪ್ರಾತಿನಿಧ್ಯ ಕಾಯ್ದೆ 1951ನೇದ್ದರ ಪ್ರಕಾಯ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಿಕಿ ನಜ್ಮಾ ಉಪಸ್ಥಿತರಿದ್ದರು.