ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ಹಕ್ಕು : ಆಕ್ಷೇಪಣೆಗೆ ಆಹ್ವಾನ

ಯಾದಗಿರಿ : ನ.14: : ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ಹಕ್ಕು ಮತ್ತು ಆಕ್ಷೇಪಣೆಗಳ ಆಹ್ವಾನಿಸಲಾಗಿದೆ ಎಂದು ಸಹಾಯಕ ಆಯುಕ್ತರು ಡಾ.ಹಂಪಣ್ಣ ಸಜ್ಜನ್ ಅವರು ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷದವರೊಂದಿಗೆ ಸಭೆ ನಡೆಸಲಾಯಿತು.
ಸಹಾಯಕ ಆಯುಕ್ತರ ಸಭಾಂಗಣದಲ್ಲಿ 2023 ನವೆಂಬರ್ 13ರ ಸೋಮವಾರ ರಂದು ಅವರು ರಾಜಕೀಯ ಪಕ್ಷದರೊಂದಿಗೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳೊಂದಿಗೆ ಸಭೆ ಜರುಗಿಸಿ ಮತದಾರರ ಪಟ್ಟಿ ಪರಿಷ್ಕರಣೆ-2024ಕ್ಕೆ ಸಂಬಂಧಿಸಿದಂತೆ, 2023ರ ನವೆಂಬರ್ 2 ರಿಂದ 10ರ ವರೆಗೆ ಸ್ವೀಕೃತವಾದ ನಮೂನೆಗಳ ಮಾಹಿತಿಯ ನಮೂನೆ 9, 10, 11, 11ಎ ಮತ್ತು 11ಬಿ ನಮೂನೆಗಳನ್ನು
36-ಸುರಪುರ, 37-ಶಹಾಪೂರ, 38-ಯಾದಗಿರಿ, ಮತ್ತು 39-ಗುರುಮಿಠಕಲ್ ವಿಧಾನಸಭಾ ಕ್ಷೇತ್ರವಾರು ಛಿeo ತಿeಜ siಣe ನಲ್ಲಿ uಠಿಟoಚಿಜ ಮಾಡಿದ್ದು, ಸಹಾಯಕ ಆಯುಕ್ತರ ಕಛೇರಿಯಲ್ಲಿ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಂಬಂಧಪಟ್ಟ ಮತಗಟ್ಟೆಗಳಲ್ಲಿಯೂ ಸಹ ಪ್ರಚುರ ಪಡಿಸಲಾಗಿದ್ದು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬೇಕು ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರ ಕಛೇರಿ, ತಹಸೀಲ್ದಾರರು ಗ್ರೇಡ್-2 ಶ್ರೀಮತಿ ಅನಿತಾ ಸಜ್ಜನ್, ಯಾದಗಿರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಲ್ಲಿಕಾರ್ಜುನ್ ಎಮ್.ಈಟಿ, ಯಾದಗಿರಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷರು ಶ್ರೀ ಮರಗಪ್ಪ ಸಾಲಿಕೇರಿ, ಯಾದಗಿರಿಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳು ಶ್ರೀ ಶಂಕರ ಸೊನರ ಉಪಸ್ಥಿತರಿದ್ದರು.