ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಲು ಸಲಹೆ

ನ್ಯಾಮತಿ.ಮೇ.೨೦; ರಜಾ ದಿನಗಳಲ್ಲಿ ನಡೆಯುವ ಮಕ್ಕಳ ಬೇಸಿಗೆ ಶಿಬಿರದಿಂದ ನಮ್ಮಲ್ಲಿಯ ಸೃಜನಶೀಲತೆ ಕ್ರಿಯಾಶೀಲತೆಯು ಬೆಳೆಯುವುದಕ್ಕೆ ಕಾರಣವಾಗುತ್ತದೆ. ಬದುಕಿಗೆ ಪೂರಕವಾದ ಶಿಕ್ಷಣ , ಮುಂದಿನ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಜಾಕ್ಷಮ್ಮ ಹೇಳಿದರು.ಅವರು ನ್ಯಾಮತಿ ತಾಲೂಕಿನ ಜೀನಹಳ್ಳಿ ಮತ್ತು ಕತ್ತಿಗೆ ಕ್ರಾಸ್ ಬಳಿಯಿರುವ ಶ್ರೀ ಬಸವೇಶ್ವರ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದು ತಿಂಗಳ ಕಾಲ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಸೃಜನಾತ್ಮಕ ಮತ್ತು ಕ್ರೀಯಾತ್ಮಕ ಚಟುವಟಿಕೆಗಳ ಪಾಲಕರು ತಮ್ಮ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಬೇಕು ಎಂದು ಹೇಳಿದರು.ಕಾರ್ಯ ನಿರತ ಪತ್ರಕರ್ತರ ಸಂಘದ ಹೊನ್ನಾಳಿ ಘಟಕದ ಅಧ್ಯಕ್ಷ ಯೋಗೀಶ್ ಕೋರಿ ಕುಳಘಟ್ಟೆ ಮಾತನಾಡಿ, ಸಮಯದ ಸದುಪಯೋಗ ಬಹಳ ಮುಖ್ಯವಾಗಿದ್ದು ರಜೆಯ ಅವಧಿಯಲ್ಲಿ ಮಕ್ಕಳು ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಸೃಜನಾತ್ಮಕವಾದ ಕಲಿಕೆ ಸಾಧ್ಯವಿದ್ದು ಮಕ್ಕಳನ್ನು ಪಾಲಕರು ಶೈಕ್ಷಣಿಕ ಜಾಗೃತಿಯಿಂದ ಬೆಳೆಸಬೇಕು ಎಂದು ಹೇಳಿದರು.ಕಾರ್ಯ ನಿರತ ಪತ್ರಕರ್ತರ ಸಂಘದ ನ್ಯಾಮತಿ ಘಟಕದ ಸಂಚಾಲಕ ಎಂ.ಎಸ್.ಶಾಸ್ತಿçÃಹೊಳೆಮಠ್ ಮಾತನಾಡಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಕನಸು ಕಂಡರೆ ದೊಡ್ಡವರಾದ ಮೇಲೆ ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಪಾಲಕರು ತಮ್ಮ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಬೇಕು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಮಾತನಾಡಿ, ಪ್ರತಿ ವರ್ಷ ಮಕ್ಕಳ ಶಿಬಿರ ಸಂಘಟಿಸಿ ಮಕ್ಕಳಿಗೆ ಮಣ್ಣಿನ ಮಾದರಿ, ಚಿತ್ರಕಲೆ, ನೃತ್ಯ , ಭರತ ನಾಟ್ಯ , ಸ್ಪೂಕನ್ ಇಂಗ್ಲೀಸ್ , ಅಬಾಕಸ್ ಸೇರಿದಂತೆ ಮೊದಲಾದ ತರಬೇತಿ ಹಾಗೂ ಮಾಹಿತಿ ಮಕ್ಕಳಿಗೆ ನೀಡಲಾಗಿದೆ ಎಂದರು. ವೇದಿಕೆಯಲ್ಲಿದ್ದ ಕಾರ್ಯ ನಿರತ ಪತ್ರಕರ್ತರ ಸಂಘದ ಹೊನ್ನಾಳಿ ಘಟಕದ ಮಾಜಿ ಅಧ್ಯಕ್ಷ ಮೃತ್ಯುಂಜಯ ಪಾಟೀಲ್ , ಸ್ಪೂಕನ್ ಇಂಗ್ಲೀಸ್ ಶಿಕ್ಷಕಿ ಪವಿತ್ರ , ಭರತ ನಾಟ್ಯ ಶಿಕ್ಷಕಿ ಸ್ನೇಹ , ಶಿಬಿರಾರ್ಥಿಗಳಾದ ಛಾಯ , ಮೊಕ್ಷ , ಯೋಗೀಶ್ ಮಕ್ಕಳ ಬೇಸಿಗೆ ಶಿಬಿರ ಕುರಿತು ಮಾತನಾಡಿದರು.ಉಪಸ್ಥಿತರಿದ್ದರು.