
ಕುಂದಗೋಳ ಏ.4 : ಬುದ್ಧ, ಬಸವ, ಗಾಂಧಿ ಜತೆಗೆ ‘ಮಹಾವೀರರ’ ಹೆಸರೂ ಕೇಳಿಬರುವಂತಾಗಲಿ ಎಂದು ದಿಗಂಬರ ಜೈನ ಸಮಾಜದ ಯುವ ಮುಖಂಡ ಬಸವರಾಜ ಯೋಗಪ್ಪನವರ ಆಶಯ ವ್ಯಕ್ತಪಡಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿ ಪ್ರಥಮವಾಗಿ ಅಹಿಂಸೆ ಬಗ್ಗೆ ಪ್ರತಿಪಾದಿಸಿದವರು ಮಹಾವೀರರು, ಇಂದು ಅವರನ್ನು ಎಲ್ಲರೂ ಮರೆತು ಮಾತನಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸುತ್ತ ಮಹಾವೀರ ಜಯಂತಿಯನ್ನು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಆಚರಿಸುವಂತಾಗಬೇಕು, ಆದರೆ ಬೆರಳೆಣಿಕೆಯಷ್ಟು ಕಚೇರಿಯಲ್ಲಿ ಮಾತ್ರ ಈ ಜಯಂತಿ ಆಚರಿಸಲಾಗುತ್ತಿದೆ. ಇದಕ್ಕೆ ಸರ್ಕಾರವೇ ಆದೇಶ ನೀಡಿ ಜಯಂತಿ ಆಚರಿಸುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದರು.
ಗ್ರೇಡ್-2 ತಹಶೀಲ್ದಾರ್ ನರಸಪ್ಪನವರ, ಕಚುಸಾಪ ಅಧ್ಯಕ್ಷ ವೈ. ಡಿ. ಹೊಸೂರ, ಬಾಹುಬಲಿ ನಾಗರಳ್ಳಿ ಹಾಗೂ ಸಮಾಜ ಬಾಂಧವರು ಮತ್ತು ಅಧಿಕಾರಿಗಳಿದ್ದರು.