
ಬೀದರ:ನ.5:ಮಕ್ಕಳು ಯಾವುದೇ ಭಯ ಆತಂಕಗಳಿಲ್ಲದೆ ಸ್ವಚ್ಛಂದ ಪರಿಸರದಲ್ಲಿ ಮುಕ್ತವಾಗಿ ತನ್ನ ಕಲಿಕೆಯನ್ನು ತಾನೆ ಹೊರ ಹಾಕಲು ಹಾಗೂ ಶಿಕ್ಷಕರಿಗೆ ಮಕ್ಕಳ ಪ್ರಗತಿಯನ್ನು ದಾಖಲಿಸಿಕೊಳ್ಳಲು ಇಂತಹ ಯೋಜನೆಗಳು ಮತ್ತು ಪ್ರದರ್ಶನ ಒಂದು ಉತ್ತಮ ವೇದಿಕೆಯಾಗುತ್ತದೆ ಎಂದು ಅರಣ್ಯ ಪ್ರಾದೇಶಿಕ ವಿಭಾಗದ ಉಪ ಸಂರಕ್ಷಣಾಧಿಕಾರಿ ಶ್ರೀಮತಿ ವಾನತಿ ಎಂ.ಎಂ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶನಿವಾರ ನಗರದ ಗುರು ನಾನಕ ಪಬ್ಲಿಕ್ ಶಾಲೆಯಲ್ಲಿ ಎರಡು ದಿವಸದ ಯೋಜನಾ ಕಾರ್ಯ ಪ್ರಸ್ತುತಿ ಮತ್ತು ಪ್ರದರ್ಶನ (ಪ್ರೊಜೆಕ್ಟ್ ಡೇ) ಉದ್ಘಾಟಿಸಿ ಮಾತನಾಡಿದ ಅವರು ರೋಬೆಟಿಕ್ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಸಂಕೇತವಾಗಿದೆ. ನಾವು ಮಾಡುತ್ತಿರುವ ಕೆಲಸ ಮಕ್ಕಳ ಕೂಡಾ ಮಾಡುತ್ತಿದ್ದಾರೆ. ಈ ವಿಜ್ಞಾನ ಮೇಳದಲ್ಲಿ ತಮ್ಮ ಪ್ರತಿಭೆ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ತೋಟಗಾರಿಕೆ ಕಾಲೇಜಿನ ಡೀನರಾದ ಡಾ|| ಎಸ್.ವಿ. ಪಾಟೀಲ ನುಡಿದರು. ಮಕ್ಕಳ ಪ್ರಗತಿಯನ್ನು ಅರ್ಥೈಸಿಕೊಳ್ಳಲು ಮತ್ತು ಸಾಧನೆ ಸಲಕರಣೆಗಳನ್ನು ರಚಿಸಕೊಳ್ಳಲು, ಪರಿಷ್ಕøತ ವಹಿಸಲು ಯೋಜನಾ ಕಾರ್ಯ ಒಂದು ಪ್ರಮುಖ ಸಾಧನೆವಾಗಿದೆ. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಇಂತಹ ಪ್ರದರ್ಶನಗಳು ಅಗತ್ಯವಿದೆ ಎಂದರು.
ಶಾಲೆಯ ಮಕ್ಕಳು ಒಳ್ಳೆ ಒಳ್ಳೆ ಪ್ರೊಜೆಕ್ಟ್ ತಯಾರು ಮಾಡಿ ಅರಿವು ಮೂಡಿಸುತ್ತಿದ್ದಾರೆ. ಇಲ್ಲಿನ ಮಕ್ಕಳು ಬಹಳÀಷ್ಟು ಪ್ರತಿಭೆಯನ್ನು ಹೊಂದಿದ್ದಾರೆ, ಗುರು ನಾನಕ ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ್ ಮಾತನಾಡುತ್ತ ಅಪೇಕ್ಷಿತ ಶಾಲಾ ಸನ್ನಿವೇಶವನ್ನು ನಿರ್ಮಾಣ ಮಾಡಿಕೊಡುವುದೆ ನಮ್ಮ ಉದ್ದೇಶವಾಗಿತ್ತು. ಈ ಸನ್ನಿವೇಶ ಮಕ್ಕಳಿಗೆ ಸಮಗ್ರ ಅಭಿವೃದ್ಧಿಯತ್ತ ಮುನ್ನಡೆಯಲು ದಾರಿ ಮಾಡಿಕೊಡುತ್ತದೆ ಎಂದು ನಾವು ಭಾವಿಸುತ್ತೇವೆ. ನಾವು ಎಲ್ಲಿದ್ದೇವೆÉ, ನಾವು ಪಡೆದುಕೊಂಡ ಕಲಿಕೆಯ ಅನುಭವಗಳು ಯಾವುವು ಮುಂತಾದ ವಿಷಯಗಳ ಕುರಿತು ಮಕ್ಕಳ ಮಾಹಿತಿ ಪಡೆದುಕೊಂಡು ಅಡ್ಡಿ ಆತಂಕಗಳಿಲ್ಲದೆ ತಮ್ಮ ಪೋಷಕರ ಎದುರಿಗೆ ತಮ್ಮ ಮಟ್ಟವನ್ನು ಪ್ರದರ್ಶಿಸಿರುವುದು ನಮಗೆ ಅತ್ಯಂತ ಸಂತಸವನ್ನುಂಟು ಮಾಡಿದೆ ಎಂದುರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ರಾಜು, ಎನ್., ಅಮಜದ ಅಲಿ, ಮುಖ್ಯ ಗುರುಗಳಾದ ಆರೀಫ್ ಹಾದಿ, ಹನುಮಾನ ಮತ್ತು ಶಾಲೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.