
ಮಾಟ ಮಂತ್ರದ ಸುತ್ತ ಸಾಗುವ “ಗದಾಯುದ್ದ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜೂನ್ 9 ರಂದು ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ತಂಡ ಟ್ರೈಲರ್ ಬಿಡುಗಡೆ ಹಮ್ಮಿಕೊಂಡಿತ್ತು.
ಮಾಟ ಮಂತ್ರದ ಕುರಿತಾದರೂ ಪ್ರತಿ ಪಾತ್ರವೂ ಮುಖ್ಯವಾಗಿದೆ. ನಿರ್ದೇಶಕ ಶ್ರೀವತ್ಸ ರಾವ್ ಆಕ್ಷನ್ ಕಟ್ ಹೇಳಿದ್ದು ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ತೆರೆಗೆ ಬರಲಿದೆ. ಚಿತ್ರದ ಕಥೆಗಾಗಿ ಎರಡು ವರ್ಷ ಕಥೆ ಮಾಡಿ ಸಿನಿಮಾ ಮಾಡಲಾಗಿದೆ. ಪ್ರತಿ ಪಾತ್ರ ಗಮನ ಸೆಳೆಯುವಂತಿದೆ.
ನಿರ್ದೇಶಕ ಶ್ರೀವತ್ಸ ರಾವ್, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ವಾಮಾಚಾರ ನಡೆಯುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಿ ಚಿತ್ರ ಮಾಡಲಾಗಿದೆ. ಮನರಂಜನೆ ಜೊತೆಗೆ ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ.
ವೈಜ್ಞಾನಿಕವಾಗಿ ಚಿತ್ರದ ಕಥೆಯನ್ನು ಕಮರ್ಷಿಯಲ್ ಆಗಿ ಹೇಳಲಾಗಿದೆ.ಚಿತ್ರದಲ್ಲಿ ಶರತ್ ಲೋಹಿತಾಶ್ವ, ಅಯ್ಯಪ್ಪ ಶರ್ಮಾ, ಸಾಧುಕೋಕಿಲ, ಶರತ್ ಲೋಹಿತಾಶ್ವ ಸೇರಿದಂತೆ ಮತ್ತಿತರು ಚಿತ್ರದಲ್ಲಿದ್ದಾರೆ ಎಂದರು.
ಕ್ಲೈಮಾಕ್ಸ್ ಸಾಹಸ ದೃಶ್ಯವನ್ನು 14 ದಿನ ಚಿತ್ರೀಕರಣ ಮಾಡಲಾಗಿದ್ದು ನಿರ್ಮಾಪಕರು ಪೈಟುಗಾಗಿಯೇ ಒಂದು ಕೋಟಿ ಅದಕ್ಕಾಗಿಯೇ ಖರ್ಚು ಮಾಡಿದ್ದಾರೆ. 60 ದಿನದ ಚಿತ್ರೀಕರಣ ಬಾಕಿ ಇದ್ದಾಗಲೇ ಸತ್ಯ ಜಿತ್ ಮತ್ತು ಶಿವರಾಮಣ್ಣ ಅವರ ಪಾತ್ರಕ್ಕೆ ಅವರೇ ಡಬ್ಬಿಂಗ್ ಮಾಡಿದ್ದಾರೆ ಎಂದು ಹೇಳಿದರು.
ನಾಯಕ ಸುಮಿತ್, ನಮ್ಮ ಕೆಲಸ ಮಾಡಿದ್ದೇವೆ. ನಮಗೆ ತೃಪ್ತಿ ಇದೆ. ಚಿತ್ರ ನೋಡಿ ಹರಸಿ, ನಾಯಕನಾಗಬೇಕು ಎಂದು ಬಯಸಿರಲಿಲ್ಲ ಎಂದರೆ ನಾಯಕಿ ಧನ್ಯ ಪಾಟೀಲ್, ಮಾಟಗಾರ ಮಗಳ ಪಾತ್ರ ಮಾಡಿದ್ದೇನೆ ಎಂದರು.
ನಿರ್ಮಾಪಕ ನಿತಿನ್ ಶಿಂಗ್ರೂರ್ ಕರ್, ಮಾತನಾಡಿ ನಾಲ್ಕ ವರ್ಷದ ಹಿಂದೆ ನಿರ್ದೇಶಕರು ಹೇಳಿದ ಕಥೆ ಇಷ್ಡವಾಯಿತು. ಬಾನಾಮತಿ ಮಹಾರಾಷ್ಡ್ರದಲ್ಲಿಯೂ ಇದೆ.ಅನೇಕ ಮಂದಿಯನ್ನು ಭೇಟಿ ಮಾಡಿ ಮಾಟ ಮಂತ್ರದ ಬಗ್ಗೆ ವಿಚಾರಿಸಿದ್ದೆ ಎಂದರು
ನಟಿ ಸ್ಪರ್ಶ ರೇಖಾ, ಚಿತ್ರದಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದೇನೆ.ಮಾಟ ಮಂತ್ರಕ್ಕೆ ಒಳಗಾಗುವ ಸ್ಪರ್ಶ ರೇಖಾ ಆಗಿಯೇ ಕಾಣಿಸಿಕೊಂಡಿದ್ದೇನೆ ಎಂದರು. ಸಂಗೀತ ನಿರ್ದೇಶಕ ವೈಸ್ ಕಿಂಗ್ ಮಾಹಿತಿ ಹಂಚಿಕೊಂಡರು.