ಕಲಬುರಗಿ,ಜು.2-ಮನೆ ಬೀಗ ಮುರಿದು ನಗನಾಣ್ಯ ದೋಚಿಕೊಂಡು ಹೋಗಿರುವ ಘಟನೆ ಇಲ್ಲಿನ ಕರೀಮ್ ನಗರದಲ್ಲಿ ನಡೆದಿದೆ.
ತರಕಾರಿ ವ್ಯಾಯಾರಿಯಾಗಿರುವ ಶಬ್ಬೀರ್ ಶೇಖ್ ಎಂಬುವವರ ಮನೆ ಬೀಗ ಮುರಿದು 25 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಉಂಗುರ, 15 ಸಾವಿರ ರೂ.ನಗದು ಸೇರಿ 40 ಸಾವಿರ ರೂ.ಮೌಲ್ಯದ ನಗನಾಣ್ಯ ಕಳವು ಮಾಡಲಾಗಿದೆ.
ಶಬ್ಬೀರ್ ಶೇಖ್ ಅವರು ಮನೆಗೆ ಬೀಗ ಹಾಕಿಕೊಂಡು ಪತ್ನಿ ಜೊತೆಗೆ ಅಳಿಯನ ಮದುವೆಗೆ ಹೋದ ವೇಳೆ ಕಳ್ಳರು ಮನೆ ಬೀಗ ಮುರಿದು ಮನೆಯಲ್ಲಿದ್ದ ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.