
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.12: ನಗರ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ
ಧುಮುಕಿರುವ ಗಾಲಿ ಲಕ್ಷ್ಮಿ ಅರುಣ ಜನಾರ್ಧನರೆಡ್ಡಿ ಅವರು ಇಂದು ತಮಗೆ ಮತ ನೀಡುವಂತೆ ನಗರದ 10 ವಾರ್ಡಿನ ಮರಿಸ್ವಾಮಿ ಮಠ ಪ್ರದೇಶದಲ್ಲಿ ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಹಿಳೆಯರ ಗಮನ ಸೆಳೆದರು.
ಬಿಸಿಲನ ತಾಪಕ್ಕೆ ಹೆದರಿ ಬೆಳಗ್ಗಿನಿಂದಲೇ ಮನೆ ಮನೆಗೆ ತೆರಳಿ ಮತಯಾಚನೆ ನಡೆದಿದೆ. ಓರ್ವ ಮಹಿಳೆಯಾಗಿ ಚುನಾವಣೆ ಎದುರಿಸಿ ಬಳ್ಳಾರಿ ನಗರದ ಮೊದಲ ಮಹಿಳಾ ಶಾಸಕಿಯನ್ನಾಗಿ ಮಾಡಲು ನೀವು ಆಶಿರ್ವಾದ ಮಾಡಬೇಕು ಎಂದು ವಿಶೇಷವಾಗಿ ಮಹಿಳಾ ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ, ದೇಸಾಯಿ ಕುಟುಂಬದ ಸದಸ್ಯರು ಸೇರಿದಂತೆ ಸ್ಥಳೀಯ ಮುಖಂಡರು ಪ್ರಚಾರದಲ್ಲಿ ಅವರೊಂದಿಗೆ ಪಾಲ್ಗೊಂಡಿದ್ದರು.