
ಶಹಾಪೂರ:ಮಾ.10:ಮಹಿಳೆಯರು ಶಿಕ್ಷಣದ ಜೊತೆಗೆ ವಿಶೇಷ ತರಬೇತಿಗಳನ್ನು ಪಡೆಯುವ ಮೂಲಕ ಉದ್ಯೋಗ ನಿರ್ವಾಹಣೆಯ ಜೊತೆಗೆ ಆರ್ಥಿಕ ಪ್ರಗತೊ ಹೊಂದುತ್ತಾ ಸಬಲರಾಗಿ ಎಂದು ನ್ಯಾಯವಾದಿ ಜಯಲಲಿತಾ ಪಾಟೀಲ್ ಹೇಳಿದರು. ರಂಗಂಪೇಟೆಯ ಬಸವಪ್ರಭು ತರಬೇತಿ ಕೇಂದ್ರದಲ್ಲಿ ಇಂದು ಸಮರ್ಥ ಹೊಲಿಗೆ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ, ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಇಂದು ಸ್ಪರ್ದೆಮಾಡುತ್ತಿದ್ದು, ಕುಟುಂಬದ ನಿರ್ವಾಹಣೆ ಜೊತೆಗೆ ಉದ್ಯೋಗದ ಜವಬ್ದಾರಿಕೂಡ ಅನೇಕರು ನಿರ್ವಹಿಸುತ್ತಿದ್ದಾರೆ, ಸರ್ವಕ್ಷೇತ್ರದಲ್ಲು ಪ್ರಗತಿ ಸಾಧಿಸುತ್ತಿರುವ ನಮ ಮಹಿಳೆಯರು ತ್ಯಾಗದ ಪ್ರತಿರೂಪ, ಕರುಣೆ, ಮಮತೆ, ಪ್ರೀತಿ, ವಾತ್ಸಲ್ಯಗಳ ತವನಿಧಿಯಾಗಿದ್ದಾರೆ ಎಂದು ಹೇಳಿದರು. ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರಸಭೆ ಸದಸ್ಯರಾದ ಶ್ರೀಮತಿ. ಸುವರ್ಣ ಎಲಿಗಾರ ಮಾತನಾಡಿ ಮಹಿಳೆಯರು ವಿದ್ಯಾಭ್ಯಾಸದ ಜೊತೆಗೆ ಗೃಹ ಕೈಗಾರಿಕೆ, ಗುಡಿಕೈಗಾರಿಕೆ ಹಾಗೂ ಹೊಲಿಗೆ ತರಬೇತಿ ಸೇರಿದಂತೆ ಅನೇಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ತರಬೇತಿ ಕೇಂದ್ರದ ಮುಖ್ಯಸ್ಥ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶಿವಶರಣಪ್ಪ ಹೆಡಿಗಿನಾಳ, ಸಿದ್ದಣಗೌಡ ಹೆಬ್ಬಾಳ, ಮಲ್ಲು ಬಾದ್ಯಾಪುರ, ರೇಣುಕಾ ನಾಯಕ, ಸೌಭಾಗ್ಯ ಸುರಪುರ, ಅಖಿಲಾ ಜುಜಾರೆ, ನಜ್ಮಾ ಬೇಗಂ, ನಫಿಸಾ ಬೇಗಂ, ರೇಷ್ಮಾ ಬೇಗಂ ಸೇರಿದಂತೆ ಅನೇಕರಿದ್ದರು. ಹಣಮಂತ್ರಾಯ ದೇವತ್ಕಲ್ ನಿರೂಪಿಸಿದರು, ಸಂಗೀತಾ ಪ್ರಾರ್ಥಿಸಿದರು, ಸಿದ್ದಪ್ರಸಾದ ಪಾಟೀಲ್ ಸ್ವಾಗತಿಸಿದರು, ಪ್ರವೀಣ ಜಕಾತಿ ವಂದಿಸಿದರು.