ಮಸ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜೇತ ಪಾಟೀಲ್ ವಿಶ್ವಾಸ

ಕವಿತಾಳ.ರಾಜ್ಯದಲ್ಲಿ ಮತ್ತೋಮ್ಮೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುತ್ತದೆ ಎಂದು ಎಐಸಿಸಿ ರಾಜ್ಯ ಕಾರ್ಯದರ್ಶಿ ಬ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಹೇಳಿದರು. ಇಂದು ಸ್ವಗ್ರಾಮ ಯದ್ದಲದಿನ್ನಿಯಲ್ಲಿ ಕುಟುಂಭ ಸಮೇತ ಮತದಾನ ಮಾಡಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಮಸ್ಕಿ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್ ಬಸನಗೌಡರವರು ಐದು ಸಾವೀರಕ್ಕು ಹೆಚ್ಚು ಮತಗಳನ್ನು ಪಡೆದು ವಿಜೇತರಾಗುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಪ್ರಣಾಳಿಕೆಯನ್ನು ಹಿಡೆರಿಸಲಾಗುವದು ಎಂದರು. ಪತ್ನಿ ಶಾರದ ಪಾಟೀಲ್, ತಾಯಿ ಈರಮ್ಮ, ಶಾರದಮ್ಮ ಉಪಸ್ಥಿತರಿದ್ದರು.