ಭಕ್ತಿ ಭಾವದೊಂದಿಗೆ ಜರುಗಿದ ಶ್ರೀ ಅಂಬಾಭವಾನಿ ಜಯಂತ್ಯೋತ್ಸವ

ತಾಳಿಕೋಟೆ:ಜು.12: ಸ್ಥಳೀಯ ಗೋಂದಳಿ ಸಮಾಜ ಬಾಂದವರ ಕುಲದೇವತೆಯಾದ ಶ್ರೀ ಅಂಬಾಭವಾನಿ ಜಯಂತ್ಯೋತ್ಸವವು ಪ್ರತಿವರ್ಷದಂತೆ ಈ ಸಲವು ದಿ. 11 ಮಂಗಳವಾರರಂದು ಭಕ್ತಿಭಾವದೊಂದಿಗೆ ವಿಜೃಂಬಣೆಯಿಂದ ಜರುಗಿತು.

ಜಾತ್ರೋತ್ಸವ ಅಂಗವಾಗಿ ಗೋಂದಳಿಗಲ್ಲಿಯಲ್ಲಿಯ ಶ್ರೀ ಅಂಬಾಭವಾನಿ ಮಂದಿರದಲ್ಲಿಯ ಶ್ರೀ ಭವಾನಿ ಮಹಾಮೂರ್ತಿಗೆ ಮಹಾಭಿಷೇಕ, ಬಿಲವಾರ್ಚನೆ, ಪುಷ್ಪಾರ್ಚನೆ, ಅಲಂಕಾರದೊಂದಿಗೆ ಮಹಾ ಮಂಗಳಾರತಿ ಜರುಗಿತು.

ನಂತರ ಫಲ್ಲಕ್ಕಿ ಉತ್ಸವದೊಂದಿಗೆ ಶ್ರೀ ಅಂಬಾಭವಾನಿಯ ಭಾವದಿತ್ರದ ಮಹಾ ಮೇರವಣಿಗೆಯು ಗೊಂದಳಿಗಲ್ಲಿಯ ಮಂದಿರದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಬಾವಸಾರ ಸಮಾಜದ ಶ್ರೀ ಅಂಬಾಭವಾನಿ ಮಂದಿರ ತಲುಪಿ ಅಲ್ಲಿಯೂ ಮಹಾ ಪೂಜಾ ಕಾರ್ಯಕ್ರಮ ನೆರವೇರಿಸಿ ಮರಳಿ ಅದೇ ಮಾರ್ಗವಾಗಿ ಮೇರವಣಿಗೆ ಸ್ವಮಂದಿರ ತಲುಪಿತು.

ಮೇರವಣಿಗೆ ಉದ್ದಕ್ಕೂ ಡೊಳ್ಳು ಬಾಜಾಭಜಂತ್ರಿ ಅಲ್ಲದೇ ವಿವಿಧ ಮಜಲುಗಳು ಹಾಗೂ ಡಿಜೆ ಹಾಡಿಗೆ ತಕ್ಕಂತೆ ಯುವಕರ ಕುಣಿತ ನೋಡುಗರ ಗಮನ ಸೇಳೆಯಿತು.

ಈ ಉತ್ಸವದಲ್ಲಿ ತಾಳಿಕೋಟೆ ಪಟ್ಟಣ ಅಲ್ಲದೇ ಗುಲಬರ್ಗಾ, ಮುದ್ದೇಬಿಹಾಳ, ಹಿರೂರ, ಬೊಮ್ಮನಹಳ್ಳಿ, ಸುರಪೂರ, ನಾಲತವಾಡ, ಕೇಂಭಾವಿ, ಯಾತಗಿರಿ ಒಳಗೊಂಡು ಪ್ರಮುಖ ನಗರ ಪಟ್ಟಣಗಳಿಂದ ಸಮಾಜ ಬಾಂದವರು ಪಾಲ್ಗೊಂಡು ಶ್ರೀ ದೇವಿಯ ಮಹಾಪ್ರಸಾದ ಸೇವಿಸಿ ಪುನಿತರಾದರು.

ಈ ಉತ್ಸವದ ನೇತೃತ್ವವನ್ನು ತಾಳಿಕೋಟೆ ಗೋಂದಳಿ ಸಮಾಜದ ಅಧ್ಯಕ್ಷ ವಿಠ್ಠಲ ಸೂರ್ಯವಂಶಿ, ಉಪಾಧ್ಯಕ್ಷ ತುಕಾರಾಮ ಸೂರ್ಯವಂಶಿ, ಕಾರ್ಯದರ್ಶಿ ಶಿವಾಜಿ ಸೂರ್ಯವಂಶಿ, ರಾಜು ವಾಘ್ಮೋರೆ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅಶೋಕ ಪಾಟೀಲ, ಸದಾಶಿವ ಪಾಯಿಕ, ಸಾಬು ಮೋರೆ, ನಾಮದೇವ ಸೂರ್ಯವಂಶಿ, ಅಶೋಕ ಮುತಡಕರ, ಮೊದಲಾದವರು ವಹಿಸಿದ್ದರು.